<p><strong>ಉಡುಪಿ:</strong> ಕೃತಕ ಬುದ್ಧಿಮತ್ತೆ (ಎಐ) ಇಂದು ಮನುಷ್ಯನನ್ನು ಮೀರಿಸಿದೆ. ಬೌದ್ಧಿಕ ಕಸರತ್ತುಗಳನ್ನು ಅದು ನಮಗಿಂತಲೂ ವೇಗವಾಗಿ ಮಾಡುತ್ತಿದೆ. ಆದ್ದರಿಂದ ಎ.ಐ. ವೇದಾಂತ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಮಧ್ವ ಜಯಂತಿಯ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಶಾಸ್ತ್ರಗಳ ಪ್ರಕಾರ ಜ್ಞಾನ ಇರುವವನೇ ಜೀವ ಎಂದಾಗಿದೆ. ಆದರೆ, ಮಧ್ವಾಚಾರ್ಯರು ಭಾವನೆಯಾಧರಿತವಾದುದು ಜೀವ ಎಂದಿದ್ದಾರೆ. ಜ್ಞಾನಾಧಾರಿತವಾದುದು ಜೀವವಲ್ಲ ಎಂದೂ ಹೇಳಿದ್ದಾರೆ. ಅದು ಇಂದಿನ ಎ.ಐ. ಯುಗಕ್ಕೆ ಅನ್ವಯಿಸುತ್ತದೆ ಎಂದರು.</p>.<p>ಎ.ಐ.ಗೆ ಬೌದ್ಧಿಕ ಸಾಮರ್ಥ್ಯ ಇದ್ದರೂ ಭಕ್ತಿ, ವೈರಾಗ್ಯ ಇತ್ಯಾದಿ ಸಾಮರ್ಥ್ಯ ಬರಲು ಸಾಧ್ಯವಿಲ್ಲ. ಆದ್ದರಿಂದ ಜೀವ ಇರುವವವರೇ ಶ್ರೇಷ್ಠರು ಎಂದು ಹೇಳಿದರು.</p>.<p>ಹೊಸತನ್ನು ವಿಮರ್ಶೆ ಮಾಡುವುದು ಆಚಾರ್ಯರ ಮೂಲ ಸಿದ್ಧಾಂತವಾಗಿದೆ. ಅವರು ಹೊಸ ಹೊಸ ವಿಚಾರಗಳನ್ನು ಮಂಡನೆ ಮಾಡಿ, ಆ ಮೂಲಕ ಜ್ಞಾನಕ್ರಾಂತಿಗೆ ಕಾರಣರಾಗಿದ್ದರು ಎಂದೂ ಪ್ರತಿಪಾದಿಸಿದರು.</p>.<p>ಪ್ರತಿಯೊಬ್ಬರಲ್ಲೂ ಚಿಂತನೆ ಪ್ರವರ್ಧಮಾನವಾಗಿರಬೇಕು ಎಂಬುದು ಮಧ್ವಾಚಾರ್ಯರ ಮೂಲ ಉದ್ದೇಶವಾಗಿತ್ತು. ಚಿಂತನೆಯು ನಿಂತ ನೀರಾಗಿರಬಾರದು. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ನಮ್ಮ ಜ್ಞಾನವು ಬೆಳೆಯಬೇಕು ಎಂದು ತಿಳಿಸಿದರು.</p>.<p>ಜ್ಞಾನದಲ್ಲಿ ಎರಡು ವಿಧ. ಒಂದು ದಾಖಲೀಕರಣಗೊಂಡಿರುವ ಜ್ಞಾನವಾದರೆ ಇನ್ನೊಂದು ರಾಡರ್ನಂತೆ ಯಾವುದಾದರೂ ಹೊಸತು ಬಂದರೆ ಅದನ್ನು ಗ್ರಹಿಸುತ್ತಾ ಅದನ್ನು ವಿಮರ್ಶೆಗೆ ಒಳಪಡಿಸುವಂತದ್ದು. ನಮ್ಮಲ್ಲಿ ಯಾವಾಗಲೂ ತೆರೆದ ಮನಸ್ಸು ಇರಬೇಕು. ಹೊಸ ವಿಚಾರಗಳು ಬಂದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಇರಬೇಕು ಎಂದರು.</p>.<p>‘ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ ಎಂಬ ವಿಷಯದ ಕುರಿತು ಕೃಷ್ಣರಾಜ ಕುತ್ಪಾಡಿ ಮತ್ತು ಪ್ರತೋಷ್ ಎ.ಪಿ. ಮಾತನಾಡಿದರು ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.</p>.<p>ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಡಾ. ಸುರೇಶ್ ರಾವ್, ಸಿ.