‘ಕಟಾವಿಗೆ ಬಂದಿರುವ ಹಣ್ಣು, ಅವುಗಳ ಮಾರುಕಟ್ಟೆ, ಮುಂಗಾರಿನ ಬೀಜ ಸಂಗ್ರಹ ಮತ್ತು ಮಾರಾಟ ವ್ಯವಸ್ಥೆ, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿರುವ ಬೀಜ, ಗೊಬ್ಬರಗಳು, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಇಂತಹ ಅಗತ್ಯ ಮಾಹಿತಿಯನ್ನು ರೈತರಿಗೆ ತಲುಪಿಸುತ್ತೇವೆ. ವಾಟ್ಸ್ಆ್ಯಪ್ ಗ್ರೂಪ್ಗಳ ಮೂಲಕ ರೈತರನ್ನು ತಲುಪಿಸಲು ಪ್ರಯತ್ನಿಸಲಾಗಿದೆ. ಆದರೆ, ಈ ವ್ಯವಸ್ಥೆ ಇನ್ನಷ್ಟು ಹೆಚ್ಚು ಜನರನ್ನು ತಲುಪಬೇಕಾಗಿದೆ. ನಾಲ್ಕು ದಿನಗಳಲ್ಲಿ 20ರಷ್ಟು ಕರೆಗಳು ಮಾತ್ರ ಬಂದಿವೆ. ದೂರವಾಣಿ ಕರೆ ಮಾಡುವ ರೈತರ ವಿಳಾಸ, ಸಂಪರ್ಕ ಸಂಖ್ಯೆ ಸಂಗ್ರಹಿಸುವ ಕಾಲೇಜು, ಮುಂದಿನ ದಿನಗಳಲ್ಲಿ, ವಿಜ್ಞಾನಿಗಳು ಕೈಗೊಳ್ಳುವ ಸಂಶೋಧನೆಗಳನ್ನು ಅವರಿಗೆ ತಲುಪಿಸುವ ಯೋಜನೆ ಹೊಂದಿದೆ’ ಎಂದು ಅವರು ವಿವರಿಸಿದರು.