ಹಿರಿಯ ಪತ್ರಕರ್ತೆ ಆರ್.ಪೂರ್ಣಿಮಾ ಮಾತನಾಡಿ,' ಈ ಕಥೆಗಳು ಕೇವಲ ಸಿದ್ದಾಪುರ ಸೀಮೆಯ ಕಥೆಗಳಲ್ಲ. ಇವು ಮನುಷ್ಯರಿರುವ ಯಾವುದೇ ಲೋಕದ ಕಥೆಗಳಾಗಿವೆ' ಎಂದರು. ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಕೃತಿ ಪರಿಚಯ ಮಾಡಿ,‘ಅಂಗಳದಿಂದ ಬೆಳದಿಂಗಳನ್ನು ಬೊಗಸೆಯಲ್ಲಿ ಹಿಡಿದು ಮನೆಯೊಳಗೆ ಬಂದ ಅನುಭವ ಯಾವುದೇ ಕಥೆ ಓದಿದಾಗ ಓದುಗನಿಗೆ ಆಗಬೇಕು. ಈ ಸಂಕಲನದ ಕಥೆಗಳಿಗೆ ಧ್ವನಿ ಶಕ್ತಿ ಇದೆ’ ಎಂದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.