ಉಡುಪಿ: ಮಣಿಪಾಲದ ಹಳೆ ಟ್ಯಾಪ್ಮಿ ಕಟ್ಟಡದಲ್ಲಿ ಸೆ.7ರಂದು ಮಧ್ಯಾಹ್ನ 3.15ಕ್ಕೆಪತ್ರಕರ್ತ, ಕಲಾವಿದರಾದ ರಶೀದ್ ಕಪ್ಪನ್ ಜತೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ರಶೀದ್ ಕಪ್ಪನ್ ಪತ್ರಕರ್ತ, ಗ್ರಾಫಿಕ್ ಕಲಾವಿದ, ಅಂಕಣಕಾರರಾಗಿ ಗುರುತಿಸಿಕೊಂಡಿದ್ದು, ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಮತ್ತು ಎಕನಾಮಿಕ್ ಟೈಮ್ಸ್ನಲ್ಲಿ ಕೆಲಸ ಮಾಡಿದ್ದಾರೆ.