ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಬಿಡುಗಡೆಯಾಗದ ಮಲ್ಪೆ ಬೋಟ್‌: ಕರಾವಳಿ ಕಾವಲು ಪಡೆ ಸ್ಪಷ್ಟನೆ

Last Updated 14 ಫೆಬ್ರುವರಿ 2020, 9:21 IST
ಅಕ್ಷರ ಗಾತ್ರ

ಉಡುಪಿ:ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಶ್ರೀಲಕ್ಷ್ಮೀ ಬೋಟ್ ಮಹಾರಾಷ್ಟ್ರದ ಕೋಸ್ಟ್‌ಗಾರ್ಡ್‌ ಇಲಾಖೆಯ ವಶದಲ್ಲಿದ್ದು, ಬಿಡುಗಡೆಯಾಗಿಲ್ಲ ಎಂದುಕರಾವಳಿ ಕಾವಲು ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಜ್ಯದ ಮೀನುಗಾರರನ್ನು ಬಂಧಿಸಿಲ್ಲ. ಬೋಟ್‌ ಹಾಗೂ ಅದರಲ್ಲಿದ್ದ ಮೀನನ್ನು ಮಾತ್ರ ವಶಕ್ಕೆ ಪಡೆಯಲಾಗಿದೆ. ಮೀನುಗಾರರು ಬೋಟ್‌ನೊಂದಿಗೆ ಅಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆ ಹಿನ್ನೆಲೆ:ಫೆ.12ರಂದು ನಸುಕಿನಲ್ಲಿ ಮಾಲ್ವಾನ್ ಸಮುದ್ರ ತೀರ ಪ್ರವೇಶಿಸಿದ ಮಲ್ಪೆಯ ಶ್ರೀಲಕ್ಷ್ಮೀ ಬೋಟ್‌ ಅನ್ನು ಕೋಸ್ಟ್‌ಗಾರ್ಡ್‌ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ಭಟ್ಕಳದ ರಾಮ, ವೆಂಕಟೇಶ್‌, ಕುಮಟಾದ ಗಣಪತಿ, ವಿನಾಯಕ, ಹೊನ್ನಾವರದ ಮಂಜು, ಗೋವಿಂದ, ಅಂಕೋಲಾದ ರಾಜು ಬೋಟ್‌ನಲ್ಲಿದ್ದರು.ಕುಂದಾಪುರದ ಅಂಕಿತ್ ಶೆಟ್ಟಿ ಬೋಟ್‌ನ ಮಾಲೀಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT