ರಾಜಕೀಯ ಚರ್ಚೆ, ಹೋರಾಟ, ಹರಟೆ, ಸುಖಃ, ದುಃಖ, ವಿಚಾರ ವಿನಿಮಯಗಳ ಹಂಚಿಕೆಗೆ ವೇದಿಕೆಯಾಗಿದ್ದ ರೇಡಿಯೋ ಟವರ್, ನಿರ್ವಹಣೆ ಕೊರತೆಯಿಂದಾಗಿ ಪ್ರಸಾರ ಸ್ಥಗಿತಗೊಳಿಸಿ ಮೌನಕ್ಕೆ ಜಾರಿತ್ತು. ಟಿವಿ ಮಾಧ್ಯಮಗಳ ಭರಾಟೆಯ ನಡುವೆ ಅದರ ದುರಸ್ತಿಯ ಬಗ್ಗೆ ಆಡಳಿತ ವ್ಯವಸ್ಥೆಯೂ ಅಸ್ಥೆ ವಹಿಸಲಿಲ್ಲ. ಆಗಾಗ, ಹಿರಿಯ ನಾಗರಿಕರು ಮನವಿ ಸಲ್ಲಿಸಿ ಒತ್ತಾಯ ಮಾಡಿದರೂ ಸ್ಪಂದನ ಸಿಕ್ಕಿರಲಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರು.