<p><strong>ಉಡುಪಿ</strong>: ರಾಷ್ಟ್ರೀಯ ಹೆದ್ದಾರಿ 169 ‘ಎ’ ರಸ್ತೆ ವಿಸ್ತರಣೆಗೆ ಪರ್ಕಳದಲ್ಲಿ ವಾಸದ ಮನೆಯನ್ನು ಕಳೆದುಕೊಂಡ ಕುಟುಂಬವೊಂದು ಮನೆಯ ಹಿಂದಿದ್ದ ಮುರುಕು ಶೆಡ್ನಲ್ಲಿ ಅನಿವಾರ್ಯವಾಗಿ ವಾಸ ಮಾಡಬೇಕಾದ ದುಸ್ಥಿತಿ ಎದುರಾಗಿದೆ.</p>.<p>ಪರ್ಕಳದಲ್ಲಿ ಮುಖ್ಯ ರಸ್ತೆಗೆ ಅಂಟಿಕೊಂಡಂತಿದ್ದ ಜಾಗದಲ್ಲಿದ್ದ ಮನೆಯನ್ನು ಕಳೆದುಕೊಂಡಿರುವ ಶಂಕರಣ್ಣ(74), ಪ್ರಫುಲ್ಲ ಶೆಟ್ಟಿಗಾರ್ (65), ಪ್ರಮಿಳಾ ಶೆಟ್ಟಿಗಾರ್ (50) ಕುಟುಂಬ ವಾಸಕ್ಕೆ ಯೋಗ್ಯ ಜಾಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಭೂಮಿ ಮನೆ ಕಳೆದುಕೊಂಡಿದ್ದು, ಹಿಂಬದಿ ಜಾಗ ಕುಟುಂಬದವರಿಗೆ ಸೇರಿದ್ದು, ಆಸ್ತಿ ವಿಂಗಡಣೆಯಾಗಬೇಕಿದೆ. ಹಾಗಾಗಿ, ಸದ್ಯ ಶೆಡ್ನಲ್ಲಿಯೇ ವಾಸ ಮಾಡಬೇಕಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.</p>.<p>ಮಳೆ ಬಂದರೆ ಇಡೀ ಕುಟುಂಬ ಸಂಬಂಧಿಕರ ಮನೆಗೆ ಹೋಗಿ ಉಳಿಯಬೇಕು. ಹಿರಿಯಣ್ಣ ಶಂಕರಣ್ಣ ಮನೆಯ ಎದುರಿಗಿದ್ದ ಪ್ರೆಸ್ನಲ್ಲಿ ಬುಕ್ ಬೈಂಡಿಂಗ್ ಮಾಡುವ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ರಸ್ತೆ ವಿಸ್ತರಣೆಯಿಂದ ಪ್ರೆಸ್ ಕೂಡ ಸ್ಥಳಾಂತರವಾಗಿದ್ದು ಉದ್ಯೋಗ ಕಳೆದುಕೊಂಡಿದ್ದಾರೆ.</p>.<p>ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ಭೂಮಿ ಪರಿಹಾರ ಕೂಡ ಬಿಡುಗಡೆಯಾಗಿಲ್ಲ. ಕೊರೊನಾ ಸಂಕಷ್ಟದ ಸಂದರ್ಭ ಜೀವನ ಸಾಗಿಸುವುದು ಹೇಗೆ ಎಂದು ಕುಟುಂಬ ಪ್ರಶ್ನಿಸಿದೆ. ಅಧಿಕಾರಿಗಳಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಕಾಮಗಾರಿಗೆ ತಡೆಯಾಜ್ಞೆ ಇದೆ ಎಂದು ಹೇಳುತ್ತಾರೆ. ತರಾತುರಿಯಲ್ಲಿ ಮನೆ ನೆಲಸಮ ಮಾಡಿದ ಜಿಲ್ಲಾಡಳಿತ ಕೈಕಟ್ಟಿ ಕುಳಿತಿರುವುದು ಸರಿಯಲ್ಲ ಎಂದು ಪ್ರಪುಲ್ಲಾ ಶೆಟ್ಟಿಗಾರ್ ಕಣ್ಣೀರು ಹಾಕುತ್ತಾರೆ.</p>.<p>ಸ್ವಂತ ಜಾಗದಲ್ಲಿ ಮನೆಕಟ್ಟಿಕೊಳ್ಳಲು ನಗರಸಭೆಯ ಅನುಮತಿ ಪ್ರಾಧಿಕಾರದ ಅನುಮತಿ ಅಗತ್ಯವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವುದರಿಂದ ಸಾಧ್ಯವಾಗುತ್ತಿಲ್ಲ. ಭೂಮಿ ಪರಿಹಾರ ನೀಡಿದರೆ ಚಿಕ್ಕ ಸೂರನ್ನಾದರೂ ಕಟ್ಟಿಕೊಳ್ಳುತ್ತೇವೆ ಎಂದು ಅಂಗಲಾಚುತ್ತಿದೆ ಕುಟುಂಬ. ಕೂಡಲೇ ಜಿಲ್ಲಾಡಳಿತ ನೊಂದ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೆಬೆಟ್ಟು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ರಾಷ್ಟ್ರೀಯ ಹೆದ್ದಾರಿ 169 ‘ಎ’ ರಸ್ತೆ ವಿಸ್ತರಣೆಗೆ ಪರ್ಕಳದಲ್ಲಿ ವಾಸದ ಮನೆಯನ್ನು ಕಳೆದುಕೊಂಡ ಕುಟುಂಬವೊಂದು ಮನೆಯ ಹಿಂದಿದ್ದ ಮುರುಕು ಶೆಡ್ನಲ್ಲಿ ಅನಿವಾರ್ಯವಾಗಿ ವಾಸ ಮಾಡಬೇಕಾದ ದುಸ್ಥಿತಿ ಎದುರಾಗಿದೆ.