ಈ ಬಗ್ಗೆ ಪ್ರತಿಕ್ರಿಯಿಸಿದ ರೂಪಾಲಿ ನಾಯ್ಕ, ‘ಮಲ್ಲಾಪುರದಲ್ಲಿ ಪರಿಹಾರ ಸಾಮಗ್ರಿಯನ್ನುಕಾರ್ಯಕರ್ತರೇ ವಿತರಿಸಬೇಕಿತ್ತು. ಆದರೆ, ಊರಿನವರು ಶಾಸಕರೇ ಬಂದು ಕೊಡಬೇಕು ಆಶಯ ವ್ಯಕ್ತಪಡಿಸಿದ್ದರು. ಹಾಗಾಗಿ ಸಾಮಗ್ರಿಯನ್ನು ಸಂಗ್ರಹಿಸಿಟ್ಟಿದ್ದರು. ಆ ಸಮಯದಲ್ಲಿ ನನಗೆ ಆರೋಗ್ಯದ ಸಮಸ್ಯೆಯಾಗಿ ಹೋಗಲು ಸಾಧ್ಯವಾಗಲಿಲ್ಲ. ಇದರಿಂದ ವಿತರಣೆ ವಿಳಂಬವಾಯಿತು. ಸಂತ್ರಸ್ತರಿಗೆ ಶುಕ್ರವಾರ ನೀಡುತ್ತಿದ್ದವೇಳೆ ಅಡುಗೆ ಎಣ್ಣೆಯ ಅವಧಿ ಮೀರಿದ್ದುಗಮನಕ್ಕೆ ಬಂದ ಕೂಡಲೇ ವಿತರಣೆ ನಿಲ್ಲಿಸಿದ್ದೇವೆ. 450 ಸಂತ್ರಸ್ತರ ಪೈಕಿ 90 ಜನರಿಗೆ ಈಗಾಗಲೇ ಕೊಡಲಾಗಿದ್ದು, ವಾಪಸ್ ನೀಡುವಂತೆ ಎಲ್ಲರಿಗೂ ತಿಳಿಸಲಾಗಿದೆ. ಅವರಿಗೆ ಬೇರೆಯದನ್ನು ನೀಡಲಾಗುತ್ತದೆ’ಎಂದು ಸ್ಪಷ್ಟಪಡಿಸಿದರು.