<p><strong>ಕಾರವಾರ</strong>: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತವು ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ದರಿಂದ ಜನರು ಭಯಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.</p>.<p>ಭಟ್ಕಳದಲ್ಲಿ ಹೇರಲಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತವು ಸಮರ್ಥವಾಗಿದೆ. ಇದರ ಭಾಗವಾಗಿಏ.3ರ ಮೊದಲುಕಾರವಾರದ ವೈದ್ಯಕೀಯಕಾಲೇಜು ಆಸ್ಪತ್ರೆಯಲ್ಲಿ (ಕಿಮ್ಸ್) ಕೋವಿಡ್ 19 ಚಿಕಿತ್ಸಾ ಘಟಕವು ಸಿದ್ಧವಾಗಲಿದೆ. ಇದಕ್ಕಾಗಿ ₹ 1 ಕೋಟಿ ರೂಪಾಯಿ ವ್ಯಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.</p>.<p class="Subhead">ಘಟಕದಲ್ಲಿ ಏನೇನಿರಲಿವೆ?:‘150ಹಾಸಿಗೆಗಳು ಇರುವ ಈ ಘಟಕದಲ್ಲಿಆಮ್ಲಜನಕ ಪೂರೈಕೆಯೊಂದಿಗೆ ಪ್ರತ್ಯೇಕತಾ ಕೇಂದ್ರ (ಐಸೊಲೇಷನ್ ಸೆಂಟರ್) ವ್ಯವಸ್ಥೆ ಮಾಡಲಾಗಿದೆ. ಕ್ವಾರೆಂಟೈನ್ಗಾಗಿ50ಹಾಸಿಗೆ ಹಾಗೂ ಸಂಪರ್ಕ ತಡೆಗೆ 25 ಹಾಸಿಗೆ ಹೊಂದಿದೆ. ಆಸ್ಪತ್ರೆಯಿಂದ ಹೊರಗೆ 10 ಹಾಸಿಗೆಗಳ ಪ್ರತ್ಯೇಕತೀವ್ರ ನಿಗಾ ಘಟಕಇರುತ್ತದೆ.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಮೊಹಮ್ಮದ್ ರೋಶನ್ ಈ ಎಲ್ಲ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾ ಇಡಲಿದ್ದಾರೆ’ ಎಂದುಹೇಳಿದ್ದಾರೆ.</p>.<p>‘ಸಾರ್ವಜನಿಕರು ಮನೆಗಳಲ್ಲೇಇದ್ದುಕೊಂಡುವಿಶ್ರಾಂತಿ ಪಡೆಯಿರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ವಿರಾಮವನ್ನು ಆನಂದಿಸಿ.ವದಂತಿಹರಡಲು ಯಾವುದೇ ಅವಕಾಶವನ್ನು ನೀಡಬೇಡಿ. ಇದು ಕೋವಿಡ್ 19ನಂತೆಯೇ ಅಪಾಯಕಾರಿ’ ಎಂದು ಜಿಲ್ಲಾಧಿಕಾರಿಮನವಿ ಮಾಡಿದ್ದಾರೆ.</p>.<p class="Subhead">ಉಸ್ತುವಾರಿ ಸಚಿವರ ಸಭೆ ಇಂದು:ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾರ್ಚ್ 29ರಂದು ಕಾರವಾರಕ್ಕೆ ಭೇಟಿ ನೀಡಲಿದ್ದಾರೆ.</p>.<p>ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ಹಮ್ಮಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಮಧ್ಯಾಹ್ನ ಒಂದು ಗಂಟೆಗೆ ಸಭೆ ಆಯೋಜಿಸಲಾಗಿದೆ.</p>.<p class="Subhead">ಜಿಲ್ಲಾಡಳಿತದಿಂದ ಆಹಾರದ ವ್ಯವಸ್ಥೆ:ಜಿಲ್ಲೆಯಲ್ಲಿ ಅಗತ್ಯ ತುರ್ತು ಆಹಾರದ ಅಗತ್ಯ ಇರುವವರಿಗೆ ಅಂಗನವಾಡಿಗಳಲ್ಲಿ ಆಹಾರ ಸಿದ್ಧಪಡಿಸಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿನಿರ್ಗತಿಕರಿಗೆ, ಆಶ್ರಯವಿಲ್ಲದೇ ತೊಂದರೆಯಲ್ಲಿ ಇರುವವರಿಗೆ ಆಹಾರ ಮತ್ತು ಉಳಿದುಕೊಳ್ಳುವ ತಾತ್ಕಾಲಿಕ ವ್ಯವಸ್ಥೆಯನ್ನುಮಾಡಲಾಗುತ್ತಿದೆ.ಸಹಾಯದ ಅಗತ್ಯವಿರುವಸಾರ್ವಜನಿಕರು ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ರಾಜೇಂದ್ರ ಬೇಕಲ್ (ಮೊಬೈಲ್: 98803 01250) ಅವರನ್ನು ಸಂಪರ್ಕಿಸಬಹುದು.</p>.<p>ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ (ಮೊಬೈಲ್:94838 86886) ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಬಡಿಗೇರ್ (ಮೊಬೈಲ್:94485 08383) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಜಿಲ್ಲಾಡಳಿತವು ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದ್ದರಿಂದ ಜನರು ಭಯಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.</p>.<p>ಭಟ್ಕಳದಲ್ಲಿ ಹೇರಲಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಜಿಲ್ಲಾಡಳಿತವು ಸಮರ್ಥವಾಗಿದೆ. ಇದರ ಭಾಗವಾಗಿಏ.3ರ ಮೊದಲುಕಾರವಾರದ ವೈದ್ಯಕೀಯಕಾಲೇಜು ಆಸ್ಪತ್ರೆಯಲ್ಲಿ (ಕಿಮ್ಸ್) ಕೋವಿಡ್ 19 ಚಿಕಿತ್ಸಾ ಘಟಕವು ಸಿದ್ಧವಾಗಲಿದೆ. ಇದಕ್ಕಾಗಿ ₹ 1 ಕೋಟಿ ರೂಪಾಯಿ ವ್ಯಯಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.</p>.<p class="Subhead">ಘಟಕದಲ್ಲಿ ಏನೇನಿರಲಿವೆ?:‘150ಹಾಸಿಗೆಗಳು ಇರುವ ಈ ಘಟಕದಲ್ಲಿಆಮ್ಲಜನಕ ಪೂರೈಕೆಯೊಂದಿಗೆ ಪ್ರತ್ಯೇಕತಾ ಕೇಂದ್ರ (ಐಸೊಲೇಷನ್ ಸೆಂಟರ್) ವ್ಯವಸ್ಥೆ ಮಾಡಲಾಗಿದೆ. ಕ್ವಾರೆಂಟೈನ್ಗಾಗಿ50ಹಾಸಿಗೆ ಹಾಗೂ ಸಂಪರ್ಕ ತಡೆಗೆ 25 ಹಾಸಿಗೆ ಹೊಂದಿದೆ. ಆಸ್ಪತ್ರೆಯಿಂದ ಹೊರಗೆ 10 ಹಾಸಿಗೆಗಳ ಪ್ರತ್ಯೇಕತೀವ್ರ ನಿಗಾ ಘಟಕಇರುತ್ತದೆ.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಅಧಿಕಾರಿ ಮೊಹಮ್ಮದ್ ರೋಶನ್ ಈ ಎಲ್ಲ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಗಾ ಇಡಲಿದ್ದಾರೆ’ ಎಂದುಹೇಳಿದ್ದಾರೆ.</p>.<p>‘ಸಾರ್ವಜನಿಕರು ಮನೆಗಳಲ್ಲೇಇದ್ದುಕೊಂಡುವಿಶ್ರಾಂತಿ ಪಡೆಯಿರಿ. ಕುಟುಂಬ ಸದಸ್ಯರೊಂದಿಗೆ ನಿಮ್ಮ ವಿರಾಮವನ್ನು ಆನಂದಿಸಿ.ವದಂತಿಹರಡಲು ಯಾವುದೇ ಅವಕಾಶವನ್ನು ನೀಡಬೇಡಿ. ಇದು ಕೋವಿಡ್ 19ನಂತೆಯೇ ಅಪಾಯಕಾರಿ’ ಎಂದು ಜಿಲ್ಲಾಧಿಕಾರಿಮನವಿ ಮಾಡಿದ್ದಾರೆ.</p>.<p class="Subhead">ಉಸ್ತುವಾರಿ ಸಚಿವರ ಸಭೆ ಇಂದು:ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾರ್ಚ್ 29ರಂದು ಕಾರವಾರಕ್ಕೆ ಭೇಟಿ ನೀಡಲಿದ್ದಾರೆ.</p>.<p>ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ಹಮ್ಮಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಮಧ್ಯಾಹ್ನ ಒಂದು ಗಂಟೆಗೆ ಸಭೆ ಆಯೋಜಿಸಲಾಗಿದೆ.</p>.<p class="Subhead">ಜಿಲ್ಲಾಡಳಿತದಿಂದ ಆಹಾರದ ವ್ಯವಸ್ಥೆ:ಜಿಲ್ಲೆಯಲ್ಲಿ ಅಗತ್ಯ ತುರ್ತು ಆಹಾರದ ಅಗತ್ಯ ಇರುವವರಿಗೆ ಅಂಗನವಾಡಿಗಳಲ್ಲಿ ಆಹಾರ ಸಿದ್ಧಪಡಿಸಿ ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿನಿರ್ಗತಿಕರಿಗೆ, ಆಶ್ರಯವಿಲ್ಲದೇ ತೊಂದರೆಯಲ್ಲಿ ಇರುವವರಿಗೆ ಆಹಾರ ಮತ್ತು ಉಳಿದುಕೊಳ್ಳುವ ತಾತ್ಕಾಲಿಕ ವ್ಯವಸ್ಥೆಯನ್ನುಮಾಡಲಾಗುತ್ತಿದೆ.ಸಹಾಯದ ಅಗತ್ಯವಿರುವಸಾರ್ವಜನಿಕರು ತಮ್ಮ ಹೆಸರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ರಾಜೇಂದ್ರ ಬೇಕಲ್ (ಮೊಬೈಲ್: 98803 01250) ಅವರನ್ನು ಸಂಪರ್ಕಿಸಬಹುದು.</p>.<p>ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿ ಆಶ್ರಯ ಮತ್ತು ಆಹಾರದ ವ್ಯವಸ್ಥೆ ಮಾಡಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ (ಮೊಬೈಲ್:94838 86886) ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಬಡಿಗೇರ್ (ಮೊಬೈಲ್:94485 08383) ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>