</p>.<p>ಪರ್ಕಳದಲ್ಲಿ ಮುಖ್ಯ ರಸ್ತೆಗೆ ಅಂಟಿಕೊಂಡಂತಿದ್ದ ಜಾಗದಲ್ಲಿದ್ದ ಮನೆಯನ್ನು ಕಳೆದುಕೊಂಡಿರುವ ಶಂಕರಣ್ಣ(74), ಪ್ರಫುಲ್ಲ ಶೆಟ್ಟಿಗಾರ್ (65), ಪ್ರಮಿಳಾ ಶೆಟ್ಟಿಗಾರ್ (50) ಕುಟುಂಬ ವಾಸಕ್ಕೆ ಯೋಗ್ಯ ಜಾಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ಭೂಮಿ ಮನೆ ಕಳೆದುಕೊಂಡಿದ್ದು, ಹಿಂಬದಿ ಜಾಗ ಕುಟುಂಬದವರಿಗೆ ಸೇರಿದ್ದು, ಆಸ್ತಿ ವಿಂಗಡಣೆಯಾಗಬೇಕಿದೆ. ಹಾಗಾಗಿ, ಸದ್ಯ ಶೆಡ್ನಲ್ಲಿಯೇ ವಾಸ ಮಾಡಬೇಕಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.</p>.<p>ಮಳೆ ಬಂದರೆ ಇಡೀ ಕುಟುಂಬ ಸಂಬಂಧಿಕರ ಮನೆಗೆ ಹೋಗಿ ಉಳಿಯಬೇಕು. ಹಿರಿಯಣ್ಣ ಶಂಕರಣ್ಣ ಮನೆಯ ಎದುರಿಗಿದ್ದ ಪ್ರೆಸ್ನಲ್ಲಿ ಬುಕ್ ಬೈಂಡಿಂಗ್ ಮಾಡುವ ಕೆಲಸ ಮಾಡಿ ಕುಟುಂಬಕ್ಕೆ ಆಧಾರವಾಗಿದ್ದರು. ರಸ್ತೆ ವಿಸ್ತರಣೆಯಿಂದ ಪ್ರೆಸ್ ಕೂಡ ಸ್ಥಳಾಂತರವಾಗಿದ್ದು ಉದ್ಯೋಗ ಕಳೆದುಕೊಂಡಿದ್ದಾರೆ.</p>.<p>ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ಭೂಮಿ ಪರಿಹಾರ ಕೂಡ ಬಿಡುಗಡೆಯಾಗಿಲ್ಲ. ಕೊರೊನಾ ಸಂಕಷ್ಟದ ಸಂದರ್ಭ ಜೀವನ ಸಾಗಿಸುವುದು ಹೇಗೆ ಎಂದು ಕುಟುಂಬ ಪ್ರಶ್ನಿಸಿದೆ. ಅಧಿಕಾರಿಗಳಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಕಾಮಗಾರಿಗೆ ತಡೆಯಾಜ್ಞೆ ಇದೆ ಎಂದು ಹೇಳುತ್ತಾರೆ. ತರಾತುರಿಯಲ್ಲಿ ಮನೆ ನೆಲಸಮ ಮಾಡಿದ ಜಿಲ್ಲಾಡಳಿತ ಕೈಕಟ್ಟಿ ಕುಳಿತಿರುವುದು ಸರಿಯಲ್ಲ ಎಂದು ಪ್ರಪುಲ್ಲಾ ಶೆಟ್ಟಿಗಾರ್ ಕಣ್ಣೀರು ಹಾಕುತ್ತಾರೆ.</p>.<p>ಸ್ವಂತ ಜಾಗದಲ್ಲಿ ಮನೆಕಟ್ಟಿಕೊಳ್ಳಲು ನಗರಸಭೆಯ ಅನುಮತಿ ಪ್ರಾಧಿಕಾರದ ಅನುಮತಿ ಅಗತ್ಯವಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವುದರಿಂದ ಸಾಧ್ಯವಾಗುತ್ತಿಲ್ಲ. ಭೂಮಿ ಪರಿಹಾರ ನೀಡಿದರೆ ಚಿಕ್ಕ ಸೂರನ್ನಾದರೂ ಕಟ್ಟಿಕೊಳ್ಳುತ್ತೇವೆ ಎಂದು ಅಂಗಲಾಚುತ್ತಿದೆ ಕುಟುಂಬ. ಕೂಡಲೇ ಜಿಲ್ಲಾಡಳಿತ ನೊಂದ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೆಬೆಟ್ಟು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>