ಲಾಕ್ಡೌನ್ನಿಂದಾಗಿ ಶನಿವಾರ ಸಂಜೆಯಿಂದಲೇ ಹೋಟೆಲ್ಗಳು ಬಂದ್ ಆಗಿದ್ದರಿಂದ ನಿರ್ಗತಿಕರು, ಭಿಕ್ಷುಕರು ಊಟಕ್ಕಾಗಿ ಅಲೆದಾಡಬೇಕಾಯಿತು. ಉಚಿತ ಅನ್ನದಾಸೋಹ ನೀಡುತ್ತಿದ್ದ ದೇವಸ್ಥಾನಗಳು, ಮಠ ಮಂದಿರಗಳು ಕೂಡ ಬಂದ್ ಆಗಿರುವುದರಿಂದ ನಿರ್ಗತಿಕರು ನಗರದ ಕ್ಲಾಕ್ ಟವರ್, ಅಜ್ಜರಕಾಡು ಉದ್ಯಾನ, ಕೆಎಸ್ಆರ್ಟಿಸಿ, ನಗರ ಸಾರಿಗೆ, ಸರ್ವೀಸ್ ಬಸ್ ನಿಲ್ದಾಣಗಳಲ್ಲಿ ಮಲಗಿದ್ದದೃಶ್ಯ ಕಂಡುಬಂತು.