<p><strong>ಉಡುಪಿ:</strong> ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ‘ನವ ಸಂಕಲ್ಪ’ ಮಾಡುವಂತೆ ಮನವಿ ಮಾಡಿದರು.</p>.<p>ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ; ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು. </p>. <ul><li><p><strong>ಮೊದಲ ಸಂಕಲ್ಪ:</strong> ಜಲಸಂರಕ್ಷಣೆ ಮಾಡುವುದು.</p></li><li><p><strong>ಎರಡನೇ ಸಂಕಲ್ಪ:</strong> ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.</p></li><li><p><strong>ಮೂರನೇ ಸಂಕಲ್ಪ:</strong> ಪ್ರತಿಯೊಬ್ಬರೂ ಕನಿಷ್ಠಪಕ್ಷ ಒಬ್ಬ ಬಡವರ ಜೀವನ ಸುಧಾರಿಸಿ.</p></li><li><p><strong>ನಾಲ್ಕನೇ ಸಂಕಲ್ಪ:</strong> ಸ್ವದೇಶಿ ಅಳವಡಿಸಿಕೊಳ್ಳಿ. ವೋಕಲ್–ಲೋಕಲ್ ಮಂತ್ರ ನಮ್ಮದಾಗಲಿದೆ.</p></li><li><p><strong>ಐದನೇ ಸಂಕಲ್ಪ:</strong> ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.</p></li><li><p><strong>ಆರನೇ ಸಂಕಲ್ಪ:</strong> ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳೋಣ. ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ, ಸಿರಿಧಾನ್ಯ ಬಳಸೋಣ.</p></li><li><p><strong>ಏಳನೇ ಸಂಕಲ್ಪ:</strong> ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.</p></li><li><p><strong>ಎಂಟನೇ ಸಂಕಲ್ಪ</strong>: ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ. </p></li><li><p><strong>ಒಂಬತ್ತನೇ ಸಂಕಲ್ಪ:</strong> ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ.</p></li></ul><p>2047 ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರು ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ವಿಕಸಿತ ಕರ್ನಾಟಕ; ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ ಎಂದರು.</p>.<h2>ಮೋದಿ ಮಾತು:</h2>.<p> ಎಲ್ಲರಿಗೂ ನಮಸ್ಕಾರ.. ಕನ್ನಡದಲ್ಲಿ ಮಾತು ಆರಂಭಿಸಿದರು. ಜೈ ಶ್ರೀಕೃಷ್ಣ ಘೋಷಣೆ ಹಾಕಿದರು.</p>.<ul><li><p>ತಮ್ಮ ಭಾವಚಿತ್ರ ಹಿಡಿದು ನಿಂತಿದ್ದವರಿಂದ ಮೋದಿ ಅವುಗಳನ್ನು ಪಡೆದುಕೊಳ್ಳುವಂತೆ ಎಸ್ಪಿಜಿ ಅವರಿಗೆ ಸೂಚಿಸಿದರು. ಹಿಂದೆ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದು ಹೇಳಿ ಸಮಾಧಾನ ಪಡಿಸಿದರು.</p></li><li><p> ಜನಸಂಘ ಮತ್ತು ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯ ಕರ್ಮಭೂಮಿ ಉಡುಪಿ.ವಿಎಸ್ ಆಚಾರ್ಯ ಮತ್ತಿತರರ ಸ್ಮರಣೆ.</p></li><li><p>ಲಕ್ಷ ಕಂಠ ಗೀತಾ ಪಠಣ ಅಭಿಯಾನ ಹಮ್ಮಿಕೊಂಡಿರುವ ಸುಗುಣೇಂದ್ರ ಶ್ರೀಗೆ ಅಭಿನಂದನೆ. ಈದು ಸನಾತನ ಸಂಸ್ಕೃತಿ ಅಭಿಯಾನ. ಇದರಿಂದ ನನಗೆ ಬಹಳ ಪ್ರೇರಣೆ ಸಿಕ್ಕಿದೆ.</p></li><li><p>ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದು.</p></li><li><p>25 ನವೆಂಬರ್ರಂದು ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ವರೆಗೆ ಅಸಂಖ್ಯ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ. </p></li><li><p>ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಡುಪಿಯಲ್ಲಿ ವೇದಾನಂತ ಅಧ್ಯಯನ, ಭಗವಾನ್ ಶ್ರೀಕೃಷ್ಣನ ಆರಾಧನೆ ಇದೆ. ಲಕ್ಷಾಂತರ ಭಕ್ತರಿಗೆ ಅನ್ನದಾನ ಸೇವೆ ಇದೆ. ಇದು ಭಕ್ತಿ, ಆಧ್ಯಾತ್ಮಿಕತೆಯ ಸಂಗಮ ತೀರ್ಥವಾಗಿದೆ.</p></li><li><p>ಮಧ್ವಾಚಾರ್ಯರೊಂದಿಗೆ ದಾಸ ಪರಂಪರೆಯೂ ಇಲ್ಲಿಯ ಇನ್ನೊಂದು ಕೊಡುಗೆ.</p></li><li><p>ಕನಕದಾಸರ ಭಕ್ತಿಯೂ ದೊಡ್ಡದು.</p></li><li><p>ಲೋಕ ಕಲ್ಯಾಣದ ಸಂದೇಶ ಭಗವದ್ಗೀತೆಯಲ್ಲಿದೆ. ಸರ್ವಜನ ಸುಖಾಯ–ಸರ್ವಜನ ಹಿತಾಯ, ಸಬ್ಕಾ ಸಾಥ್–ಸಬ್ಕಾ ವಿಕಾಸ ಇದು ಭಗವದ್ಗೀತೆಯಿಂದ ಬಂದ ಪ್ರೇರಣೆ. </p></li><li><p>ಭಗವಾನ್ ಶ್ರೀಕೃಷ್ಣನ ಸಂದೇಶ ಪಾಲನೆಗಾಗಿ ಅತ್ಯಾಚಾರಿಗಳ ಅಂತ್ಯವೂ ಅಗತ್ಯವಾಗಿದೆ.</p></li><li><p>ಧರ್ಮ ರಕ್ಷಣೆ; ದುಷ್ಟ ಸಂಹಾರವೂ ನಮಗೆ ಗೊತ್ತು. ಧರ್ಮಸಂದೇಶವನ್ನೂ ಕೊಡುತ್ತೇವೆ; ಅದರ ಜೊತೆಗೆ ಮಿಷನ್ ಸುದರ್ಶನ ಚಕ್ರದ ಪ್ರಯೋಗವನ್ನೂ ಮಾಡುತ್ತೇವೆ. ದೇಶವಿರೋಧಿಗಳ ಮೇಲೆಗೆ ನಮ್ಮ ಸುದರ್ಶನ ಚಕ್ರ ಪ್ರಯೋಗ. ಆಪರೇಷನ್ ಸಿಂದೂರು ಮೆಲಕು.