<p><strong>ಉಡುಪಿ</strong>: ಹೊಸ ವರ್ಷದ ಆರಂಭದಲ್ಲೇ ತರಕಾರಿ, ಹಣ್ಣು ಹಂಪಲುಗಳ ಬೆಲೆ ತುಟ್ಟಿಯಾಗಿ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.</p>.<p>ಕಳೆದ ಕೆಲವು ತಿಂಗಳುಗಳಿಂದ ಕೆ.ಜಿಗೆ ₹80ರಿಂದ ₹90ರ ಗಡಿಯಲ್ಲಿದ್ದ ತೊಂಡೆಕಾಯಿ ದರವು ₹140ಕ್ಕೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿದೆ.</p>.<p>ಸಗಟು ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದರಿಂದ ತೊಂಡೆಕಾಯಿ ದರ ಅಧಿಕವಾಗಿದೆ ಎಂದು ಮಾರಾಟಗಾರರು ಹೇಳುತ್ತಾರೆ.</p>.<p>ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ತೊಂಡೆಕಾಯಿ ದರ ಇಳಿಕೆಯಾಗುತ್ತದೆ. ಈ ಬಾರಿ ದಿಢೀರನೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ತರಕಾರಿ ಮಾರಾಟಗಾರ ಜಯಾನಂದ.</p>.<p>ಅಯ್ಯಪ್ಪ ಮಾಲಾಧಾರಣೆ ಋತು ಆರಂಭವಾಗುತ್ತಿದ್ದಂತೆ ತರಕಾರಿ ದರ ಸಾಮಾನ್ಯವಾಗಿ ಏರಿಕೆಯಾಗುತ್ತದೆ. ಜನವರಿ ಆರಂಭವಾಗುತ್ತಿದ್ದಂತೆ ಕೆಲವು ತರಕಾರಿಗಳ ದರ ಇಳಿಕೆಯಾಗುತ್ತಿತ್ತು. ಆದರೆ, ಈ ಬಾರಿ ಕೆಲ ತರಕಾರಿಗಳ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಅವರು.</p>.<p>ಬೀನ್ಸ್ ದರ ಕೆ.ಜಿ.ಗೆ ₹100ಕ್ಕೆ ಏರಿಕೆಯಾದರೆ, ಬೆಂಡೆಕಾಯಿ ದರವು ಕೆ.ಜಿಗೆ ₹90ಕ್ಕೆ ಏರಿದೆ. ಕಳೆದ ವಾರ ಬೀನ್ಸ್ ದರವು ಕೆ.ಜಿಗೆ ₹80 ಮತ್ತು ಬೆಂಡೆಕಾಯಿ ದರವು ಕೆ.ಜಿಗೆ ₹60 ಇತ್ತು.</p>.<p>ತೊಂಡೆಕಾಯಿ, ಬೀನ್ಸ್ ಮತ್ತು ಬೆಂಡೆಕಾಯಿ ದರವು ವಿಪರೀತ ಏರಿಕೆಯಾಗಿರುವುದರಿಂದ ಈ ತರಕಾರಿಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಮಾರಾಟಗಾರರ ಅಳಲಾಗಿದೆ.</p>.<p>ಕಳೆದ ವಾರ ಕೆ.ಜಿಗೆ ₹80ರ ಆಸುಪಾಸಿನಲ್ಲಿದ್ದ ಅಲಸಂಡೆ ದರ ₹110ಕ್ಕೆ ಏರಿಕೆಯಾಗಿದೆ. ಕೆ.ಜಿಗೆ ₹60 ಇದ್ದ ಸಿಹಿ ಗೆಣಸು ದರ ₹70 ಕ್ಕೇರಿದರೆ, ಕ್ಯಾರೆಟ್ ಹಾಗೂ ಹೀರೇಕಾಯಿ ದರ ಕೆ.ಜಿಗೆ ₹80 ಆಗಿದೆ.</p>.<p>ಇನ್ನು ಹಣ್ಣು ಹಂಪಲುಗಳ ದರವೂ ಏರುಮುಖವಾಗಿದೆ. ದಾಳಿಂಬೆ ದರ ಕೆ.ಜಿಗೆ ₹220 ಕ್ಕೇರಿದರೆ, ಆ್ಯಪಲ್ ಕೆ.ಜಿಗೆ ₹180ಕ್ಕೇರಿದೆ.</p>.<p>ಈ ಬಾರಿ ಡಿಸೆಂಬರ್ ತಿಂಗಳಿನಿಂದಲೇ ಬಿಸಿಲಿನ ಝಳ ಜಾಸ್ತಿಯಾಗಿದೆ. ಈ ಕಾರಣಕ್ಕೆ ತಂಪು ಪಾನೀಯ, ಹಣ್ಣಿನ ಜ್ಯೂಸ್ಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಜನವರಿ ಆರಂಭದಲ್ಲೇ ಹಣ್ಣುಗಳ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಬಳಿಯ ಹಣ್ಣಿನ ವ್ಯಾಪಾರಿ ಸಾದಿಕ್.</p>.<p>ದಾಳಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಅದರ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ ಎಂದು ಅವರು ಹೇಳುತ್ತಾರೆ.</p>.<p>ಕಳೆದ ವಾರ ಕೆ.ಜಿಗೆ ₹40 ಇದ್ದ ಪಪ್ಪಾಯ ಹಣ್ಣಿನ ಬೆಲೆ ಕೆ.ಜಿಗೆ ₹50ಕ್ಕೇರಿದರೆ, ಕೆ.ಜಿಗೆ ₹60ರ ಆಸುಪಾಸಿನಲ್ಲಿದ್ದ ನೇಂದ್ರ ಬಾಳೆ ಹಣ್ಣಿನ ದರವು ₹80ಕ್ಕೇರಿದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆಯು ಕೆ.ಜಿಗೆ ₹60 ಇದೆ.</p>.<div><blockquote>ಈ ಬಾರಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ತರಕಾರಿ ದರವು ಗಗನಕ್ಕೇರಿದೆ. ಮನೆಗೆ ಬೇಕಾದ ತರಕಾರಿ ಖರೀದಿಸಬೇಕಾದರೆ ದೊಡ್ಡ ಮೊತ್ತ ವ್ಯಯಿಸಬೇಕಾಗಿದೆ.</blockquote><span class="attribution">–ಶ್ರೀನಿವಾಸ, ಗ್ರಾಹಕ</span></div>.<div><blockquote>ಕೆಲವು ಹಣ್ಣು ಹಂಪಲುಗಳ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಬೆಲೆ ಜಾಸ್ತಿಯಾದರೂ ಖರೀದಿಸುವುದು ಅನಿವಾರ್ಯವಾಗಿದೆ.</blockquote><span class="attribution">–ಸೀತಾರಾಮ ಶೆಟ್ಟಿ, ಗ್ರಾಹಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ಹೊಸ ವರ್ಷದ ಆರಂಭದಲ್ಲೇ ತರಕಾರಿ, ಹಣ್ಣು ಹಂಪಲುಗಳ ಬೆಲೆ ತುಟ್ಟಿಯಾಗಿ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.</p>.<p>ಕಳೆದ ಕೆಲವು ತಿಂಗಳುಗಳಿಂದ ಕೆ.ಜಿಗೆ ₹80ರಿಂದ ₹90ರ ಗಡಿಯಲ್ಲಿದ್ದ ತೊಂಡೆಕಾಯಿ ದರವು ₹140ಕ್ಕೆ ಏರಿಕೆಯಾಗಿ ಗ್ರಾಹಕರ ಜೇಬಿಗೆ ಹೊರೆಯಾಗಿದೆ.</p>.<p>ಸಗಟು ಮಾರುಕಟ್ಟೆಯಲ್ಲಿ ಆವಕ ಕಡಿಮೆಯಾಗಿರುವುದರಿಂದ ತೊಂಡೆಕಾಯಿ ದರ ಅಧಿಕವಾಗಿದೆ ಎಂದು ಮಾರಾಟಗಾರರು ಹೇಳುತ್ತಾರೆ.</p>.<p>ಸಾಮಾನ್ಯವಾಗಿ ಜನವರಿ ತಿಂಗಳಲ್ಲಿ ತೊಂಡೆಕಾಯಿ ದರ ಇಳಿಕೆಯಾಗುತ್ತದೆ. ಈ ಬಾರಿ ದಿಢೀರನೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ತರಕಾರಿ ಮಾರಾಟಗಾರ ಜಯಾನಂದ.</p>.<p>ಅಯ್ಯಪ್ಪ ಮಾಲಾಧಾರಣೆ ಋತು ಆರಂಭವಾಗುತ್ತಿದ್ದಂತೆ ತರಕಾರಿ ದರ ಸಾಮಾನ್ಯವಾಗಿ ಏರಿಕೆಯಾಗುತ್ತದೆ. ಜನವರಿ ಆರಂಭವಾಗುತ್ತಿದ್ದಂತೆ ಕೆಲವು ತರಕಾರಿಗಳ ದರ ಇಳಿಕೆಯಾಗುತ್ತಿತ್ತು. ಆದರೆ, ಈ ಬಾರಿ ಕೆಲ ತರಕಾರಿಗಳ ಬೆಲೆ ಗಗನಕ್ಕೇರಿದೆ ಎನ್ನುತ್ತಾರೆ ಅವರು.</p>.<p>ಬೀನ್ಸ್ ದರ ಕೆ.