<p><strong>ಉಡುಪಿ</strong>: ಬಡಗುತಿಟ್ಟಿನ ಹಿರಿಯ ಭಾಗವತರಾದ ನೆಬ್ಬೂರು ನಾರಾಯಣ ಹೆಗಡೆ ಯಕ್ಷಗಾನ ಲೋಕದ ಧೃವತಾರೆ. ಕರಾವಳಿಯ ಸಾಂಸ್ಕೃತಿಕ ನೆಲದಲ್ಲಿ ಕಲಾಯಾನದ ಅವರ ಹೆಜ್ಜೆ ಗುರುತುಗಳು ಅಚ್ಚಳಿಯದಂತೆ ಮೂಡಿವೆ ಎಂದು ಯಕ್ಷಗಾನ ಕಲಾರಂಗ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ಮರಿಸಿದರು.</p>.<p>ನೆಬ್ಬೂರರ ಹಾಡುಗಾರಿಕೆ ಹೋಲಿಕೆಗೆ ನಿಲುಕುವುದಿಲ್ಲ. ಯಾವ ಪರ್ಯಾಯವೂ ಸಿಗುವುದಿಲ್ಲ. ಅವರದ್ದು ಒಂದು ವಿಶಿಷ್ಠ ಪಂಥದಂತೆ. ಭಾವಪೂರ್ಣವಾದ, ಅಪ್ಯಾಯಮಾನವಾದ ಕಂಠಸಿರಿ ಕಲಾಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತ್ತು ಎಂದು ಸ್ಮರಿಸಿದರು ಅವರು.</p>.<p>ನೆಬ್ಬೂರರ ಹಾಡುಗಾರಿಕೆ, ಪ್ರಭಾಕರ ಭಂಡಾರಿ ಅವರ ಮದ್ದಲೆ, ಕೆರೆಮನೆ ಶಂಭು ಹೆಗಡೆ ಅವರ ಅಭಿನಯದ ಮೋಡಿಗೆ ಮರುಳಾಗದವರೇ ಇಲ್ಲ. ಅದರಲ್ಲೂ ಶಂಭು ಹೆಗಡೆ ಹಾಗೂ ನೆಬ್ಬೂರರ ಜೋಡಿಯಂತೂ ಅನುಮಪವಾದುದು ಎಂದರು.</p>.<p><strong>* ಇದನ್ನೂ ಓದಿ:<a href="https://cms.prajavani.net/stories/stateregional/yakshagana-artist-death-635783.html">ಯಕ್ಷಗಾನದ ಹಿರಿಯ ಭಾಗವತ ನೆಬ್ಬೂರು ನಿಧನ</a></strong></p>.<p>ಇಡಗುಂಜಿ ಮೇಳಕ್ಕೆ ದಶಕಗಳ ಕಾಲ ಅವಿರತವಾಗಿ ದುಡಿದಿದ್ದಾರೆ. ಉಡುಪಿಯಲ್ಲೂ ಅವರ ಹಾಡುಗಾರಿಕೆ, ತಾಳಮದ್ದಲೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ನೆಬ್ಬೂರರಿಗೆ ಯಕ್ಷಗಾನ ಕಲಾರಂಗದ ಮೇಲೆ ಬಹಳ ಪ್ರೀತಿ ಇತ್ತು ಎಂದು ಅವರೊಟ್ಟಿಗಿನ ನೆನಪುಗಳನ್ನು ಮೆಲುಕು ಹಾಕಿದರು.</p>.<p>ಮಿತಭಾಷಿ, ಎಲ್ಲರೊಟ್ಟಿಗೆ ಬೆರೆಯುವ ವ್ಯಕ್ತಿತ್ವ ಅವರದ್ದಲ್ಲ. ಯಕ್ಷಗಾನದಿಂದ ಹೆಸರು ಸಂಪಾದಿಸಿದರೇ ಹೊರತು ಹಣ ಗಳಿಸಲಿಲ್ಲ. ಕೊನೆಗಾಲದವರೆಗೂ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಬಡತನ, ನೋವು, ದುಃಖ ಕರುಣಾರಸವಾಗಿ ಅವರ ಹಾಡುಗಾರಿಕೆಯಲ್ಲಿ ಅಭಿವ್ಯಕ್ತವಾಗುತ್ತಿತ್ತು. ಅವರ ಕಂಠಸಿರಿ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರು.</p>.<p>ನೆಬ್ಬೂರರು ಇದಕ್ಕಿದ್ದಂತೆ ಉದ್ಭವಿಸಿದ ಕಲಾವಿದರಲ್ಲ, ಒಮ್ಮೆಲೆ ಖ್ಯಾತಿಯೂ ಬೆನ್ನಿಗೇರಲಿಲ್ಲ. ದಶಕಗಳ ಕಾಲ ನಿರಂತರ ಕಲಾ ಕಲಾಸೇವೆ ಮಾಡುತ್ತಾ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದರು.ಹಾಡುಗಾರಿಕೆ ಎಂದಿಗೂ ಎಲ್ಲೆ ಮೀರುತ್ತಿರಲಿಲ್ಲ. ಹಿತ–ಮಿತವಾದ ಸನ್ನಿವೇಶಕ್ಕೆ ಎಷ್ಟು ಬೇಕು ಅಷ್ಟೇ ಭಾವ ತುಂಬುತ್ತಿದ್ದರು ಎಂದು ಕಡೇಕಾರ್ ವಿವರಿಸಿದರು.</p>.<p>ನೆಬ್ಬೂರು ಅವರ ಪ್ರಸಿದ್ಧ ಹಾಡುಗಳು ಹಾಗೂ ಸಂಭಾಷಣೆಗಳನ್ನೊಳಗೊಂಡಿರುವ‘ನೆಬ್ಬೂರು ಪರಿಚಯ-ಸ್ವರಚಯ’ ಶೀರ್ಷಿಕೆಯಲ್ಲಿ ತಲಾ 1 ಗಂಟೆ ಅವಧಿಯ ಸಾಕ್ಷ್ಯಚಿತ್ರವನ್ನು 10 ವರ್ಷಗಳ ಹಿಂದೆಯೇ ಯಕ್ಷಗಾನ ಕಲಾರಂಗ ನಿರ್ಮಿಸಿದೆ. ನೆಬ್ಬೂರರ ನಿಧನ ಯಕ್ಷಗಾನ ಲೋಕ್ಕೆ ತುಂಬಲಾರದ ನಷ್ಟ ಎಂದು ಅವರು ಕಂಬನಿ ಮಿಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಬಡಗುತಿಟ್ಟಿನ ಹಿರಿಯ ಭಾಗವತರಾದ ನೆಬ್ಬೂರು ನಾರಾಯಣ ಹೆಗಡೆ ಯಕ್ಷಗಾನ ಲೋಕದ ಧೃವತಾರೆ. ಕರಾವಳಿಯ ಸಾಂಸ್ಕೃತಿಕ ನೆಲದಲ್ಲಿ ಕಲಾಯಾನದ ಅವರ ಹೆಜ್ಜೆ ಗುರುತುಗಳು ಅಚ್ಚಳಿಯದಂತೆ ಮೂಡಿವೆ ಎಂದು ಯಕ್ಷಗಾನ ಕಲಾರಂಗ ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ಮರಿಸಿದರು.</p>.<p>ನೆಬ್ಬೂರರ ಹಾಡುಗಾರಿಕೆ ಹೋಲಿಕೆಗೆ ನಿಲುಕುವುದಿಲ್ಲ. ಯಾವ ಪರ್ಯಾಯವೂ ಸಿಗುವುದಿಲ್ಲ. ಅವರದ್ದು ಒಂದು ವಿಶಿಷ್ಠ ಪಂಥದಂತೆ. ಭಾವಪೂರ್ಣವಾದ, ಅಪ್ಯಾಯಮಾನವಾದ ಕಂಠಸಿರಿ ಕಲಾಭಿಮಾನಿಗಳ ಮನಸ್ಸನ್ನು ಸೂರೆಗೊಂಡಿತ್ತು ಎಂದು ಸ್ಮರಿಸಿದರು ಅವರು.</p>.<p>ನೆಬ್ಬೂರರ ಹಾಡುಗಾರಿಕೆ, ಪ್ರಭಾಕರ ಭಂಡಾರಿ ಅವರ ಮದ್ದಲೆ, ಕೆರೆಮನೆ ಶಂಭು ಹೆಗಡೆ ಅವರ ಅಭಿನಯದ ಮೋಡಿಗೆ ಮರುಳಾಗದವರೇ ಇಲ್ಲ. ಅದರಲ್ಲೂ ಶಂಭು ಹೆಗಡೆ ಹಾಗೂ ನೆಬ್ಬೂರರ ಜೋಡಿಯಂತೂ ಅನುಮಪವಾದುದು ಎಂದರು.</p>.<p><strong>* ಇದನ್ನೂ ಓದಿ:<a href="https://cms.prajavani.net/stories/stateregional/yakshagana-artist-death-635783.html">ಯಕ್ಷಗಾನದ ಹಿರಿಯ ಭಾಗವತ ನೆಬ್ಬೂರು ನಿಧನ</a></strong></p>.<p>ಇಡಗುಂಜಿ ಮೇಳಕ್ಕೆ ದಶಕಗಳ ಕಾಲ ಅವಿರತವಾಗಿ ದುಡಿದಿದ್ದಾರೆ. ಉಡುಪಿಯಲ್ಲೂ ಅವರ ಹಾಡುಗಾರಿಕೆ, ತಾಳಮದ್ದಲೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ನೆಬ್ಬೂರರಿಗೆ ಯಕ್ಷಗಾನ ಕಲಾರಂಗದ ಮೇಲೆ ಬಹಳ ಪ್ರೀತಿ ಇತ್ತು ಎಂದು ಅವರೊಟ್ಟಿಗಿನ ನೆನಪುಗಳನ್ನು ಮೆಲುಕು ಹಾಕಿದರು.</p>.<p>ಮಿತಭಾಷಿ, ಎಲ್ಲರೊಟ್ಟಿಗೆ ಬೆರೆಯುವ ವ್ಯಕ್ತಿತ್ವ ಅವರದ್ದಲ್ಲ. ಯಕ್ಷಗಾನದಿಂದ ಹೆಸರು ಸಂಪಾದಿಸಿದರೇ ಹೊರತು ಹಣ ಗಳಿಸಲಿಲ್ಲ. ಕೊನೆಗಾಲದವರೆಗೂ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಬಡತನ, ನೋವು, ದುಃಖ ಕರುಣಾರಸವಾಗಿ ಅವರ ಹಾಡುಗಾರಿಕೆಯಲ್ಲಿ ಅಭಿವ್ಯಕ್ತವಾಗುತ್ತಿತ್ತು. ಅವರ ಕಂಠಸಿರಿ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರು.</p>.<p>ನೆಬ್ಬೂರರು ಇದಕ್ಕಿದ್ದಂತೆ ಉದ್ಭವಿಸಿದ ಕಲಾವಿದರಲ್ಲ, ಒಮ್ಮೆಲೆ ಖ್ಯಾತಿಯೂ ಬೆನ್ನಿಗೇರಲಿಲ್ಲ. ದಶಕಗಳ ಕಾಲ ನಿರಂತರ ಕಲಾ ಕಲಾಸೇವೆ ಮಾಡುತ್ತಾ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದರು.ಹಾಡುಗಾರಿಕೆ ಎಂದಿಗೂ ಎಲ್ಲೆ ಮೀರುತ್ತಿರಲಿಲ್ಲ. ಹಿತ–ಮಿತವಾದ ಸನ್ನಿವೇಶಕ್ಕೆ ಎಷ್ಟು ಬೇಕು ಅಷ್ಟೇ ಭಾವ ತುಂಬುತ್ತಿದ್ದರು ಎಂದು ಕಡೇಕಾರ್ ವಿವರಿಸಿದರು.</p>.<p>ನೆಬ್ಬೂರು ಅವರ ಪ್ರಸಿದ್ಧ ಹಾಡುಗಳು ಹಾಗೂ ಸಂಭಾಷಣೆಗಳನ್ನೊಳಗೊಂಡಿರುವ‘ನೆಬ್ಬೂರು ಪರಿಚಯ-ಸ್ವರಚಯ’ ಶೀರ್ಷಿಕೆಯಲ್ಲಿ ತಲಾ 1 ಗಂಟೆ ಅವಧಿಯ ಸಾಕ್ಷ್ಯಚಿತ್ರವನ್ನು 10 ವರ್ಷಗಳ ಹಿಂದೆಯೇ ಯಕ್ಷಗಾನ ಕಲಾರಂಗ ನಿರ್ಮಿಸಿದೆ. ನೆಬ್ಬೂರರ ನಿಧನ ಯಕ್ಷಗಾನ ಲೋಕ್ಕೆ ತುಂಬಲಾರದ ನಷ್ಟ ಎಂದು ಅವರು ಕಂಬನಿ ಮಿಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>