<p><strong>ಉಡುಪಿ</strong>: ಆಯುರ್ವೇದ ಕ್ಷೇತ್ರವು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಡ್ಡಿಕೊಳ್ಳಬೇಕು. ಇಲ್ಲದಿದ್ದರೆ ಸವಕಲು ನಾಣ್ಯದಂತಾಗಬಹುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ ಹೇಳಿದರು.</p>.<p>ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ನಡೆದ ಮಣಿಪಾಲದ ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಸೈನ್ಸಸ್ ಕಾಲೇಜಿನ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.</p>.<p>ನಮ್ಮ ದೇಶದ ಆಯುರ್ವೇದವು ಮೊದಲ ವಿಜ್ಞಾನವಾಗಿದೆ. ಅನಂತರ ಎಲ್ಲಾ ವಿಜ್ಞಾನಗಳು ಹುಟ್ಟಿಕೊಂಡಿವೆ. ಆದರೆ ಆಯುರ್ವೇದದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯದ ಕಾರಣ ಈ ಚಿಕಿತ್ಸಾ ವಿಧಾನವು ಮುಖ್ಯವಾಹಿನಿಗೆ ಬಂದಿಲ್ಲ ಎಂದರು.</p>.<p>ಅನನ್ಯವಾದ ಆಯುರ್ವೇದ ಚಿಕಿತ್ಸಾ ವಿಧಾನದ ಮಹತ್ವವನ್ನು ಅರಿಯದೆ, ನಿರ್ಲಕ್ಷಿಸಲಾಗಿದೆ. ಈ ಪದ್ಧತಿಯ ಜೊತೆಗೆ ಗುರುತಿಸಿಕೊಂಡಿದ್ದ ಯೋಗ ಮತ್ತು ಧ್ಯಾನವು ಇಂದು ಪ್ರತ್ಯೇಕವಾಗಿ ವಿಶ್ವಮಟ್ಟದಲ್ಲಿ ಬೆಳೆದಿದೆ ಮತ್ತು ನಮ್ಮ ಕೈತಪ್ಪಿ ಹೋಗಿದೆ. ಯೋಗ, ಧ್ಯಾನ ಸೇರಿದಂತೆ ಎಲ್ಲವನ್ನೂ ಒಳಗೊಂಡ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಹೊಸ ಆವಿಷ್ಕಾರಗಳು ನಡೆದಾಗ ಮಾತ್ರ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.</p>.<p>ಆಯುರ್ವೇದದ ಹೆಸರಿನಲ್ಲಿ ಹೆಲ್ತ್ ರೆಸಾರ್ಟ್ಗಳು ಆರಂಭವಾಗಿ ಚಿಕಿತ್ಸಾ ವಿಧಾನವು ವಾಣಿಜ್ಯ ಉದ್ದೇಶದಿಂದ ಬಳಕೆಯಾಗುತ್ತಿದೆ. ಇದು ಆಯುರ್ವೇದ ಆಸ್ಪತ್ರೆಗಳ ಮೂಲಕ ನಡೆಯಬೇಕಿತ್ತು ಎಂದರು.</p>.<p>ಕಾರ್ಯಕ್ರಮದಲ್ಲಿ ಮೋಹನ್ ಆಳ್ವ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.</p>.<p>ಕಾಲೇಜು ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಮಾತನಾಡಿ, ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಪುರಾತನ ಚಿಕಿತ್ಸಾ ಪದ್ಧತಿಯ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದ ಔಷಧಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.</p>.<p>ಶ್ರದ್ಧಾ ಶೆಟ್ಟಿ, ಪ್ರೀತಿ ಪಾಟೀಲ್ ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಎಂ. ವಿಜಯಭಾನು ಶೆಟ್ಟಿ, ಡಾ. ಗುರುರಾಜ್ ಉಪಸ್ಥಿತರಿದ್ದರು. ಡಾ. ರವಿಶಂಕರ್ ಸ್ವಾಗತಿಸಿದರು.</p>.<p>Quote - ಮೂಢನಂಬಿಕೆಗಳು ಅಳಿಯಬೇಕು ನಂಬಿಕೆಗಳನ್ನು ಬಳಸಿ ಆಯುರ್ವೇದ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕು. ಹಾಗಿದ್ದರೆ ಮಾತ್ರ ಇತರ ವಿಜ್ಞಾನಗಳ ಜೊತೆಗೆ ಪೈಪೋಟಿ ನೀಡಬಹುದು ಡಾ. ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಆಯುರ್ವೇದ ಕ್ಷೇತ್ರವು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಡ್ಡಿಕೊಳ್ಳಬೇಕು. ಇಲ್ಲದಿದ್ದರೆ ಸವಕಲು ನಾಣ್ಯದಂತಾಗಬಹುದು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಮೋಹನ್ ಆಳ್ವ ಹೇಳಿದರು.</p>.<p>ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ನಡೆದ ಮಣಿಪಾಲದ ಮುನಿಯಾಲ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದ ಸೈನ್ಸಸ್ ಕಾಲೇಜಿನ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.</p>.<p>ನಮ್ಮ ದೇಶದ ಆಯುರ್ವೇದವು ಮೊದಲ ವಿಜ್ಞಾನವಾಗಿದೆ. ಅನಂತರ ಎಲ್ಲಾ ವಿಜ್ಞಾನಗಳು ಹುಟ್ಟಿಕೊಂಡಿವೆ. ಆದರೆ ಆಯುರ್ವೇದದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯದ ಕಾರಣ ಈ ಚಿಕಿತ್ಸಾ ವಿಧಾನವು ಮುಖ್ಯವಾಹಿನಿಗೆ ಬಂದಿಲ್ಲ ಎಂದರು.</p>.<p>ಅನನ್ಯವಾದ ಆಯುರ್ವೇದ ಚಿಕಿತ್ಸಾ ವಿಧಾನದ ಮಹತ್ವವನ್ನು ಅರಿಯದೆ, ನಿರ್ಲಕ್ಷಿಸಲಾಗಿದೆ. ಈ ಪದ್ಧತಿಯ ಜೊತೆಗೆ ಗುರುತಿಸಿಕೊಂಡಿದ್ದ ಯೋಗ ಮತ್ತು ಧ್ಯಾನವು ಇಂದು ಪ್ರತ್ಯೇಕವಾಗಿ ವಿಶ್ವಮಟ್ಟದಲ್ಲಿ ಬೆಳೆದಿದೆ ಮತ್ತು ನಮ್ಮ ಕೈತಪ್ಪಿ ಹೋಗಿದೆ. ಯೋಗ, ಧ್ಯಾನ ಸೇರಿದಂತೆ ಎಲ್ಲವನ್ನೂ ಒಳಗೊಂಡ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಹೊಸ ಆವಿಷ್ಕಾರಗಳು ನಡೆದಾಗ ಮಾತ್ರ ಈ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.</p>.<p>ಆಯುರ್ವೇದದ ಹೆಸರಿನಲ್ಲಿ ಹೆಲ್ತ್ ರೆಸಾರ್ಟ್ಗಳು ಆರಂಭವಾಗಿ ಚಿಕಿತ್ಸಾ ವಿಧಾನವು ವಾಣಿಜ್ಯ ಉದ್ದೇಶದಿಂದ ಬಳಕೆಯಾಗುತ್ತಿದೆ. ಇದು ಆಯುರ್ವೇದ ಆಸ್ಪತ್ರೆಗಳ ಮೂಲಕ ನಡೆಯಬೇಕಿತ್ತು ಎಂದರು.</p>.<p>ಕಾರ್ಯಕ್ರಮದಲ್ಲಿ ಮೋಹನ್ ಆಳ್ವ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.</p>.<p>ಕಾಲೇಜು ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್ ಮಾತನಾಡಿ, ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಪುರಾತನ ಚಿಕಿತ್ಸಾ ಪದ್ಧತಿಯ ಕುರಿತು ಅಧ್ಯಯನ ಮಾಡಲಾಗುತ್ತಿದೆ. ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಸಂಬಂಧಿಸಿದ ಔಷಧಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.</p>.<p>ಶ್ರದ್ಧಾ ಶೆಟ್ಟಿ, ಪ್ರೀತಿ ಪಾಟೀಲ್ ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಎಂ. ವಿಜಯಭಾನು ಶೆಟ್ಟಿ, ಡಾ. ಗುರುರಾಜ್ ಉಪಸ್ಥಿತರಿದ್ದರು. ಡಾ. ರವಿಶಂಕರ್ ಸ್ವಾಗತಿಸಿದರು.</p>.<p>Quote - ಮೂಢನಂಬಿಕೆಗಳು ಅಳಿಯಬೇಕು ನಂಬಿಕೆಗಳನ್ನು ಬಳಸಿ ಆಯುರ್ವೇದ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಸಾಧಿಸಬೇಕು. ಹಾಗಿದ್ದರೆ ಮಾತ್ರ ಇತರ ವಿಜ್ಞಾನಗಳ ಜೊತೆಗೆ ಪೈಪೋಟಿ ನೀಡಬಹುದು ಡಾ. ಮೋಹನ ಆಳ್ವ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>