ಜಿ.ಗೆ ₹100ಕ್ಕೆ ಏರಿಕೆಯಾದರೆ, ಬೆಂಡೆಕಾಯಿ ದರವು ಕೆ.ಜಿಗೆ ₹90ಕ್ಕೆ ಏರಿದೆ. ಕಳೆದ ವಾರ ಬೀನ್ಸ್ ದರವು ಕೆ.ಜಿಗೆ ₹80 ಮತ್ತು ಬೆಂಡೆಕಾಯಿ ದರವು ಕೆ.ಜಿಗೆ ₹60 ಇತ್ತು.</p>.<p>ತೊಂಡೆಕಾಯಿ, ಬೀನ್ಸ್ ಮತ್ತು ಬೆಂಡೆಕಾಯಿ ದರವು ವಿಪರೀತ ಏರಿಕೆಯಾಗಿರುವುದರಿಂದ ಈ ತರಕಾರಿಗಳನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಮಾರಾಟಗಾರರ ಅಳಲಾಗಿದೆ.</p>.<p>ಕಳೆದ ವಾರ ಕೆ.ಜಿಗೆ ₹80ರ ಆಸುಪಾಸಿನಲ್ಲಿದ್ದ ಅಲಸಂಡೆ ದರ ₹110ಕ್ಕೆ ಏರಿಕೆಯಾಗಿದೆ. ಕೆ.ಜಿಗೆ ₹60 ಇದ್ದ ಸಿಹಿ ಗೆಣಸು ದರ ₹70 ಕ್ಕೇರಿದರೆ, ಕ್ಯಾರೆಟ್ ಹಾಗೂ ಹೀರೇಕಾಯಿ ದರ ಕೆ.ಜಿಗೆ ₹80 ಆಗಿದೆ.</p>.<p>ಇನ್ನು ಹಣ್ಣು ಹಂಪಲುಗಳ ದರವೂ ಏರುಮುಖವಾಗಿದೆ. ದಾಳಿಂಬೆ ದರ ಕೆ.ಜಿಗೆ ₹220 ಕ್ಕೇರಿದರೆ, ಆ್ಯಪಲ್ ಕೆ.ಜಿಗೆ ₹180ಕ್ಕೇರಿದೆ.</p>.<p>ಈ ಬಾರಿ ಡಿಸೆಂಬರ್ ತಿಂಗಳಿನಿಂದಲೇ ಬಿಸಿಲಿನ ಝಳ ಜಾಸ್ತಿಯಾಗಿದೆ. ಈ ಕಾರಣಕ್ಕೆ ತಂಪು ಪಾನೀಯ, ಹಣ್ಣಿನ ಜ್ಯೂಸ್ಗೆ ಹೆಚ್ಚಿನ ಬೇಡಿಕೆ ಇದೆ. ಈ ಕಾರಣಕ್ಕೆ ಜನವರಿ ಆರಂಭದಲ್ಲೇ ಹಣ್ಣುಗಳ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಬಳಿಯ ಹಣ್ಣಿನ ವ್ಯಾಪಾರಿ ಸಾದಿಕ್.</p>.<p>ದಾಳಿಂಬೆ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಅದರ ದರ ಸಿಕ್ಕಾಪಟ್ಟೆ ಏರಿಕೆಯಾಗಿದೆ ಎಂದು ಅವರು ಹೇಳುತ್ತಾರೆ.</p>.<p>ಕಳೆದ ವಾರ ಕೆ.ಜಿಗೆ ₹40 ಇದ್ದ ಪಪ್ಪಾಯ ಹಣ್ಣಿನ ಬೆಲೆ ಕೆ.ಜಿಗೆ ₹50ಕ್ಕೇರಿದರೆ, ಕೆ.ಜಿಗೆ ₹60ರ ಆಸುಪಾಸಿನಲ್ಲಿದ್ದ ನೇಂದ್ರ ಬಾಳೆ ಹಣ್ಣಿನ ದರವು ₹80ಕ್ಕೇರಿದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆಯು ಕೆ.ಜಿಗೆ ₹60 ಇದೆ.</p>.<div><blockquote>ಈ ಬಾರಿ ಹೊಸ ವರ್ಷ ಆರಂಭವಾಗುತ್ತಿದ್ದಂತೆ ತರಕಾರಿ ದರವು ಗಗನಕ್ಕೇರಿದೆ. ಮನೆಗೆ ಬೇಕಾದ ತರಕಾರಿ ಖರೀದಿಸಬೇಕಾದರೆ ದೊಡ್ಡ ಮೊತ್ತ ವ್ಯಯಿಸಬೇಕಾಗಿದೆ.</blockquote><span class="attribution">–ಶ್ರೀನಿವಾಸ, ಗ್ರಾಹಕ</span></div>.<div><blockquote>ಕೆಲವು ಹಣ್ಣು ಹಂಪಲುಗಳ ಬೆಲೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಬೆಲೆ ಜಾಸ್ತಿಯಾದರೂ ಖರೀದಿಸುವುದು ಅನಿವಾರ್ಯವಾಗಿದೆ.</blockquote><span class="attribution">–ಸೀತಾರಾಮ ಶೆಟ್ಟಿ, ಗ್ರಾಹಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>