ಆರ್. ಮುರಳಿ ಪಣಿಯಾಡಿ, ಮುರಳಿ ತಂತ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಕೃತಕ ಬುದ್ಧಿಮತ್ತೆ (ಎಐ) ಇಂದು ಮನುಷ್ಯನನ್ನು ಮೀರಿಸಿದೆ. ಬೌದ್ಧಿಕ ಕಸರತ್ತುಗಳನ್ನು ಅದು ನಮಗಿಂತಲೂ ವೇಗವಾಗಿ ಮಾಡುತ್ತಿದೆ. ಆದ್ದರಿಂದ ಎ.ಐ. ವೇದಾಂತ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ಮಧ್ವ ಜಯಂತಿಯ ಅಂಗವಾಗಿ ಕೃಷ್ಣ ಮಠದ ರಾಜಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>ಶಾಸ್ತ್ರಗಳ ಪ್ರಕಾರ ಜ್ಞಾನ ಇರುವವನೇ ಜೀವ ಎಂದಾಗಿದೆ. ಆದರೆ, ಮಧ್ವಾಚಾರ್ಯರು ಭಾವನೆಯಾಧರಿತವಾದುದು ಜೀವ ಎಂದಿದ್ದಾರೆ. ಜ್ಞಾನಾಧಾರಿತವಾದುದು ಜೀವವಲ್ಲ ಎಂದೂ ಹೇಳಿದ್ದಾರೆ. ಅದು ಇಂದಿನ ಎ.ಐ. ಯುಗಕ್ಕೆ ಅನ್ವಯಿಸುತ್ತದೆ ಎಂದರು.</p>.<p>ಎ.ಐ.ಗೆ ಬೌದ್ಧಿಕ ಸಾಮರ್ಥ್ಯ ಇದ್ದರೂ ಭಕ್ತಿ, ವೈರಾಗ್ಯ ಇತ್ಯಾದಿ ಸಾಮರ್ಥ್ಯ ಬರಲು ಸಾಧ್ಯವಿಲ್ಲ. ಆದ್ದರಿಂದ ಜೀವ ಇರುವವವರೇ ಶ್ರೇಷ್ಠರು ಎಂದು ಹೇಳಿದರು.</p>.<p>ಹೊಸತನ್ನು ವಿಮರ್ಶೆ ಮಾಡುವುದು ಆಚಾರ್ಯರ ಮೂಲ ಸಿದ್ಧಾಂತವಾಗಿದೆ. ಅವರು ಹೊಸ ಹೊಸ ವಿಚಾರಗಳನ್ನು ಮಂಡನೆ ಮಾಡಿ, ಆ ಮೂಲಕ ಜ್ಞಾನಕ್ರಾಂತಿಗೆ ಕಾರಣರಾಗಿದ್ದರು ಎಂದೂ ಪ್ರತಿಪಾದಿಸಿದರು.</p>.<p>ಪ್ರತಿಯೊಬ್ಬರಲ್ಲೂ ಚಿಂತನೆ ಪ್ರವರ್ಧಮಾನವಾಗಿರಬೇಕು ಎಂಬುದು ಮಧ್ವಾಚಾರ್ಯರ ಮೂಲ ಉದ್ದೇಶವಾಗಿತ್ತು. ಚಿಂತನೆಯು ನಿಂತ ನೀರಾಗಿರಬಾರದು. ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯಲ್ಲಿ ನಮ್ಮ ಜ್ಞಾನವು ಬೆಳೆಯಬೇಕು ಎಂದು ತಿಳಿಸಿದರು.</p>.<p>ಜ್ಞಾನದಲ್ಲಿ ಎರಡು ವಿಧ. ಒಂದು ದಾಖಲೀಕರಣಗೊಂಡಿರುವ ಜ್ಞಾನವಾದರೆ ಇನ್ನೊಂದು ರಾಡರ್ನಂತೆ ಯಾವುದಾದರೂ ಹೊಸತು ಬಂದರೆ ಅದನ್ನು ಗ್ರಹಿಸುತ್ತಾ ಅದನ್ನು ವಿಮರ್ಶೆಗೆ ಒಳಪಡಿಸುವಂತದ್ದು. ನಮ್ಮಲ್ಲಿ ಯಾವಾಗಲೂ ತೆರೆದ ಮನಸ್ಸು ಇರಬೇಕು. ಹೊಸ ವಿಚಾರಗಳು ಬಂದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ಇರಬೇಕು ಎಂದರು.</p>.<p>‘ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ ಎಂಬ ವಿಷಯದ ಕುರಿತು ಕೃಷ್ಣರಾಜ ಕುತ್ಪಾಡಿ ಮತ್ತು ಪ್ರತೋಷ್ ಎ.ಪಿ. ಮಾತನಾಡಿದರು ಷಣ್ಮುಖ ಹೆಬ್ಬಾರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.</p>.<p>ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಡಾ. ಸುರೇಶ್ ರಾವ್, ಸಿ.ಆರ್. ಮುರಳಿ ಪಣಿಯಾಡಿ, ಮುರಳಿ ತಂತ್ರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>