ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ಉಡುಪಿ: ಕಡಲಾಮೆ ಮೊಟ್ಟೆಗೆ ಅರಣ್ಯ ಇಲಾಖೆ ಕಣ್ಗಾವಲು

ಮೊದಲ ಪ್ರಯತ್ನ ಯಶಸ್ವಿ: ಸಮುದ್ರ ಸೇರಿದ 300ಕ್ಕೂ ಅಧಿಕ ಆಲಿವ್‌ ರಿಡ್ಲಿ ಮರಿಗಳು
Published : 3 ಏಪ್ರಿಲ್ 2025, 5:56 IST
Last Updated : 3 ಏಪ್ರಿಲ್ 2025, 5:56 IST
ಫಾಲೋ ಮಾಡಿ
Comments
ಕಡಲಾಮೆ ಮೊಟ್ಟೆ ಇಟ್ಟಿರುವ ಸ್ಥಳದಲ್ಲಿ ಗೂಡು ಅಳವಡಿಸಿರುವುದು
ಕಡಲಾಮೆ ಮೊಟ್ಟೆ ಇಟ್ಟಿರುವ ಸ್ಥಳದಲ್ಲಿ ಗೂಡು ಅಳವಡಿಸಿರುವುದು
ಕಡಲಾಮೆ ಮರಿಗಳು
ಕಡಲಾಮೆ ಮರಿಗಳು
ಉಡುಪಿ ಕುಂದಾಪುರ ಬೈಂದೂರು ವ್ಯಾಪ್ತಿಯಲ್ಲಿ ಕಡಲಾಮೆಗಳ ಮೊಟ್ಟೆಗಳನ್ನು ಸಂರಕ್ಷಿಸಿ ಮರಿಗಳು ಸುರಕ್ಷಿತವಾಗಿ ಸಮುದ್ರ ಸೇರುವಂತೆ ಮಾಡಲಾಗಿದೆ. ಕಡಲಾಮೆಗಳ ಸಂರಕ್ಷಣೆಗೆ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು
ಗಣಪತಿ ಕೆ ಕುಂದಾಪುರ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ
ಸ್ವಚ್ಛ ಜಾಗ ಆಯ್ದುಕೊಳ್ಳುವ ಕಡಲಾಮೆ
ಕಡಲಾಮೆಗಳು ನವೆಂಬರ್‌ನಿಂದ ಜನವರಿವರೆಗೆ ಮೊಟ್ಟೆಯಿಡಲು ಸಮುದ್ರ ತೀರದತ್ತ ಬರುತ್ತವೆ. ಸಮುದ್ರದ ಅಲೆ ತಲುಪುವ ಜಾಗದಿಂದ 50ರಿಂದ 100 ಅಡಿ ದೂರದಲ್ಲಿ ಕಸ ಇರದ ಸ್ವಚ್ಛ ಜಾಗವನ್ನು ಮೊಟ್ಟೆ ಇಡಲು ಆಯ್ದುಕೊಳ್ಳುವ ಕಡಲಾಮೆ ಯಾವುದೇ ಅಪಾಯವಿಲ್ಲ ಎನ್ನುವುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳುತ್ತದೆ. ಕಡಲಾಮೆಯು ಕಾಲುಗಳ ಸಹಾಯದಿಂದ ಮರಳು ಅಗೆದು 3ರಿಂದ 4 ಅಡಿ ಹೊಂಡದೊಳಗೆ 100ರಿಂದ 120 ಮೊಟ್ಟೆಗಳನ್ನು ಇಟ್ಟು ಮರಳನ್ನು ಪುನಃ ಮುಚ್ಚುತ್ತದೆ. ಅಲ್ಲೇನೂ ಕುರುಹು ಸಿಗದಂತೆ ತನ್ನ ಹೆಜ್ಜೆ ಗುರುತುಗಳನ್ನು ಗೊಂದಲಕಾರಿಯಾಗಿ ಮೂಡಿಸಿ ಕಡಲಿಗೆ ಮರಳುತ್ತದೆ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್‌ ಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT