ಮಿತಭಾಷಿ, ಎಲ್ಲರೊಟ್ಟಿಗೆ ಬೆರೆಯುವ ವ್ಯಕ್ತಿತ್ವ ಅವರದ್ದಲ್ಲ. ಯಕ್ಷಗಾನದಿಂದ ಹೆಸರು ಸಂಪಾದಿಸಿದರೇ ಹೊರತು ಹಣ ಗಳಿಸಲಿಲ್ಲ. ಕೊನೆಗಾಲದವರೆಗೂ ಕುಟುಂಬ ಆರ್ಥಿಕ ಸಂಕಷ್ಟದಲ್ಲಿತ್ತು. ಬಡತನ, ನೋವು, ದುಃಖ ಕರುಣಾರಸವಾಗಿ ಅವರ ಹಾಡುಗಾರಿಕೆಯಲ್ಲಿ ಅಭಿವ್ಯಕ್ತವಾಗುತ್ತಿತ್ತು. ಅವರ ಕಂಠಸಿರಿ ಎಲ್ಲರ ಮನಸ್ಸಿನಲ್ಲಿ ಅಚ್ಚೊತ್ತಿದೆ ಎಂದರು.