ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರ್ವ: ಚುರುಕುಗೊಳ್ಳದ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ 

Published : 4 ಜುಲೈ 2024, 7:10 IST
Last Updated : 4 ಜುಲೈ 2024, 7:10 IST
ಫಾಲೋ ಮಾಡಿ
Comments
ಉದ್ಯಾವರ ಪಡುಕರೆಯಲ್ಲಿ ಮೀನುಗಾರರು ನಾಡದೋಣಿಗೆ ಬಲೆಯನ್ನು ತುಂಬಿಸುತ್ತಿರುವುದು.
ಉದ್ಯಾವರ ಪಡುಕರೆಯಲ್ಲಿ ಮೀನುಗಾರರು ನಾಡದೋಣಿಗೆ ಬಲೆಯನ್ನು ತುಂಬಿಸುತ್ತಿರುವುದು.
ಸಮುದ್ರ ಮಧ್ಯೆ ತೂಫಾನ್ ಆಗದೆ ಸಮಸ್ಯೆ
ಸಮುದ್ರ ಮಧ್ಯೆ ಈ ಬಾರಿ ಯಾಂತ್ರಿಕ ಋತುವಿನಲ್ಲಿ ಸರಿಯಾದ ತೂಫಾನ್ ಆಗದೆ ಮೀನುಗಾರಿಕೆ ಆಶಾದಾಯಕವಾಗಿರಲಿಲ್ಲ. ಮಳೆಗಾಲದಲ್ಲಿ ತೂಫಾನ್ ಆಗಿ ಸಮುದ್ರ ಪ್ರಕ್ಷುಬ್ದಗೊಂಡು ಕಡಲಾಳದ ಮಣ್ಣು ಮೇಲೆ ಬಂದಾಗ ಮೀನಿನ ಲಕ್ಷಣ ಕಾಣಿಸಿಕೊಳ್ಳುತ್ತದೆ. ಈ ವೇಳೆ ಪ್ರಕ್ಷುಬ್ದ ಸಮುದ್ರ ಅಲ್ಲಲ್ಲಿ ಶಾಂತತೆ ಕಾಯ್ದುಕೊಂಡರೆ ಮೀನುಗಾರಿಕೆಗೆ ಆನುಕೂಲವಾಗುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಉತ್ತಮ ಮಳೆಯಾದರೆ ನದಿ ಮೂಲಕ ಮಳೆ ನೀರು ಕಡಲ ಒಡಲು ಸೇರುತ್ತದೆ. ನದಿ ಮೂಲಕ ಕಡಲು ಸೇರಿದ ಕೆಂಪುನೀರಿನ ವಾಸನೆಗೆ ಮೀನು ಮೊಟ್ಟೆ ಇಡಲು ಧಾವಿಸಿ ಬರುತ್ತವೆ. ಆಳಸಮುದ್ರದಿಂದ ಸಂತಾನೋತ್ಪತ್ತಿಗೆ ಬರುವ ಮೀನು ಸಮುದ್ರ ತೀರ ಸಮುದ್ರ–ನದಿ ಸೇರುವ ಸಂಗಮಗಳಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆ ಇಟ್ಟ ಮೀನು ನಂತರ ಆಳಸಮುದ್ರಕ್ಕೆ ಹೊರಡಲು ಅಣಿಯಾಗುತ್ತವೆ. ಇದೇ ಸಂದರ್ಭದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಯುವುದರಿಂದ ಈ ಮೀನುಗಳೇ ಮೀನುಗಾರರ ಬಲೆಗೆ ಬೀಳುತ್ತವೆ ಎಂದು ಉದ್ಯಾವರ ಪಡುಕರೆ ಯೋಗೀಶ್ ಸಾಲ್ಯಾನ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT