ಈ ವರ್ಷ ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಭತ್ತದ ಕೃಷಿಗೆ ನೀರೇ ಪ್ರಧಾನವಾಗಿರುವುದರಿಂದ ಕೃಷಿ ಭೂಮಿಯಲ್ಲಿ ನೀರು ನಿಲ್ಲುವಷ್ಟು ಮಳೆ ಬರಬೇಕು. ಭತ್ತದ ಪೈರಿಗೂ ಹೆಚ್ಚು ನೀರು ಅವಶ್ಯಕತೆ ಇರುವುದರಿಂದ ಉತ್ತಮ ಮಳೆಯಾದಷ್ಟೆ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ.–ಶಶಿಧರ್ ಕೃಷಿಕ
ಕರಾವಳಿಯಲ್ಲಿ ಭತ್ತದ ಕೃಷಿ ಸವಾಲಾಗಿರುವ ಮಧ್ಯೆಯೇ ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಈ ವರ್ಷ ಸರ್ಕಾರ ಬಿತ್ತನೆ ಬೀಜದ ದರವನ್ನು ಕೆ.ಜಿಗೆ 9.50 ಹೆಚ್ಚಿಸಿರುವುದು ಸಣ್ಣ ರೈತರಿಗೆ ಹೊಡೆತ–ವಿಶ್ವನಾಥ್ ಶೆಟ್ಟಿ ಕೃಷಿಕ
ಕೆಲವು ವರ್ಷಗಳಿಂದ ಭತ್ತದ ಕೃಷಿಗೆ ಸಮರ್ಪಕ ನೀರು ಸಾಲದೆ ಇಳುವರಿ ಕುಸಿತವಾಗುತ್ತಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ.–ಶ್ರೀನಿವಾಸ್ ಕೃಷಿಕ
ಮೇನಲ್ಲಿ ಜಿಲ್ಲೆಯಲ್ಲಿ ಉಳುಮೆ ನೇಜಿ ಸಿದ್ಧತೆ ಪ್ರಕ್ರಿಯೆ ನಡೆಯುತ್ತದೆ. ಜೂನ್ನಲ್ಲಿ ನಾಟಿ ಕಾರ್ಯ ಆರಂಭವಾಗುತ್ತದೆ. ಈ ವರ್ಷ ಮೇ ಅಂತ್ಯವಾಗುತ್ತಾ ಬಂದರೂ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಬಿರುಸುಪಡೆದಿಲ್ಲ. –ಗುರುದತ್ ಕೃಷಿಕ
ಭತ್ತ ಬಿತ್ತನೆ ಗುರಿ (ಹೆಕ್ಟೇರ್ಗಳಲ್ಲಿ) ಉಡುಪಿ;16800 ಕುಂದಾಪುರ;13500 ಕಾರ್ಕಳ;6209 ಒಟ್ಟು;36509
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.