<p><strong>ಕಾರವಾರ:</strong> ಮುಂಗಾರು ಅವಧಿಯ ಮೀನುಗಾರಿಕೆ ನಿಷೇಧವು ತೆರವಾಗಲು ಇನ್ನು ಒಂಬತ್ತು ದಿನಗಳು ಮಾತ್ರ ಇವೆ. ಮೀನುಗಾರರು ದೋಣಿಗಳ ದುರಸ್ತಿ, ಬಲೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಆದರೆ, ಕಾರವಾರದಲ್ಲಿ ಸೂಕ್ತ ಶೆಡ್ ಇಲ್ಲದೇ ಮೇಲ್ಸೇತುವೆಯ ಕೆಳಗೆ, ರಸ್ತೆಯ ಬದಿಯಲ್ಲಿ ತಾಡಪಾಲು ಹಾಸಿ ಕುಳಿತು ಬಲೆ ಹೆಣೆಯುತ್ತಿದ್ದಾರೆ.</p>.<p>ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಲಂಡನ್ ಬ್ರಿಜ್ ಹಾಗೂ ಸಾಗರ ಮತ್ಸ್ಯಾಲಯದ ಬಳಿ ಶೆಡ್ಗಳಿವೆ. ಲಂಡನ್ ಬ್ರಿಜ್ ಬಳಿಯ ಕಟ್ಟಡವು ಸಂಪೂರ್ಣ ಹದಗೆಟ್ಟಿದೆ. ಚಾವಣಿಗೆ ಹೊದಿಸಿದ್ದ ಶೀಟ್ಗಳು ಗಾಳಿಗೆ ಹಾರಿ ಹೋಗಿ ಅದೆಷ್ಟೋ ತಿಂಗಳಾದವು.</p>.<p>‘ಲಂಡನ್ ಬ್ರಿಜ್ ಬಳಿಯಿರುವ ಶೆಡ್ಗೆ ಗೋಡೆ, ಬಾಗಿಲು ಇಲ್ಲ. ಹಾಗಾಗಿ ಅಲ್ಲಿ ಬೆಲೆಬಾಳುವ ಎಂಜಿನ್, ಬಲೆ ಮುಂತಾದವನ್ನು ಇಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಅಲ್ಲಿ ಇಟ್ಟಿದ್ದ ಎಂಜಿನ್ಗಳು, ಬಲೆಗಳು ಕಳವಾಗಿದ್ದವು. ಹಾಗಾಗಿ ಪ್ರತಿದಿನ ಮೀನುಗಾರಿಕೆಯ ಬಳಿಕ ಅವುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಪುನಃ ಮನೆಗೆ ತರಬೇಕಾಗುತ್ತದೆ. ಒಂದುವೇಳೆ ತರಲು ಸಾಧ್ಯವಾಗದಿದ್ದರೆ, ಕಾವಲು ಕಾಯುತ್ತ ನಾವೂ ಅಲ್ಲೇ ರಾತ್ರಿ ಕಳೆಯಬೇಕಿದೆ’ ಎಂದು ಮೀನುಗಾರ ಚೇತನ್ ಹರಿಕಂತ್ರ ಹೇಳುತ್ತಾರೆ.</p>.<p>‘ಸಾಗರ ಮತ್ಸ್ಯಾಲಯದ ಬಳಿಯಿರುವ ಶೆಡ್ ಬೈತಖೋಲ್ ಭಾಗದ ಮೀನುಗಾರರಿಗೆ ಬಹಳ ದೂರವಾಗುತ್ತದೆ. ಅಲ್ಲದೇ ಅದು ಆ ಭಾಗದ ಮೀನುಗಾರರಿಗೆ ಮಾತ್ರ ಸ್ಥಳಾವಕಾಶ ಹೊಂದಿದೆ. ಈ ಹಿಂದೆ ಕಡಲತೀರದಲ್ಲಿ ಗುಡಿಸಲುಗಳು ಇದ್ದಾಗ ಅಲ್ಲೇ ಬಲೆ ಹೆಣೆಯುವಂಥ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದೆವು. ಬಳಿಕ ಅವುಗಳನ್ನು ತೆರವು ಮಾಡಿದಾಗ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಮೀನುಗಾರಿಕೆ ಇಲಾಖೆಯು ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>‘ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು, ಮೀನುಗಾರಿಕೆ ಮಾಡಿ ಸುಸ್ತಾಗಿ ಬಂದಾಗ ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ ಅವಶ್ಯವಾಗಿ ಬೇಕಿದೆ. ಶೆಡ್ ದುರಸ್ತಿ ಮಾಡಿಸಿಕೊಡಬೇಕು’ ಎಂದು ಮೀನುಗಾರರಾದ ವಿನಾಯಕ ಹರಿಕಂತ್ರ, ಆನಂದು ಬಾನಾವಳಿ ಮತ್ತು ಶ್ರೀಪಾದ ಬಾನಾವಳಿ ಅವರೂ ಮನವಿ ಮಾಡಿದ್ದಾರೆ.</p>.<p class="Subhead"><strong>‘ಅಲ್ಲೇ ವ್ಯವಸ್ಥೆ ಮಾಡಿ’:</strong></p>.<p>‘ಮೀನುಗಾರಿಕೆ ಆರಂಭವಾಗಲು ಸ್ವಲ್ಪ ದಿನಗಳಷ್ಟೇ ಇವೆ. ದಿನವಿಡೀ ಸಮುದ್ರದಲ್ಲಿ ಕಷ್ಟ ಪಡುವ ಸಮುದಾಯವು, ಬಲೆ ಹೆಣೆಯಲು ಸೂಕ್ತ ಜಾಗಕ್ಕೂ ಪರದಾಡುವಂತಾಗಿದೆ. ಇದು ವಿಪರ್ಯಾಸ’ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ಮೀನುಗಾರರು ತಮ್ಮ ವೃತ್ತಿಯ ಸಲಕರಣೆಗಳನ್ನು ಕಡಲತೀರದ ಹೊರತಾಗಿ ದೂರದಲ್ಲಿ ಎಲ್ಲೋ ಇಡಲು ಸಾಧ್ಯವಾಗದು. ಹಾಗಾಗಿ ಅಲ್ಲೇ ವ್ಯವಸ್ಥೆ ಮಾಡಿಕೊಡಬೇಕು. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಹೋರಾಟಕ್ಕೆ ಸಿದ್ಧರಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.</p>.<p>* ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರರ ಶೆಡ್ ದುರಸ್ತಿಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.</p>.<p>– ಕವಿತಾ ಆರ್.ಕೆ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಮುಂಗಾರು ಅವಧಿಯ ಮೀನುಗಾರಿಕೆ ನಿಷೇಧವು ತೆರವಾಗಲು ಇನ್ನು ಒಂಬತ್ತು ದಿನಗಳು ಮಾತ್ರ ಇವೆ. ಮೀನುಗಾರರು ದೋಣಿಗಳ ದುರಸ್ತಿ, ಬಲೆಗಳ ತಯಾರಿಯಲ್ಲಿ ತೊಡಗಿದ್ದಾರೆ. ಆದರೆ, ಕಾರವಾರದಲ್ಲಿ ಸೂಕ್ತ ಶೆಡ್ ಇಲ್ಲದೇ ಮೇಲ್ಸೇತುವೆಯ ಕೆಳಗೆ, ರಸ್ತೆಯ ಬದಿಯಲ್ಲಿ ತಾಡಪಾಲು ಹಾಸಿ ಕುಳಿತು ಬಲೆ ಹೆಣೆಯುತ್ತಿದ್ದಾರೆ.