ರಾಜಾಂಗಣದಲ್ಲಿ ಸೋಮವಾರ ಬನ್ನಂಜೆ ಗೋವಿಂದಾಚಾರ್ಯರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೆಲ ವರ್ಷಗಳ ಹಿಂದೆ ವಿಷ್ಣುವರ್ಧನ್ ಎರಡು ದಿನ ಬನ್ನಂಜೆ ಗೋವಿಂದಾಚಾರ್ಯರ ನಿವಾಸದಲ್ಲಿ ಉಳಿದಿದ್ದರು. ನಂತರ ಅವರ ಅಭಿನಯದ ಆಪ್ತಮಿತ್ರ ಸಿನಿಮಾ ತೆರೆಗೆ ಬಂತು. ಸಿನಿಮಾದ ಹೆಚ್ಚಿನ ದೃಶ್ಯಗಳಲ್ಲಿ ವಿಷ್ಣು, ಬನ್ನಂಜೆ ಅವರನ್ನು ಅನುಕರಿಸಿದ್ದು ಎದ್ದು ಕಾಣುತ್ತಿತ್ತು. ಹಿರೋವಿನಿಂದ ಅನುಕರಿಸಲ್ಪಟ್ಟ ಹೀರೋ ಗುರು ಬನ್ನಂಜೆ ಗೋವಿಂದಾಚಾರ್ಯರು’ ಎಂದು ಸ್ಮರಿಸಿದರು.