‘ನಮ್ಮದು ವಿಶ್ವಗೀತಾ ಪರ್ಯಾಯ‘ ಎಂದು ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಘೋಷಿಸಿದ್ದರು. ಅದಕ್ಕೆ ಪೂರಕ ಎಂಬಂತೆ ಮೆರವಣಿಗೆಯಲ್ಲಿ ಭಗವದ್ಗೀತೆ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಸ್ತಬ್ದಚಿತ್ರಗಳು ಹೆಚ್ಚಿಗೆ ಇದ್ದವು.
ಜೊತೆಗೆ ಕಲಾ ತಂಡಗಳ ಸೊಬಗು, ವಾದ್ಯಮೇಳಗಳ ನಿನಾದ, ಸಾಹಸ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದವು. ವಾಹನಗಳ ಮೇಲೆ ಅಳವಡಿಸಿದ್ದ ಪಲ್ಲಕ್ಕಿಯಲ್ಲಿ ಪುತ್ತಿಗೆ ಮಠದ ಹಿರಿಯ ಮತ್ತು ಕಿರಿಯ ಶ್ರೀಗಳು ಸಾಗಿದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಮೆರವಣಿಗೆಯ ವೈಭವ ಕಣ್ತುಂಬಿಕೊಂಡರು.