<p><strong>ಉಡುಪಿ:</strong> ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬೆಳೆಗಾರರು ಈ ಬಾರಿ ಹಬ್ಬದ ಋತುವಲ್ಲಿಯೇ ಇಳುವರಿ ಕುಸಿತದಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ.</p>.<p>ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಒಂದು ಅಟ್ಟಿ ಶಂಕರಪುರ ಮಲ್ಲಿಗೆಯ ದರ ₹2,100 ಕ್ಕೆ ಏರಿಕೆಯಾಗಿದೆ. ಆದರೆ ಗಿಡಗಳಲ್ಲಿ ಮಲ್ಲಿಗೆ ಮೊಗ್ಗುಗಳೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬೆಳೆಗಾರರು.</p>.<p>ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮಲ್ಲಿಗೆ ಗಿಡಗಳ ಬುಡದಲ್ಲಿ ಮಳೆ ನೀರು ನಿಂತು ಗಿಡಗಳ ಕಾಂಡ ಕೊಳೆತು ಇಳುವರಿ ಕುಸಿತವಾಗಿದೆ. ಕೆಲವೆಡೆ ಗಿಡಗಳೇ ನಾಶವಾಗಿವೆ ಎಂದೂ ಹೇಳುತ್ತಾರೆ.</p>.<p>ಶಂಕರಪುರ ಮಲ್ಲಿಗೆಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ದೇವಾಲಯಗಳಲ್ಲಿ ದೇವರ ಅಲಂಕಾರಕ್ಕೆ, ಧಾರ್ಮಿಕ ಸಮಾರಂಭಗಳು, ಮದುವೆ, ಹಬ್ಬ ಹರಿದಿನಗಳಲ್ಲೂ ಇಲ್ಲಿನ ಜನರು ಈ ಮಲ್ಲಿಗೆಯನ್ನೇ ಬಳಸುತ್ತಾರೆ.</p>.<p>ಬೆಂಗಳೂರು, ಮುಂಬೈ ಸೇರಿದಂತೆ ಕರಾವಳಿಯವರು ನೆಲೆಸಿರುವ ಕಡೆಗಳಲ್ಲೂ ಶಂಕರಪುರ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿನ ಮಾರಾಟಗಾರರು ಮಲ್ಲಿಗೆಯನ್ನು ಕಳುಹಿಸಿಕೊಡುತ್ತಾರೆ.</p>.<p>ಈ ಬಾರಿ ಮಲ್ಲಿಗೆ ಹೂವುಗಳ ಇಳುವರಿ ತೀರಾ ಕುಸಿತವಾಗಿರುವ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ದೇವರ ಅಲಂಕಾರಕ್ಕೂ ಶಂಕರಪುರ ಮಲ್ಲಿಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮಲ್ಲಿಗೆ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು.</p>.<p>ಶಂಕರಪುರ ಮಲ್ಲಿಗೆಯನ್ನು ಬಾಳೆದಿಂಡಿನ ನಾರು ಬಳಸಿ, ಮೊಗ್ಗುಗಳನ್ನು ಕಟ್ಟಲಾಗುತ್ತದೆ ಈ ಕಾರಣಕ್ಕೆ ದೇವಾಲಯಗಳಲ್ಲಿ ದೇವರ ಅಲಂಕಾರಕ್ಕಾಗಿ ಈ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎನ್ನುತ್ತಾರೆ ಅವರು.</p>.<p>ಹಬ್ಬದ ಋತುಗಳನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ಅಟ್ಟಿ ಮಲ್ಲಿಗೆಯ ದರ ₹500 ರಿಂದ 800 ರ ನಡುವೆ ಇರುತ್ತದೆ. ಸುಮಾರು 800 ಮೊಗ್ಗುಗಳಿರುವ ಗುಚ್ಛಕ್ಕೆ ಒಂದು ಚೆಂಡು ಎಂದು ಕರೆಯಲಾಗುತ್ತದೆ. ಇಂತಹ ನಾಲ್ಕು ಜನ ಸೇರಿ ಒಂದು ಅಟ್ಟಿಯಾಗುತ್ತದೆ.</p>.<p>‘ಹೂವಿನ ಕೊರತೆಯಿಂದಾಗಿ ಈ ಬಾರಿ ಪಿತೃಪಕ್ಷದಲ್ಲೇ ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ ₹2,100 ಇತ್ತು. ಬೇಡಿಕೆ ಜಾಸ್ತಿ ಇದೆ, ಆದರೆ ಮಲ್ಲಿಗೆ ಸಿಗುತ್ತಿಲ್ಲ’ ಎನ್ನುತ್ತಾರೆ ಶಂಕರಪುರದ ಮಲ್ಲಿಗೆ ಮಾರಾಟಗಾರ ಆರಿಫ್.</p>.<div><blockquote>ಬಿಸಿಲಿನ ವಾತಾವರಣವಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಮಲ್ಲಿಗೆ ಸಿಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಬಿಸಿಲೇ ಕಾಣದೆ ಮಲ್ಲಿಗೆ ಇಳುವರಿ ಕುಸಿದಿದೆ.