<p><strong>ಬ್ರಹ್ಮಾವರ</strong>: ‘ಪಿಡಿಒಗಳು ಸಾಮಾನ್ಯ ಸಭೆಯ ನಿರ್ಣಯಗಳಿಗೆ ವ್ಯತಿರಿಕ್ತವಾಗಿ, ಕೆಲವೊಮ್ಮೆ ಸಾಮಾನ್ಯ ಸಭೆಯ ಗಮನಕ್ಕೆ ತಾರದೆ ಗ್ರಾ.ಪಂ ವ್ಯಾಪ್ತಿಯ ಪ್ರಮುಖ ಪರವಾನಗಿ ನೀಡುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ’ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.</p>.<p>ಬ್ರಹ್ಮಾವರದಲ್ಲಿ ಬುಧವಾರ ನಡೆದ ತಾಲ್ಲೂಕು ವ್ಯಾಪ್ತಿಯ ಕೆ.ಡಿ.ಪಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಇತ್ತೀಚೆಗೆ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಮ್ ಸ್ಟೇ, ಹಾವಂಜೆಯಲ್ಲಿ ಕಟ್ಟಡವೊಂದಕ್ಕೆ ಪರವಾನಗಿ, ಆರೂರಿನಲ್ಲಿ ಜಲ್ಜೀವನ್ ಮಿಷನ್ ಕಾಮಗಾರಿಗೆ ಈ ರೀತಿ ಶಿಫಾರಸ್ಸು, ಪರವಾನಗಿ ನೀಡಿ ಸಾಕಷ್ಟು ಸಮಸ್ಯೆಯಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿದ್ದರೆ ಅಧಿಕಾರಿಗಳು ನಮಗೆ ದಾಖಲೆ ನೀಡಬೇಕು. ಇಲ್ಲವಾದರೆ ಮುಂದೆ ಯಾವುದೇ ಪರವಾನಗಿ ನೀಡಬೇಕಿದ್ದರೂ, ಗ್ರಾ.ಪಂ ಸಾಮಾನ್ಯ ಸಭೆಯ ಅನುಮೋದನೆ ಇಲ್ಲದೆ ನೀಡಬಾರದು’ ಎಂದು ತಿಳಿಸಿದರು.</p>.<p>ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ‘ಬ್ರಹ್ಮಾವರ ಸೇರಿದಂತೆ ಕುಂದಾಪುರ, ಹೆಬ್ರಿ ತಾ.ಪಂ. ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಕಡತ ವಿಲೇವಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ನೂರಾರು ಅರ್ಜಿಗಳಿದ್ದರೂ ಹತ್ತು ಹಕ್ಕುಪತ್ರವನ್ನು ಕೂಡ ಇದುವರೆಗೆ ನೀಡಲಾಗುತ್ತಿಲ್ಲ, ಫಲಾನುಭವಿಗಳು ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ತಹಶೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು. ಅಕ್ರಮ–ಸಕ್ರಮ ಸಮಿತಿಯ ಸಭೆಯನ್ನು ಶೀಘ್ರವಾಗಿ ಕರೆದು ಕಡತ ವಿಲೇವಾರಿ ಮಾಡಬೇಕು. ಪ್ರತಿವಾರ ಸಭೆ ನಡೆಸಿದರೂ ತಾನು ಹಾಜರಾಗಲು ಸಿದ್ಧವಿದ್ದೇನೆ’ ಎಂದು ತಿಳಿಸಿದರು.</p>.<p>ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಸುನೀತಾ ಶೆಟ್ಟಿ ಮಾತನಾಡಿ, ‘ಬ್ರಹ್ಮಾವರ ಭಾಗದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಒಯ್ದರೆ, ಅಲ್ಲಿ ಸರಿಯಾಗಿ ಸ್ಪಂದನೆ ನೀಡುವುದಿಲ್ಲ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಿ ಸಮಸ್ಯೆ ಸರಿಪಡಿಸಿ ಹಾಗೂ ಬೆಳೆ ವಿಮೆ ನೋಂದಣಿಗೆ ಜಿಲ್ಲೆಯಲ್ಲಿ ನೋಂದಣಿ ಅವಧಿ ಕಡಿಮೆ ಇರುವ ಬಗ್ಗೆ’ ಗಮನ ಸೆಳೆದರು.</p>.<p>ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ತಾ.ಪಂ. ಆಡಳಿತಾಧಿಕಾರಿ ಕ್ಷಮಾ ಪಾಟೀಲ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.</p>.<p>ಬಾರ್ಕೂರು ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಕುಮಾರ್ ನಿರೂಪಿಸಿದರು.</p>.<p> ಅಕ್ರಮ-ಸಕ್ರಮ ಕಡತ ವಿಲೇವಾರಿ ವಿಳಂಬ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗೆ ಆಗ್ರಹ ಕಟ್ಟಡ ಪರವಾನಗಿಗೆ ಸೂಕ್ತ ದಾಖಲೆ ಅಗತ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಹ್ಮಾವರ</strong>: ‘ಪಿಡಿಒಗಳು ಸಾಮಾನ್ಯ ಸಭೆಯ ನಿರ್ಣಯಗಳಿಗೆ ವ್ಯತಿರಿಕ್ತವಾಗಿ, ಕೆಲವೊಮ್ಮೆ ಸಾಮಾನ್ಯ ಸಭೆಯ ಗಮನಕ್ಕೆ ತಾರದೆ ಗ್ರಾ.