<p><strong>ಸಿದ್ದಾಪುರ</strong>: ‘ಯಾವುದೇ ಪುಸ್ತಕದ ಓದು ಕೇವಲ ಒಬ್ಬರಿಗೆ ಮೀಸಲು ಆಗಬಾರದು. ಒಬ್ಬರು ಓದಿದ ನಂತರ ಅದು ಎಲ್ಲರಿಗೂ ತಲುಪಬೇಕು' ಎಂದು ಹಿರಿಯ ಸಾಹಿತಿ ನಾ.ಡಿಸೋಜ ಅಭಿಪ್ರಾಯಪಟ್ಟರು.</p>.<p>ಸ್ಥಳೀಯ ಸಂಸ್ಕೃತಿ ಸಂಪದ ಮತ್ತು ರಂಗ ಸೌಗಂಧದ ಆಶ್ರಯದಲ್ಲಿ ಪಟ್ಟಣದ ಶಂಕರ ಮಠದಲ್ಲಿ ಶುಕ್ರವಾರ ನಡೆದ, ಭಾರತಿ ಹೆಗಡೆ ಅವರ 'ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಈ ಕಥಾ ಸಂಕಲನದಲ್ಲಿ ಭಾರತಿ ಹೆಗಡೆ, ವಿಲಕ್ಷಣ ವ್ಯಕ್ತಿಗಳನ್ನು ಸೃಷ್ಟಿಸಿದ್ದಾರೆ. ಸಮಾಜ ಮತ್ತು ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ’ ಎಂದರು.</p>.<p>ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ,' ಈ ಕಥೆಗಳು ಕೇವಲ ಸಿದ್ದಾಪುರ ಸೀಮೆಯ ಕಥೆಗಳಲ್ಲ. ಇವು ಮನುಷ್ಯರಿರುವ ಯಾವುದೇ ಲೋಕದ ಕಥೆಗಳಾಗಿವೆ' ಎಂದರು. ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಕೃತಿ ಪರಿಚಯ ಮಾಡಿ,‘ಅಂಗಳದಿಂದ ಬೆಳದಿಂಗಳನ್ನು ಬೊಗಸೆಯಲ್ಲಿ ಹಿಡಿದು ಮನೆಯೊಳಗೆ ಬಂದ ಅನುಭವ ಯಾವುದೇ ಕಥೆ ಓದಿದಾಗ ಓದುಗನಿಗೆ ಆಗಬೇಕು. ಈ ಸಂಕಲನದ ಕಥೆಗಳಿಗೆ ಧ್ವನಿ ಶಕ್ತಿ ಇದೆ’ ಎಂದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.</p>.<p>ರಾಜೇಂದ್ರ ಕೊಳಗಿ ಪ್ರಾರ್ಥನಾ ಗೀತೆ ಹಾಡಿದರು. ಗಣಪತಿ ಹೆಗಡೆ ಹುಲೀಮನೆ ಸ್ವಾಗತಿಸಿದರು. ಲೇಖಕಿ ಭಾರತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪಾದ ಹೆಗಡೆ ಕೋಡನಮನೆ ನಿರೂಪಿಸಿದರು. ಗಣಪತಿ ಹೆಗಡೆ ಗುಂಜಗೋಡು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ</strong>: ‘ಯಾವುದೇ ಪುಸ್ತಕದ ಓದು ಕೇವಲ ಒಬ್ಬರಿಗೆ ಮೀಸಲು ಆಗಬಾರದು. ಒಬ್ಬರು ಓದಿದ ನಂತರ ಅದು ಎಲ್ಲರಿಗೂ ತಲುಪಬೇಕು' ಎಂದು ಹಿರಿಯ ಸಾಹಿತಿ ನಾ.ಡಿಸೋಜ ಅಭಿಪ್ರಾಯಪಟ್ಟರು.</p>.<p>ಸ್ಥಳೀಯ ಸಂಸ್ಕೃತಿ ಸಂಪದ ಮತ್ತು ರಂಗ ಸೌಗಂಧದ ಆಶ್ರಯದಲ್ಲಿ ಪಟ್ಟಣದ ಶಂಕರ ಮಠದಲ್ಲಿ ಶುಕ್ರವಾರ ನಡೆದ, ಭಾರತಿ ಹೆಗಡೆ ಅವರ 'ಸೀತಾಳೆ ದಂಡೆಯ ಸದ್ದಿಲ್ಲದ ಕಥೆಗಳು' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಈ ಕಥಾ ಸಂಕಲನದಲ್ಲಿ ಭಾರತಿ ಹೆಗಡೆ, ವಿಲಕ್ಷಣ ವ್ಯಕ್ತಿಗಳನ್ನು ಸೃಷ್ಟಿಸಿದ್ದಾರೆ. ಸಮಾಜ ಮತ್ತು ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರ ಚಿತ್ರಣವನ್ನು ಸಮರ್ಥವಾಗಿ ಚಿತ್ರಿಸಿದ್ದಾರೆ’ ಎಂದರು.</p>.<p>ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ,' ಈ ಕಥೆಗಳು ಕೇವಲ ಸಿದ್ದಾಪುರ ಸೀಮೆಯ ಕಥೆಗಳಲ್ಲ. ಇವು ಮನುಷ್ಯರಿರುವ ಯಾವುದೇ ಲೋಕದ ಕಥೆಗಳಾಗಿವೆ' ಎಂದರು. ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಕೃತಿ ಪರಿಚಯ ಮಾಡಿ,‘ಅಂಗಳದಿಂದ ಬೆಳದಿಂಗಳನ್ನು ಬೊಗಸೆಯಲ್ಲಿ ಹಿಡಿದು ಮನೆಯೊಳಗೆ ಬಂದ ಅನುಭವ ಯಾವುದೇ ಕಥೆ ಓದಿದಾಗ ಓದುಗನಿಗೆ ಆಗಬೇಕು. ಈ ಸಂಕಲನದ ಕಥೆಗಳಿಗೆ ಧ್ವನಿ ಶಕ್ತಿ ಇದೆ’ ಎಂದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.</p>.<p>ರಾಜೇಂದ್ರ ಕೊಳಗಿ ಪ್ರಾರ್ಥನಾ ಗೀತೆ ಹಾಡಿದರು. ಗಣಪತಿ ಹೆಗಡೆ ಹುಲೀಮನೆ ಸ್ವಾಗತಿಸಿದರು. ಲೇಖಕಿ ಭಾರತಿ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಪಾದ ಹೆಗಡೆ ಕೋಡನಮನೆ ನಿರೂಪಿಸಿದರು. ಗಣಪತಿ ಹೆಗಡೆ ಗುಂಜಗೋಡು ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>