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ‘ನವ ಸಂಕಲ್ಪ’ ಮಾಡುವಂತೆ ಮನವಿ ಮಾಡಿದರು.</p>.<p>ಎಲ್ಲರೂ ಈ ಒಂಬತ್ತು ಸಂಕಲ್ಪ ಮಾಡಿ; ವರ್ತಮಾನ ಮತ್ತು ಭವಿಷ್ಯಕ್ಕೆ ಇವು ಅಗತ್ಯ ಎಂದು ಒತ್ತಿ ಹೇಳಿದರು. </p>. <ul><li><p><strong>ಮೊದಲ ಸಂಕಲ್ಪ:</strong> ಜಲಸಂರಕ್ಷಣೆ ಮಾಡುವುದು.</p></li><li><p><strong>ಎರಡನೇ ಸಂಕಲ್ಪ:</strong> ಮರ ಬೆಳೆಸುವುದು, ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನ ಆರಂಭಿಸಿ.</p></li><li><p><strong>ಮೂರನೇ ಸಂಕಲ್ಪ:</strong> ಪ್ರತಿಯೊಬ್ಬರೂ ಕನಿಷ್ಠಪಕ್ಷ ಒಬ್ಬ ಬಡವರ ಜೀವನ ಸುಧಾರಿಸಿ.</p></li><li><p><strong>ನಾಲ್ಕನೇ ಸಂಕಲ್ಪ:</strong> ಸ್ವದೇಶಿ ಅಳವಡಿಸಿಕೊಳ್ಳಿ. ವೋಕಲ್–ಲೋಕಲ್ ಮಂತ್ರ ನಮ್ಮದಾಗಲಿದೆ.</p></li><li><p><strong>ಐದನೇ ಸಂಕಲ್ಪ:</strong> ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಿ.</p></li><li><p><strong>ಆರನೇ ಸಂಕಲ್ಪ:</strong> ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಿಕೊಳ್ಳೋಣ. ಊಟದಲ್ಲಿ ಎಣ್ಣೆ ಕಡಿಮೆ ಮಾಡೋಣ, ಸಿರಿಧಾನ್ಯ ಬಳಸೋಣ.</p></li><li><p><strong>ಏಳನೇ ಸಂಕಲ್ಪ:</strong> ಯೋಗ ಅಳವಡಿಸಿಕೊಳ್ಳಿ, ಎಲ್ಲರೂ ಯೋಗಿಗಳಾಗಿ.</p></li><li><p><strong>ಎಂಟನೇ ಸಂಕಲ್ಪ</strong>: ಹಸ್ತಪ್ರತಿ ಸಂರಕ್ಷಣೆಗೆ ಸಹಯೋಗ ನೀಡಿ. </p></li><li><p><strong>ಒಂಬತ್ತನೇ ಸಂಕಲ್ಪ:</strong> ಕನಿಷ್ಠ ಪಕ್ಷ ದೇಶದ 25 ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಮಾಡಿ.</p></li></ul><p>2047 ಅಮೃತ ಕಾಲದ ಗುರಿಯನ್ನು ನನಸಾಗಿಸಲು ಭಾರತೀಯರು ಎಲ್ಲರೂ ತಮ್ಮ ಕರ್ತವ್ಯ ನಿಭಾಯಿಸಬೇಕು. ವಿಕಸಿತ ಕರ್ನಾಟಕ; ವಿಕಸಿತ ಭಾರತ ಸಂಕಲ್ಪ ನಮ್ಮದಾಗಲಿ ಎಂದರು.</p>.<h2>ಮೋದಿ ಮಾತು:</h2>.<p> ಎಲ್ಲರಿಗೂ ನಮಸ್ಕಾರ.. ಕನ್ನಡದಲ್ಲಿ ಮಾತು ಆರಂಭಿಸಿದರು. ಜೈ ಶ್ರೀಕೃಷ್ಣ ಘೋಷಣೆ ಹಾಕಿದರು.</p>.