<p><strong>ಉಡುಪಿ</strong>: ಭಗವದ್ಗೀತೆಯು ಅತ್ಯಂತ ಶ್ರೇಷ್ಠ ಗ್ರಂಥವಾಗಿದ್ದು, ಅದು ವಿಶ್ವತೋಮುಖ ಸಂದೇಶ ನೀಡಿದೆ. ಅದರ ಒಂದೊಂದು ಶಬ್ದಗಳು ಕೂಡ ವಿಶಿಷ್ಟವಾದ ಸಂದೇಶವನ್ನು ನೀಡುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಮತ್ತು ಸಂತ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಯಾರು ಸಂದೇಶದಾಯಕರಾಗಿರುತ್ತಾರೋ ಅವರು ಉನ್ನತ ಸ್ಥಾನಕ್ಕೇರುತ್ತಾರೆ. ಯಾರಲ್ಲಿ ಯಾವ ಸಂದೇಶವೂ ಇರುವುದಿಲ್ಲವೋ ಅವರು ಉನ್ನತಿಗೇರಲು ಸಾಧ್ಯವಿಲ್ಲ ಎಂದರು.</p>.<p>ಯಾರು ಉತ್ತಮರು, ಯಾರು ಕೆಟ್ಟವರು ಎಂಬುದು ಭಗವಂತನನ್ನು ಆಧರಿಸಿ ನಿರ್ಧಾರವಾಗುತ್ತದೆ. ಸ್ವಭಾವತಾ ಒಳ್ಳೆಯವರಿದ್ದರೂ ಪ್ರಭಾವತಾ ಕೆಟ್ಟವರಾಗಿರುವವರನ್ನು ಕೂಡ ರಕ್ಷಣೆ ಮಾಡುವುದು ಬಹಳ ಮುಖ್ಯವಾದುದು ಎಂದು ಹೇಳಿದರು.</p>.<p>ಹರಿಕಥಾ ಕಲೆಯು ನಶಿಸಿ ಹೋಯಿತೆಂದು ನಾವು ತಿಳಿದುಕೊಂಡಾಗ ಹೊಸ ಹೊಸ ಪ್ರತಿಭೆಗಳು ಆ ಕ್ಷೇತ್ರಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.</p>.<p>ರುಕ್ಮಿಣಿ ಹಂಡೆ ಅವರು ಹರಿಕಥಾ ಕಲೆಯನ್ನು ಉಳಿಸಿ, ಬೆಳೆಸುವುದರಲ್ಲಿ ವಿಶೇಷ ಶ್ರಮ ವಹಿಸಿದ್ದಾರೆ. ಹಿಂದೆ ಹರಿಕಥಾ ಕ್ಷೇತ್ರಕ್ಕೆ ಪುರುಷರು ಮಾತ್ರ ಬರುತ್ತಿದ್ದರು. ಮಹಿಳೆಯರೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ರುಕ್ಮಿಣಿ ಅವರೇ ಸಾಕ್ಷಿ ಎಂದು ತಿಳಿಸಿದರು.</p>.<p>ಹರಿದಾಸ ಪರಂಪರೆ ಇನ್ನಷ್ಟು ಬೆಳೆಯಬೇಕಾಗಿದೆ. ಅದಕ್ಕಾಗಿ ಹೊಸ ಹರಿದಾಸರು ಆ ಕ್ಷೇತ್ರಕ್ಕೆ ಬರುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.<br><br>ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಹರಿಕಥಾ ಕಲಾವಿದೆ ರುಕ್ಮಿಣಿ ಹಂಡೆ ಇದ್ದರು.</p>.<p> ಹರಿಕಥಾ ಕಲಾವಿದೆ ರುಕ್ಮಿಣಿ ಹಂಡೆ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಹರಿದಾಸ ಪರಂಪರೆ ಉಳಿಸಲು ಕರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಭಗವದ್ಗೀತೆಯು ಅತ್ಯಂತ ಶ್ರೇಷ್ಠ ಗ್ರಂಥವಾಗಿದ್ದು, ಅದು ವಿಶ್ವತೋಮುಖ ಸಂದೇಶ ನೀಡಿದೆ. ಅದರ ಒಂದೊಂದು ಶಬ್ದಗಳು ಕೂಡ ವಿಶಿಷ್ಟವಾದ ಸಂದೇಶವನ್ನು ನೀಡುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಮತ್ತು ಸಂತ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಯಾರು ಸಂದೇಶದಾಯಕರಾಗಿರುತ್ತಾರೋ ಅವರು ಉನ್ನತ ಸ್ಥಾನಕ್ಕೇರುತ್ತಾರೆ. ಯಾರಲ್ಲಿ ಯಾವ ಸಂದೇಶವೂ ಇರುವುದಿಲ್ಲವೋ ಅವರು ಉನ್ನತಿಗೇರಲು ಸಾಧ್ಯವಿಲ್ಲ ಎಂದರು.</p>.<p>ಯಾರು ಉತ್ತಮರು, ಯಾರು ಕೆಟ್ಟವರು ಎಂಬುದು ಭಗವಂತನನ್ನು ಆಧರಿಸಿ ನಿರ್ಧಾರವಾಗುತ್ತದೆ. ಸ್ವಭಾವತಾ ಒಳ್ಳೆಯವರಿದ್ದರೂ ಪ್ರಭಾವತಾ ಕೆಟ್ಟವರಾಗಿರುವವರನ್ನು ಕೂಡ ರಕ್ಷಣೆ ಮಾಡುವುದು ಬಹಳ ಮುಖ್ಯವಾದುದು ಎಂದು ಹೇಳಿದರು.</p>.<p>ಹರಿಕಥಾ ಕಲೆಯು ನಶಿಸಿ ಹೋಯಿತೆಂದು ನಾವು ತಿಳಿದುಕೊಂಡಾಗ ಹೊಸ ಹೊಸ ಪ್ರತಿಭೆಗಳು ಆ ಕ್ಷೇತ್ರಕ್ಕೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.</p>.<p>ರುಕ್ಮಿಣಿ ಹಂಡೆ ಅವರು ಹರಿಕಥಾ ಕಲೆಯನ್ನು ಉಳಿಸಿ, ಬೆಳೆಸುವುದರಲ್ಲಿ ವಿಶೇಷ ಶ್ರಮ ವಹಿಸಿದ್ದಾರೆ. ಹಿಂದೆ ಹರಿಕಥಾ ಕ್ಷೇತ್ರಕ್ಕೆ ಪುರುಷರು ಮಾತ್ರ ಬರುತ್ತಿದ್ದರು. ಮಹಿಳೆಯರೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ರುಕ್ಮಿಣಿ ಅವರೇ ಸಾಕ್ಷಿ ಎಂದು ತಿಳಿಸಿದರು.</p>.<p>ಹರಿದಾಸ ಪರಂಪರೆ ಇನ್ನಷ್ಟು ಬೆಳೆಯಬೇಕಾಗಿದೆ. ಅದಕ್ಕಾಗಿ ಹೊಸ ಹರಿದಾಸರು ಆ ಕ್ಷೇತ್ರಕ್ಕೆ ಬರುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.<br><br>ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಹರಿಕಥಾ ಕಲಾವಿದೆ ರುಕ್ಮಿಣಿ ಹಂಡೆ ಇದ್ದರು.</p>.<p> ಹರಿಕಥಾ ಕಲಾವಿದೆ ರುಕ್ಮಿಣಿ ಹಂಡೆ ಅವರಿಗೆ ಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ ಹರಿದಾಸ ಪರಂಪರೆ ಉಳಿಸಲು ಕರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>