ಕೃಷ್ಣಮಠದ ರಾಜಾಂಗಣದಲ್ಲಿ ಗುರುವಾರ ನಡೆದ ಚಿಣ್ಣರ ಮಾಸೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘2002ರಲ್ಲಿ ಪಲಿಮಾರು ಮಠದಿಂದ ಉಡುಪಿ ನಗರದ ಆಸುಪಾಸಿನ ಶಾಲೆಗಳಿಗೆ ಗಂಜಿ ಊಟ ಪೂರೈಸುವ ಕಾರ್ಯಕ್ರಮ ಆರಂಭಿಸಿದರು. ಇದು ದೇಶದ ಕೋಟ್ಯಂತರ ಮಕ್ಕಳ ಹೊಟ್ಟೆ ತುಂಬಿಸುವ ಅಕ್ಷರ ದಾಸೋಹ ಯೋಜನೆಗೆ ಪ್ರೇರಣೆಯಾಯಿತು ಎಂದರು.