ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಉಡುಪಿ | ಮುಂಗಾರು ಪೂರ್ವ ಮಳೆ ಕೊರತೆ: ಕೃಷಿಗೆ ಹಿನ್ನಡೆ

Published : 20 ಮೇ 2024, 7:27 IST
Last Updated : 20 ಮೇ 2024, 7:27 IST
ಫಾಲೋ ಮಾಡಿ
Comments
ಈ ವರ್ಷ ಮುಂಗಾರು ಪೂರ್ವ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿದ್ದಿಲ್ಲ. ಭತ್ತದ ಕೃಷಿಗೆ ನೀರೇ ಪ್ರಧಾನವಾಗಿರುವುದರಿಂದ ಕೃಷಿ ಭೂಮಿಯಲ್ಲಿ ನೀರು ನಿಲ್ಲುವಷ್ಟು ಮಳೆ ಬರಬೇಕು. ಭತ್ತದ ಪೈರಿಗೂ ಹೆಚ್ಚು ನೀರು ಅವಶ್ಯಕತೆ ಇರುವುದರಿಂದ ಉತ್ತಮ ಮಳೆಯಾದಷ್ಟೆ ಕೃಷಿ ಚಟುವಟಿಕೆಗಳು ಬಿರುಸುಗೊಳ್ಳುತ್ತವೆ.
–ಶಶಿಧರ್‌ ಕೃಷಿಕ
ಕರಾವಳಿಯಲ್ಲಿ ಭತ್ತದ ಕೃಷಿ ಸವಾಲಾಗಿರುವ ಮಧ್ಯೆಯೇ ಮಳೆ ಕಣ್ಣಾಮುಚ್ಚಾಲೆ ಆಟವಾಡುತ್ತಿದೆ. ಈ ವರ್ಷ ಸರ್ಕಾರ ಬಿತ್ತನೆ ಬೀಜದ ದರವನ್ನು ಕೆ.ಜಿಗೆ 9.50 ಹೆಚ್ಚಿಸಿರುವುದು ಸಣ್ಣ ರೈತರಿಗೆ ಹೊಡೆತ
–ವಿಶ್ವನಾಥ್ ಶೆಟ್ಟಿ ಕೃಷಿಕ
ಕೆಲವು ವರ್ಷಗಳಿಂದ ಭತ್ತದ ಕೃಷಿಗೆ ಸಮರ್ಪಕ ನೀರು ಸಾಲದೆ ಇಳುವರಿ ಕುಸಿತವಾಗುತ್ತಿದೆ. ಅತಿವೃಷ್ಟಿ ಅನಾವೃಷ್ಟಿಯಿಂದ ರೈತರು ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ.
–ಶ್ರೀನಿವಾಸ್‌ ಕೃಷಿಕ
ಮೇನಲ್ಲಿ ಜಿಲ್ಲೆಯಲ್ಲಿ ಉಳುಮೆ ನೇಜಿ ಸಿದ್ಧತೆ ಪ್ರಕ್ರಿಯೆ ನಡೆಯುತ್ತದೆ. ಜೂನ್‌ನಲ್ಲಿ ನಾಟಿ ಕಾರ್ಯ ಆರಂಭವಾಗುತ್ತದೆ. ಈ ವರ್ಷ ಮೇ ಅಂತ್ಯವಾಗುತ್ತಾ ಬಂದರೂ ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಬಿರುಸುಪಡೆದಿಲ್ಲ. ‍
–ಗುರುದತ್‌ ಕೃಷಿಕ
ಕಾರ್ಕಳ; ಆರಂಭಗೊಳ್ಳದ ಕೃಷಿ ಚಟುವಟಿಕೆ
ಕಾರ್ಕಳ ತಾಲ್ಲೂಕಿನಲ್ಲಿ ಮೇ ತಿಂಗಳು ಅಂತ್ಯವಾಗುತ್ತಾ ಬಂದರೂ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿಲ್ಲ. ಇಲ್ಲಿನ ರೈತಾಪಿ ವರ್ಗ ಮುಖ್ಯ ಬೆಳೆಯಾಗಿ ಭತ್ತದ ಬೇಸಾಯವನ್ನೇ ಮಾಡುತ್ತಿದ್ದು ಭತ್ತ ಕೃಷಿಗೆ ಅಗತ್ಯವಿರುವಷ್ಟು ನೀರು ಲಭ್ಯವಿಲ್ಲದ ಪರಿಣಾಮ ನಾಟಿ ಕಾರ್ಯ ಆರಂಭಗೊಂಡಿಲ್ಲ. ಕೃಷಿಕರು ಮಳೆಯ ನಿರೀಕ್ಷೆಯಲ್ಲಿದ್ದು ಉತ್ತಮ ಮಳೆ ಸುರಿದರೆ ಭೂಮಿ ಹಸನುಗೊಂಡು ನಂತರ ಬಿತ್ತನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಬಾವಿ ಕೆರೆ ಅಥವಾ ನದಿ ನೀರಿನ ಸೌಲಭ್ಯ ಇದ್ದವರು ಮಾತ್ರ ಕೃಷಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಭತ್ತ ಬಿತ್ತನೆ ಗುರಿ (ಹೆಕ್ಟೇರ್‌ಗಳಲ್ಲಿ) ಉಡುಪಿ;16800 ಕುಂದಾಪುರ;13500 ಕಾರ್ಕಳ;6209 ಒಟ್ಟು;36509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT