<p><strong>ಉಡುಪಿ: ಭ</strong>ಗವದ್ಗೀತೆ ಕೇವಲ ನ್ಯಾಯಾಲಯದಲ್ಲಿರಿಸುವ ಗ್ರಂಥವಲ್ಲ ಬದಲಾಗಿ ಹೃದಯದಲ್ಲಿರಿಸುವ ಗ್ರಂಥ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇಂದು ನಮ್ಮ ಮನೆಗಳಲ್ಲಿ ಟಿ.ವಿ., ಕಂಪ್ಯೂಟರ್ ಮೊದಲಾದವುಗಳಿವೆ ಆದರೆ ಭಗವದ್ಗೀತೆ, ಮಹಾಭಾರತ ಮೊದಲಾದ ಗ್ರಂಥಗಳಿಲ್ಲ. ಮನೆಗಳಲ್ಲಿ ಯಾವುದು ಇರಬೇಕೋ ಅದು ಇಂದು ಇಲ್ಲ ಎಂದರು.</p>.<p>ಸಂಸ್ಕಾರ, ಸಂಸ್ಕೃತಿ, ಮಾನವೀಯತೆ ಮುನ್ನಲೆಗೆ ಬರಬೇಕಿತ್ತು ಆದರೆ ಅವುಗಳು ಇಂದು ಹಿನ್ನೆಲೆಗೆ ಸರಿದಿವೆ ಎಂದು ಹೇಳಿದರು.</p>.<p>ಭಗವದ್ಗೀತೆಯು ಜಗತ್ತಿನ ಮೊದಲ ಮನೋವಿಜ್ಞಾನ ಗ್ರಂಥ ಮತ್ತು ಶ್ರೀಕೃಷ್ಣ ಮೊದಲ ಮನೋವಿಜ್ಞಾನಿ. ಭಗವದ್ಗೀತೆಯನ್ನು ಓದಿದರೆ ಸಾಲದು. ಅದರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಪ್ರಯತ್ನ ಅತೀ ಮುಖ್ಯ. ಪ್ರಯತ್ನವಿದ್ದರೆ ಫಲ ಖಂಡಿತವಾಗಿಯೂ ಸಿಗುತ್ತದೆ ಎಂದರು.</p>.<p>ನಾವು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಆದರೆ ಇಂದು ಕುಟುಂಬಗಳಲ್ಲೂ ಕೃತಕ ಪ್ರೀತಿ ಕಂಡುಬರುತ್ತಿರುವುದು ವಿಪರ್ಯಾಸ ಎಂದು ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯು ತಂದೆ–ತಾಯಿ, ಗುರು– ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯು ಅಹಂಕಾರವನ್ನು ಕಲಿಸುತ್ತದೆ ಎಂದು ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.</p>.<div><blockquote>- ಯಾವ ಪರಿಸರದಲ್ಲಿ ನಾವು ಬೆಳೆಯುತ್ತೇವೊ ಅದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸಾಧಕನಾದವನು ಸಜ್ಜನರ ಸಹವಾಸ ಮಾಡಬೇಕು </blockquote><span class="attribution">ಸುಗುಣೇಂದ್ರತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: ಭ</strong>ಗವದ್ಗೀತೆ ಕೇವಲ ನ್ಯಾಯಾಲಯದಲ್ಲಿರಿಸುವ ಗ್ರಂಥವಲ್ಲ ಬದಲಾಗಿ ಹೃದಯದಲ್ಲಿರಿಸುವ ಗ್ರಂಥ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಬೃಹತ್ ಗೀತೋತ್ಸವದ ಅಂಗವಾಗಿ ಕೃಷ್ಣಮಠದ ರಾಜಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂತ ಸಂದೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಇಂದು ನಮ್ಮ ಮನೆಗಳಲ್ಲಿ ಟಿ.ವಿ., ಕಂಪ್ಯೂಟರ್ ಮೊದಲಾದವುಗಳಿವೆ ಆದರೆ ಭಗವದ್ಗೀತೆ, ಮಹಾಭಾರತ ಮೊದಲಾದ ಗ್ರಂಥಗಳಿಲ್ಲ. ಮನೆಗಳಲ್ಲಿ ಯಾವುದು ಇರಬೇಕೋ ಅದು ಇಂದು ಇಲ್ಲ ಎಂದರು.</p>.<p>ಸಂಸ್ಕಾರ, ಸಂಸ್ಕೃತಿ, ಮಾನವೀಯತೆ ಮುನ್ನಲೆಗೆ ಬರಬೇಕಿತ್ತು ಆದರೆ ಅವುಗಳು ಇಂದು ಹಿನ್ನೆಲೆಗೆ ಸರಿದಿವೆ ಎಂದು ಹೇಳಿದರು.</p>.<p>ಭಗವದ್ಗೀತೆಯು ಜಗತ್ತಿನ ಮೊದಲ ಮನೋವಿಜ್ಞಾನ ಗ್ರಂಥ ಮತ್ತು ಶ್ರೀಕೃಷ್ಣ ಮೊದಲ ಮನೋವಿಜ್ಞಾನಿ. ಭಗವದ್ಗೀತೆಯನ್ನು ಓದಿದರೆ ಸಾಲದು. ಅದರ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಬದುಕಿನಲ್ಲಿ ಪ್ರಯತ್ನ ಅತೀ ಮುಖ್ಯ. ಪ್ರಯತ್ನವಿದ್ದರೆ ಫಲ ಖಂಡಿತವಾಗಿಯೂ ಸಿಗುತ್ತದೆ ಎಂದರು.</p>.<p>ನಾವು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಆದರೆ ಇಂದು ಕುಟುಂಬಗಳಲ್ಲೂ ಕೃತಕ ಪ್ರೀತಿ ಕಂಡುಬರುತ್ತಿರುವುದು ವಿಪರ್ಯಾಸ ಎಂದು ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿಯು ತಂದೆ–ತಾಯಿ, ಗುರು– ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸುತ್ತಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯು ಅಹಂಕಾರವನ್ನು ಕಲಿಸುತ್ತದೆ ಎಂದು ಹೇಳಿದರು.</p>.<p>ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.</p>.<div><blockquote>- ಯಾವ ಪರಿಸರದಲ್ಲಿ ನಾವು ಬೆಳೆಯುತ್ತೇವೊ ಅದು ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸಾಧಕನಾದವನು ಸಜ್ಜನರ ಸಹವಾಸ ಮಾಡಬೇಕು </blockquote><span class="attribution">ಸುಗುಣೇಂದ್ರತೀರ್ಥ ಸ್ವಾಮೀಜಿ ಪರ್ಯಾಯ ಪುತ್ತಿಗೆ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>