ಉಡುಪಿಯ ದುರ್ಗಾ ಇಂಟರ್ನ್ಯಾಷನಲ್ ಹೋಟೆಲ್ ಎದುರು ದುಸ್ಥಿತಿಯಲ್ಲಿರುವ ಟ್ರಾಫಿಕ್ ಸಿಗ್ನಲ್
ಕಿನ್ನಿಮೂಲ್ಕಿ ಬಳಿ ಪಾದಚಾರಿ ಮಾರ್ಗದ ಸ್ಲಾಬ್ ಮುರಿದುಬಿದ್ದಿರುವುದು
ಉಡುಪಿಯ ಸ್ವಾದಿಷ್ಟ್ ಹೋಟೆಲ್ ಬಳಿ ಪಾದಚಾರಿ ರಸ್ತೆಗೆ ಅಡ್ಡಲಾಗಿರುವ ವಿದ್ಯುತ್ ಟ್ರಾನ್ಸ್ಫರಂ
‘ಪೊಲೀಸ್ ಇಲಾಖೆಯಿಂದ ಅಳವಡಿಕೆ’
ದಶಕಗಳ ಹಿಂದೆ ಪೊಲೀಸ್ ಇಲಾಖೆಯಿಂದ ಉಡುಪಿ ಹಾಗೂ ಮಣಿಪಾಲ ನಗರದ ಹಲವು ಕಡೆಗಳಲ್ಲಿ ಅಳವಡಿಸಿದ್ದ ಟ್ರಾಫಿಕ್ ಸಿಗ್ನಲ್ಗಳು ಕೆಟ್ಟುಹೋಗಿವೆ. ಎಲ್ಲ ಟ್ರಾಫಿಕ್ ಸಿಗ್ನಲ್ಗಳು ದುಃಸ್ಥಿತಿಯಲ್ಲಿದ್ದು ಅಪಾಯಕಾರಿ ಸ್ಥಿತಿಯಲ್ಲಿರುವುದು ನಗರಸಭೆಯ ಗಮನಕ್ಕೆ ಬಂದಿದ್ದು ಈಗಾಗಲೇ ಕೆಲವು ಸಿಗ್ನಲ್ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸ್ ಇಲಾಖೆ ನಗರಸಭೆಗೆ ಮನವಿ ಸಲ್ಲಿಸಿದರೆ ತಕ್ಷಣ ಎಲ್ಲ ಸಿಗ್ನಲ್ಗಳನ್ನು ತೆರವುಗೊಳಿಸಲಾಗುವುದು. ಪರ್ಯಾಯ ಮಹೋತ್ಸವ ಆರಂಭವಾಗುವುದರೊಳಗೆ ತೆರವು ಕಾರ್ಯ ಪೂರ್ಣವಾಗಲಿದೆ.
‘ಅವೈಜ್ಞಾನಿಕ ಕಾಮಗಾರಿ’
ಬೆಳೆಯುತ್ತಿರುವ ಉಡುಪಿ ನಗರಕ್ಕೆ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ಗಳ ಅಗತ್ಯವನ್ನು ಮನಗಂಡು ಹಿಂದೆ ಯೋಜನೆ ಸಿದ್ಧಪಡಿಸಿ ಉಡುಪಿ ಹಾಗೂ ಮಣಿಪಾಲದ 15 ಕಡೆಗಳಲ್ಲಿ ಎಲ್ಇಸಿ ಪರದೆ ಸಹಿತ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ಗಳ ಅಳವಡಿಕೆ ಕಾಮಗಾರಿಗೆ ಮುಂಬೈ ಮೂಲದ ಕಂಪನಿಗೆ ಟೆಂಡರ್ ನೀಡಲಾಗಿತ್ತು. ಆದರೆ ಕೆಲವು ಕಡೆ ಅವೈಜ್ಞಾನಿಕವಾಗಿ ಅಗತ್ಯಕ್ಕಿಂತ ದೊಡ್ಡದಾಗಿ ಟ್ರಾಫಿಕ್ ಸಿಗ್ನಲ್ಗಳನ್ನು ಅಳವಡಿಸಲಾಗಿದ್ದು ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಹಾಗಾಗಿ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದ್ದು ಆಯಾ ಪ್ರದೇಶಕ್ಕೆ ತಕ್ಕಂತೆ ಗಾತ್ರದಲ್ಲಿ ಬದಲಾವಣೆ ಮಾಡಿ ಅಳವಡಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ. ಶೀಘ್ರ ಕಾಮಗಾರಿ ಮುಕ್ತಾಯವಾಗಲಿದೆ. ರಾಯಪ್ಪ ನಗರಸಭೆ ಪೌರಾಯುಕ್ತ