<ul><li><p>ತಮ್ಮ ಭಾವಚಿತ್ರ ಹಿಡಿದು ನಿಂತಿದ್ದವರಿಂದ ಮೋದಿ ಅವುಗಳನ್ನು ಪಡೆದುಕೊಳ್ಳುವಂತೆ ಎಸ್ಪಿಜಿ ಅವರಿಗೆ ಸೂಚಿಸಿದರು. ಹಿಂದೆ ವಿಳಾಸ ಬರೆಯಿರಿ. ನಾನು ಅಭಿನಂದನಾ ಪತ್ರ ಕಳಿಸುವೆ ಎಂದು ಹೇಳಿ ಸಮಾಧಾನ ಪಡಿಸಿದರು.</p></li><li><p> ಜನಸಂಘ ಮತ್ತು ಮತ್ತು ಬಿಜೆಪಿಯ ಉತ್ತಮ ಆಡಳಿತದ ಮಾದರಿಯ ಕರ್ಮಭೂಮಿ ಉಡುಪಿ.ವಿಎಸ್ ಆಚಾರ್ಯ ಮತ್ತಿತರರ ಸ್ಮರಣೆ.</p></li><li><p>ಲಕ್ಷ ಕಂಠ ಗೀತಾ ಪಠಣ ಅಭಿಯಾನ ಹಮ್ಮಿಕೊಂಡಿರುವ ಸುಗುಣೇಂದ್ರ ಶ್ರೀಗೆ ಅಭಿನಂದನೆ. ಈದು ಸನಾತನ ಸಂಸ್ಕೃತಿ ಅಭಿಯಾನ. ಇದರಿಂದ ನನಗೆ ಬಹಳ ಪ್ರೇರಣೆ ಸಿಕ್ಕಿದೆ.</p></li><li><p>ಭಗವದ್ಗೀತೆಯೊಂದಿಗೆ ನವಪೀಳಿಗೆಯನ್ನು ಜೋಡಿಸುವ ಸತ್ಕಾರ್ಯ ಇದು.</p></li><li><p>25 ನವೆಂಬರ್ರಂದು ನಾನು ಅಯೋಧ್ಯೆಯಲ್ಲಿದ್ದೆ. ಅಯೋಧ್ಯೆಯ ರಾಮಮಂದಿರದ ಮೇಲೆ ಧರ್ಮಧ್ವಜದ ಸ್ಥಾಪನೆಯಾಗಿದೆ. ಅಯೋಧ್ಯೆಯಿಂದ ಉಡುಪಿ ವರೆಗೆ ಅಸಂಖ್ಯ ರಾಮಭಕ್ತರು ಸಂತುಷ್ಟರಾಗಿದ್ದಾರೆ. ರಾಮಮಂದಿರ ಹೋರಾಟದ ಹಾದಿ ಎಲ್ಲರಿಗೂ ಗೊತ್ತಿದೆ. </p></li><li><p>ಜಗದ್ಗುರು ಮಧ್ವಾಚಾರ್ಯರಿಂದ ಸ್ಥಾಪನೆಯಾದ ಉಡುಪಿಯಲ್ಲಿ ವೇದಾನಂತ ಅಧ್ಯಯನ, ಭಗವಾನ್ ಶ್ರೀಕೃಷ್ಣನ ಆರಾಧನೆ ಇದೆ. ಲಕ್ಷಾಂತರ ಭಕ್ತರಿಗೆ ಅನ್ನದಾನ ಸೇವೆ ಇದೆ. ಇದು ಭಕ್ತಿ, ಆಧ್ಯಾತ್ಮಿಕತೆಯ ಸಂಗಮ ತೀರ್ಥವಾಗಿದೆ.</p></li><li><p>ಮಧ್ವಾಚಾರ್ಯರೊಂದಿಗೆ ದಾಸ ಪರಂಪರೆಯೂ ಇಲ್ಲಿಯ ಇನ್ನೊಂದು ಕೊಡುಗೆ.</p></li><li><p>ಕನಕದಾಸರ ಭಕ್ತಿಯೂ ದೊಡ್ಡದು.</p></li><li><p>ಲೋಕ ಕಲ್ಯಾಣದ ಸಂದೇಶ ಭಗವದ್ಗೀತೆಯಲ್ಲಿದೆ. ಸರ್ವಜನ ಸುಖಾಯ–ಸರ್ವಜನ ಹಿತಾಯ, ಸಬ್ಕಾ ಸಾಥ್–ಸಬ್ಕಾ ವಿಕಾಸ ಇದು ಭಗವದ್ಗೀತೆಯಿಂದ ಬಂದ ಪ್ರೇರಣೆ. </p></li><li><p>ಭಗವಾನ್ ಶ್ರೀಕೃಷ್ಣನ ಸಂದೇಶ ಪಾಲನೆಗಾಗಿ ಅತ್ಯಾಚಾರಿಗಳ ಅಂತ್ಯವೂ ಅಗತ್ಯವಾಗಿದೆ.</p></li><li><p>ಧರ್ಮ ರಕ್ಷಣೆ; ದುಷ್ಟ ಸಂಹಾರವೂ ನಮಗೆ ಗೊತ್ತು. ಧರ್ಮಸಂದೇಶವನ್ನೂ ಕೊಡುತ್ತೇವೆ; ಅದರ ಜೊತೆಗೆ ಮಿಷನ್ ಸುದರ್ಶನ ಚಕ್ರದ ಪ್ರಯೋಗವನ್ನೂ ಮಾಡುತ್ತೇವೆ. ದೇಶವಿರೋಧಿಗಳ ಮೇಲೆಗೆ ನಮ್ಮ ಸುದರ್ಶನ ಚಕ್ರ ಪ್ರಯೋಗ. ಆಪರೇಷನ್ ಸಿಂದೂರು ಮೆಲಕು.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>