</blockquote><span class="attribution">-ರಾಮಕೃಷ್ಣ ಶರ್ಮ, ಬಂಟಕಲ್ಲು ಮಲ್ಲಿಗೆ ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿರುವ ಉಡುಪಿಯ ಶಂಕರಪುರ ಮಲ್ಲಿಗೆ ಬೆಳೆಗಾರರು ಈ ಬಾರಿ ಹಬ್ಬದ ಋತುವಲ್ಲಿಯೇ ಇಳುವರಿ ಕುಸಿತದಿಂದಾಗಿ ಸಂಕಷ್ಟಕ್ಕೊಳಗಾಗಿದ್ದಾರೆ.</p>.<p>ನವರಾತ್ರಿ ಹಬ್ಬ ಆರಂಭವಾಗುತ್ತಿದ್ದಂತೆ ಒಂದು ಅಟ್ಟಿ ಶಂಕರಪುರ ಮಲ್ಲಿಗೆಯ ದರ ₹2,100 ಕ್ಕೆ ಏರಿಕೆಯಾಗಿದೆ. ಆದರೆ ಗಿಡಗಳಲ್ಲಿ ಮಲ್ಲಿಗೆ ಮೊಗ್ಗುಗಳೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಬೆಳೆಗಾರರು.</p>.<p>ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮಲ್ಲಿಗೆ ಗಿಡಗಳ ಬುಡದಲ್ಲಿ ಮಳೆ ನೀರು ನಿಂತು ಗಿಡಗಳ ಕಾಂಡ ಕೊಳೆತು ಇಳುವರಿ ಕುಸಿತವಾಗಿದೆ. ಕೆಲವೆಡೆ ಗಿಡಗಳೇ ನಾಶವಾಗಿವೆ ಎಂದೂ ಹೇಳುತ್ತಾರೆ.</p>.<p>ಶಂಕರಪುರ ಮಲ್ಲಿಗೆಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ. ದೇವಾಲಯಗಳಲ್ಲಿ ದೇವರ ಅಲಂಕಾರಕ್ಕೆ, ಧಾರ್ಮಿಕ ಸಮಾರಂಭಗಳು, ಮದುವೆ, ಹಬ್ಬ ಹರಿದಿನಗಳಲ್ಲೂ ಇಲ್ಲಿನ ಜನರು ಈ ಮಲ್ಲಿಗೆಯನ್ನೇ ಬಳಸುತ್ತಾರೆ.</p>.<p>ಬೆಂಗಳೂರು, ಮುಂಬೈ ಸೇರಿದಂತೆ ಕರಾವಳಿಯವರು ನೆಲೆಸಿರುವ ಕಡೆಗಳಲ್ಲೂ ಶಂಕರಪುರ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆಗೆ ಅನುಗುಣವಾಗಿ ಇಲ್ಲಿನ ಮಾರಾಟಗಾರರು ಮಲ್ಲಿಗೆಯನ್ನು ಕಳುಹಿಸಿಕೊಡುತ್ತಾರೆ.</p>.<p>ಈ ಬಾರಿ ಮಲ್ಲಿಗೆ ಹೂವುಗಳ ಇಳುವರಿ ತೀರಾ ಕುಸಿತವಾಗಿರುವ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ದೇವರ ಅಲಂಕಾರಕ್ಕೂ ಶಂಕರಪುರ ಮಲ್ಲಿಗೆ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಮಲ್ಲಿಗೆ ಕೃಷಿಕ ರಾಮಕೃಷ್ಣ ಶರ್ಮ ಬಂಟಕಲ್ಲು.</p>.<p>ಶಂಕರಪುರ ಮಲ್ಲಿಗೆಯನ್ನು ಬಾಳೆದಿಂಡಿನ ನಾರು ಬಳಸಿ, ಮೊಗ್ಗುಗಳನ್ನು ಕಟ್ಟಲಾಗುತ್ತದೆ ಈ ಕಾರಣಕ್ಕೆ ದೇವಾಲಯಗಳಲ್ಲಿ ದೇವರ ಅಲಂಕಾರಕ್ಕಾಗಿ ಈ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎನ್ನುತ್ತಾರೆ ಅವರು.</p>.<p>ಹಬ್ಬದ ಋತುಗಳನ್ನು ಬಿಟ್ಟು ಉಳಿದ ಸಂದರ್ಭಗಳಲ್ಲಿ ಅಟ್ಟಿ ಮಲ್ಲಿಗೆಯ ದರ ₹500 ರಿಂದ 800 ರ ನಡುವೆ ಇರುತ್ತದೆ. ಸುಮಾರು 800 ಮೊಗ್ಗುಗಳಿರುವ ಗುಚ್ಛಕ್ಕೆ ಒಂದು ಚೆಂಡು ಎಂದು ಕರೆಯಲಾಗುತ್ತದೆ. ಇಂತಹ ನಾಲ್ಕು ಜನ ಸೇರಿ ಒಂದು ಅಟ್ಟಿಯಾಗುತ್ತದೆ.</p>.<p>‘ಹೂವಿನ ಕೊರತೆಯಿಂದಾಗಿ ಈ ಬಾರಿ ಪಿತೃಪಕ್ಷದಲ್ಲೇ ಶಂಕರಪುರ ಮಲ್ಲಿಗೆಯ ದರ ಅಟ್ಟಿಗೆ ₹2,100 ಇತ್ತು. ಬೇಡಿಕೆ ಜಾಸ್ತಿ ಇದೆ, ಆದರೆ ಮಲ್ಲಿಗೆ ಸಿಗುತ್ತಿಲ್ಲ’ ಎನ್ನುತ್ತಾರೆ ಶಂಕರಪುರದ ಮಲ್ಲಿಗೆ ಮಾರಾಟಗಾರ ಆರಿಫ್.</p>.<div><blockquote>ಬಿಸಿಲಿನ ವಾತಾವರಣವಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ಮಲ್ಲಿಗೆ ಸಿಗುತ್ತದೆ. ಈ ಬಾರಿ ಮಳೆಗಾಲದಲ್ಲಿ ಬಿಸಿಲೇ ಕಾಣದೆ ಮಲ್ಲಿಗೆ ಇಳುವರಿ ಕುಸಿದಿದೆ.</blockquote><span class="attribution">-ರಾಮಕೃಷ್ಣ ಶರ್ಮ, ಬಂಟಕಲ್ಲು ಮಲ್ಲಿಗೆ ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>