<p><strong>ಉಡುಪಿ:</strong> ಕೌಶಲ ಆಧಾರಿತ ಶಿಕ್ಷಣ ಬದುಕಿಗೆ ಅಗತ್ಯ. ಆದರೆ, ನಮ್ಮ ಶಾಲಾ ಕಾಲೇಜುಗಳಲ್ಲಿ ಇಂತಹ ಶಿಕ್ಷಣವನ್ನು ನೀಡುತ್ತಿಲ್ಲ. ನಾವು ಅನ್ನ, ಅರಿವು ಆಸರೆಗಾಗಿ ವಿವಿಧ ಕಂಪನಿಗಳ ಕೈಕೆಳಗೆ ಹೋದ ಪರಿಣಾಮವಾಗಿ ಸೋಮಾರಿಗಳಾಗಿದ್ದೇವೆ ಎಂದು ಜನಪದ ಸೇವಾ ಟ್ರಸ್ಟ್ನ ಸಂತೋಷ ಕೌಲಗಿ ಹೇಳಿದರು.</p>.<p>ಕದಿಕೆ ಟ್ರಸ್ಟ್ ಮತ್ತು ಸೆಲ್ಕೊ ಇಂಡಿಯಾ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಾವು ಕೌಶಲಗಳನ್ನು ಯಂತ್ರಗಳಿಗೆ ಧಾರೆ ಎರೆದು ಕೊಟ್ಟಿದ್ದೇವೆ. ಈಗ ಕೃತಕ ಬುದ್ಧಿಮತ್ತೆಯ ಅನುಷ್ಠಾನದಿಂದ ನಾವು ನಮ್ಮೊಳಗಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದರು.</p>.<p>ನೇಕಾರಿಕೆಯನ್ನು ಸರ್ಕಾರವೇ ಕೊಂದು ಹಾಕಿದೆ. ಖಾದಿ ಬಟ್ಟೆಯ ಮೇಲೂ ಜಿಎಸ್ಟಿ ಹಾಕುವ ಮೂಲಕ ನೇಕಾರರನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದೆ. ನೇಕಾರರು ಹೊಸತನಕ್ಕೆ ಇನ್ನೂ ತೆರೆದುಕೊಳ್ಳದ ಕಾರಣ ಹಿಂದೆಯೇ ಉಳಿದಿದ್ದಾರೆ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ನೇಕಾರಿಕೆಯಲ್ಲಿನ ಜೀವಮಾನದ ಸಾಧನೆಗಾಗಿ ಸೋಮಪ್ಪ ಜತ್ತನ್ನ ಹಾಗೂ ಸಂಜೀವ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನಾವು ಕದಿಕೆ ಟ್ರಸ್ಟ್ ಆರಂಭಿಸಿದಾಗ 40 ವರ್ಷದ ಮೇಲಿನ ನೇಕಾರಷ್ಟೇ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಈ ವೃತ್ತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಹೇಗೆ ಎಂಬ ಆತಂಕ ನಮ್ಮನ್ನು ಕಾಡಿತ್ತು. ನಾವು ತರಬೇತಿ ನೀಡಿದ ಬಳಿಕ ಹಲವು ಯುವತಿಯರು ಈ ಕ್ಷೇತ್ರಕ್ಕೆ ಬಂದಿದ್ದಾರೆ ಎಂದರು.</p>.<p>ಈಗ ಉಡುಪಿ ಸೀರೆಗೆ ಬ್ರ್ಯಾಂಡ್ ಮೌಲ್ಯವನ್ನು ತಂದುಕೊಟ್ಡಿದ್ದೇವೆ. ಅದಕ್ಕೆ ಉತ್ತಮ ಬೆಲೆ ಬಂದಿದೆ. ನೇಕಾರರಿಗೆ ಗೌರವ ಮತ್ತು ಉತ್ತಮ ಸಂಭಾವನೆ ಲಭಿಸುತ್ತದೆ. ನೇಕಾರಿಕೆ ವೃತ್ತಿಯನ್ನು ತೊರೆದಿದ್ದ ಮಹಿಳೆಯರು ಕೂಡ ಈಗ ನಮ್ಮ ಮೂಲಕ ಈ ವೃತ್ತಿಗೆ ಮರಳಿದ್ದಾರೆ ಎಂದರು.</p>.<p>ನೇಕಾರಿಕೆ ತರಬೇತಿ ಪಡೆದ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ಪುರುಷೋತ್ತಮ ಅಡ್ವೆ ಅವರು ಸಂಜೀವ ಶೆಟ್ಟಿಗಾರ್ ಅವರನ್ನು ಪರಿಚಯಿಸಿದರು.</p>.<p>ಚಿಕ್ಕಣ್ಣ ಅವರು ಸೋಮಪ್ಪ ಜತ್ತನ್ನ ಅವರನ್ನು ಪರಿಚಯಿಸಿದರು. ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಇದ್ದರು. ಬಳಿಕ ವಿದುಷಿ ಪವನ ಬಿ. ಆಚಾರ್, ಶಶಿಕಲಾ ಎನ್. ಭಟ್, ಶಿಲ್ಪಾ ಜೋಶಿ ಅವರು ವೀಣಾ ವಾದನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಕೌಶಲ ಆಧಾರಿತ ಶಿಕ್ಷಣ ಬದುಕಿಗೆ ಅಗತ್ಯ. ಆದರೆ, ನಮ್ಮ ಶಾಲಾ ಕಾಲೇಜುಗಳಲ್ಲಿ ಇಂತಹ ಶಿಕ್ಷಣವನ್ನು ನೀಡುತ್ತಿಲ್ಲ. ನಾವು ಅನ್ನ, ಅರಿವು ಆಸರೆಗಾಗಿ ವಿವಿಧ ಕಂಪನಿಗಳ ಕೈಕೆಳಗೆ ಹೋದ ಪರಿಣಾಮವಾಗಿ ಸೋಮಾರಿಗಳಾಗಿದ್ದೇವೆ ಎಂದು ಜನಪದ ಸೇವಾ ಟ್ರಸ್ಟ್ನ ಸಂತೋಷ ಕೌಲಗಿ ಹೇಳಿದರು.</p>.<p>ಕದಿಕೆ ಟ್ರಸ್ಟ್ ಮತ್ತು ಸೆಲ್ಕೊ ಇಂಡಿಯಾ ಸಹಯೋಗದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇಕಾರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಾವು ಕೌಶಲಗಳನ್ನು ಯಂತ್ರಗಳಿಗೆ ಧಾರೆ ಎರೆದು ಕೊಟ್ಟಿದ್ದೇವೆ. ಈಗ ಕೃತಕ ಬುದ್ಧಿಮತ್ತೆಯ ಅನುಷ್ಠಾನದಿಂದ ನಾವು ನಮ್ಮೊಳಗಿನ ವಿಶ್ವಾಸವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದರು.</p>.<p>ನೇಕಾರಿಕೆಯನ್ನು ಸರ್ಕಾರವೇ ಕೊಂದು ಹಾಕಿದೆ. ಖಾದಿ ಬಟ್ಟೆಯ ಮೇಲೂ ಜಿಎಸ್ಟಿ ಹಾಕುವ ಮೂಲಕ ನೇಕಾರರನ್ನು ಕನಿಷ್ಠ ಮಟ್ಟಕ್ಕೆ ಇಳಿಸಿದೆ. ನೇಕಾರರು ಹೊಸತನಕ್ಕೆ ಇನ್ನೂ ತೆರೆದುಕೊಳ್ಳದ ಕಾರಣ ಹಿಂದೆಯೇ ಉಳಿದಿದ್ದಾರೆ ಎಂದು ಹೇಳಿದರು.</p>.<p>ಕಾರ್ಯಕ್ರಮದಲ್ಲಿ ನೇಕಾರಿಕೆಯಲ್ಲಿನ ಜೀವಮಾನದ ಸಾಧನೆಗಾಗಿ ಸೋಮಪ್ಪ ಜತ್ತನ್ನ ಹಾಗೂ ಸಂಜೀವ ಶೆಟ್ಟಿಗಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.</p>.<p>ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಮಾತನಾಡಿ, ನಾವು ಕದಿಕೆ ಟ್ರಸ್ಟ್ ಆರಂಭಿಸಿದಾಗ 40 ವರ್ಷದ ಮೇಲಿನ ನೇಕಾರಷ್ಟೇ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಈ ವೃತ್ತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಹೇಗೆ ಎಂಬ ಆತಂಕ ನಮ್ಮನ್ನು ಕಾಡಿತ್ತು. ನಾವು ತರಬೇತಿ ನೀಡಿದ ಬಳಿಕ ಹಲವು ಯುವತಿಯರು ಈ ಕ್ಷೇತ್ರಕ್ಕೆ ಬಂದಿದ್ದಾರೆ ಎಂದರು.</p>.<p>ಈಗ ಉಡುಪಿ ಸೀರೆಗೆ ಬ್ರ್ಯಾಂಡ್ ಮೌಲ್ಯವನ್ನು ತಂದುಕೊಟ್ಡಿದ್ದೇವೆ. ಅದಕ್ಕೆ ಉತ್ತಮ ಬೆಲೆ ಬಂದಿದೆ. ನೇಕಾರರಿಗೆ ಗೌರವ ಮತ್ತು ಉತ್ತಮ ಸಂಭಾವನೆ ಲಭಿಸುತ್ತದೆ. ನೇಕಾರಿಕೆ ವೃತ್ತಿಯನ್ನು ತೊರೆದಿದ್ದ ಮಹಿಳೆಯರು ಕೂಡ ಈಗ ನಮ್ಮ ಮೂಲಕ ಈ ವೃತ್ತಿಗೆ ಮರಳಿದ್ದಾರೆ ಎಂದರು.</p>.<p>ನೇಕಾರಿಕೆ ತರಬೇತಿ ಪಡೆದ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಪರಿಚಯಿಸಲಾಯಿತು. ಪುರುಷೋತ್ತಮ ಅಡ್ವೆ ಅವರು ಸಂಜೀವ ಶೆಟ್ಟಿಗಾರ್ ಅವರನ್ನು ಪರಿಚಯಿಸಿದರು.</p>.<p>ಚಿಕ್ಕಣ್ಣ ಅವರು ಸೋಮಪ್ಪ ಜತ್ತನ್ನ ಅವರನ್ನು ಪರಿಚಯಿಸಿದರು. ಸೆಲ್ಕೊ ಇಂಡಿಯಾದ ಡಿಜಿಎಂ ಗುರುಪ್ರಕಾಶ್ ಶೆಟ್ಟಿ ಇದ್ದರು. ಬಳಿಕ ವಿದುಷಿ ಪವನ ಬಿ. ಆಚಾರ್, ಶಶಿಕಲಾ ಎನ್. ಭಟ್, ಶಿಲ್ಪಾ ಜೋಶಿ ಅವರು ವೀಣಾ ವಾದನ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>