ಪಂ ವ್ಯಾಪ್ತಿಯ ಪ್ರಮುಖ ಪರವಾನಗಿ ನೀಡುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿದೆ’ ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದರು.</p>.<p>ಬ್ರಹ್ಮಾವರದಲ್ಲಿ ಬುಧವಾರ ನಡೆದ ತಾಲ್ಲೂಕು ವ್ಯಾಪ್ತಿಯ ಕೆ.ಡಿ.ಪಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಇತ್ತೀಚೆಗೆ ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಮ್ ಸ್ಟೇ, ಹಾವಂಜೆಯಲ್ಲಿ ಕಟ್ಟಡವೊಂದಕ್ಕೆ ಪರವಾನಗಿ, ಆರೂರಿನಲ್ಲಿ ಜಲ್ಜೀವನ್ ಮಿಷನ್ ಕಾಮಗಾರಿಗೆ ಈ ರೀತಿ ಶಿಫಾರಸ್ಸು, ಪರವಾನಗಿ ನೀಡಿ ಸಾಕಷ್ಟು ಸಮಸ್ಯೆಯಾಗಿದೆ. ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿದ್ದರೆ ಅಧಿಕಾರಿಗಳು ನಮಗೆ ದಾಖಲೆ ನೀಡಬೇಕು. ಇಲ್ಲವಾದರೆ ಮುಂದೆ ಯಾವುದೇ ಪರವಾನಗಿ ನೀಡಬೇಕಿದ್ದರೂ, ಗ್ರಾ.ಪಂ ಸಾಮಾನ್ಯ ಸಭೆಯ ಅನುಮೋದನೆ ಇಲ್ಲದೆ ನೀಡಬಾರದು’ ಎಂದು ತಿಳಿಸಿದರು.</p>.<p>ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ‘ಬ್ರಹ್ಮಾವರ ಸೇರಿದಂತೆ ಕುಂದಾಪುರ, ಹೆಬ್ರಿ ತಾ.ಪಂ. ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಕಡತ ವಿಲೇವಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ನೂರಾರು ಅರ್ಜಿಗಳಿದ್ದರೂ ಹತ್ತು ಹಕ್ಕುಪತ್ರವನ್ನು ಕೂಡ ಇದುವರೆಗೆ ನೀಡಲಾಗುತ್ತಿಲ್ಲ, ಫಲಾನುಭವಿಗಳು ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ಈ ನಿಟ್ಟಿನಲ್ಲಿ ತಹಶೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು. ಅಕ್ರಮ–ಸಕ್ರಮ ಸಮಿತಿಯ ಸಭೆಯನ್ನು ಶೀಘ್ರವಾಗಿ ಕರೆದು ಕಡತ ವಿಲೇವಾರಿ ಮಾಡಬೇಕು. ಪ್ರತಿವಾರ ಸಭೆ ನಡೆಸಿದರೂ ತಾನು ಹಾಜರಾಗಲು ಸಿದ್ಧವಿದ್ದೇನೆ’ ಎಂದು ತಿಳಿಸಿದರು.</p>.<p>ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಸುನೀತಾ ಶೆಟ್ಟಿ ಮಾತನಾಡಿ, ‘ಬ್ರಹ್ಮಾವರ ಭಾಗದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ಒಯ್ದರೆ, ಅಲ್ಲಿ ಸರಿಯಾಗಿ ಸ್ಪಂದನೆ ನೀಡುವುದಿಲ್ಲ. ಇದರಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಿ ಸಮಸ್ಯೆ ಸರಿಪಡಿಸಿ ಹಾಗೂ ಬೆಳೆ ವಿಮೆ ನೋಂದಣಿಗೆ ಜಿಲ್ಲೆಯಲ್ಲಿ ನೋಂದಣಿ ಅವಧಿ ಕಡಿಮೆ ಇರುವ ಬಗ್ಗೆ’ ಗಮನ ಸೆಳೆದರು.</p>.<p>ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ, ತಾ.ಪಂ. ಆಡಳಿತಾಧಿಕಾರಿ ಕ್ಷಮಾ ಪಾಟೀಲ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಇಬ್ರಾಹಿಂಪುರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.</p>.<p>ಬಾರ್ಕೂರು ಗ್ರಾಮ ಪಂಚಾಯಿತಿ ಪಿಡಿಒ ಮಹೇಶ್ ಕುಮಾರ್ ನಿರೂಪಿಸಿದರು.</p>.<p> ಅಕ್ರಮ-ಸಕ್ರಮ ಕಡತ ವಿಲೇವಾರಿ ವಿಳಂಬ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆಗೆ ಆಗ್ರಹ ಕಟ್ಟಡ ಪರವಾನಗಿಗೆ ಸೂಕ್ತ ದಾಖಲೆ ಅಗತ್ಯ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>