</p>.<p>ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಲಂಡನ್ ಬ್ರಿಜ್ ಹಾಗೂ ಸಾಗರ ಮತ್ಸ್ಯಾಲಯದ ಬಳಿ ಶೆಡ್ಗಳಿವೆ. ಲಂಡನ್ ಬ್ರಿಜ್ ಬಳಿಯ ಕಟ್ಟಡವು ಸಂಪೂರ್ಣ ಹದಗೆಟ್ಟಿದೆ. ಚಾವಣಿಗೆ ಹೊದಿಸಿದ್ದ ಶೀಟ್ಗಳು ಗಾಳಿಗೆ ಹಾರಿ ಹೋಗಿ ಅದೆಷ್ಟೋ ತಿಂಗಳಾದವು.</p>.<p>‘ಲಂಡನ್ ಬ್ರಿಜ್ ಬಳಿಯಿರುವ ಶೆಡ್ಗೆ ಗೋಡೆ, ಬಾಗಿಲು ಇಲ್ಲ. ಹಾಗಾಗಿ ಅಲ್ಲಿ ಬೆಲೆಬಾಳುವ ಎಂಜಿನ್, ಬಲೆ ಮುಂತಾದವನ್ನು ಇಡಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಅಲ್ಲಿ ಇಟ್ಟಿದ್ದ ಎಂಜಿನ್ಗಳು, ಬಲೆಗಳು ಕಳವಾಗಿದ್ದವು. ಹಾಗಾಗಿ ಪ್ರತಿದಿನ ಮೀನುಗಾರಿಕೆಯ ಬಳಿಕ ಅವುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಪುನಃ ಮನೆಗೆ ತರಬೇಕಾಗುತ್ತದೆ. ಒಂದುವೇಳೆ ತರಲು ಸಾಧ್ಯವಾಗದಿದ್ದರೆ, ಕಾವಲು ಕಾಯುತ್ತ ನಾವೂ ಅಲ್ಲೇ ರಾತ್ರಿ ಕಳೆಯಬೇಕಿದೆ’ ಎಂದು ಮೀನುಗಾರ ಚೇತನ್ ಹರಿಕಂತ್ರ ಹೇಳುತ್ತಾರೆ.</p>.<p>‘ಸಾಗರ ಮತ್ಸ್ಯಾಲಯದ ಬಳಿಯಿರುವ ಶೆಡ್ ಬೈತಖೋಲ್ ಭಾಗದ ಮೀನುಗಾರರಿಗೆ ಬಹಳ ದೂರವಾಗುತ್ತದೆ. ಅಲ್ಲದೇ ಅದು ಆ ಭಾಗದ ಮೀನುಗಾರರಿಗೆ ಮಾತ್ರ ಸ್ಥಳಾವಕಾಶ ಹೊಂದಿದೆ. ಈ ಹಿಂದೆ ಕಡಲತೀರದಲ್ಲಿ ಗುಡಿಸಲುಗಳು ಇದ್ದಾಗ ಅಲ್ಲೇ ಬಲೆ ಹೆಣೆಯುವಂಥ ಕೆಲಸಗಳನ್ನು ಪೂರ್ಣಗೊಳಿಸುತ್ತಿದ್ದೆವು. ಬಳಿಕ ಅವುಗಳನ್ನು ತೆರವು ಮಾಡಿದಾಗ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಮೀನುಗಾರಿಕೆ ಇಲಾಖೆಯು ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.</p>.<p>‘ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು, ಮೀನುಗಾರಿಕೆ ಮಾಡಿ ಸುಸ್ತಾಗಿ ಬಂದಾಗ ವಿಶ್ರಾಂತಿ ಪಡೆಯಲು ನೆರಳಿನ ವ್ಯವಸ್ಥೆ ಅವಶ್ಯವಾಗಿ ಬೇಕಿದೆ. ಶೆಡ್ ದುರಸ್ತಿ ಮಾಡಿಸಿಕೊಡಬೇಕು’ ಎಂದು ಮೀನುಗಾರರಾದ ವಿನಾಯಕ ಹರಿಕಂತ್ರ, ಆನಂದು ಬಾನಾವಳಿ ಮತ್ತು ಶ್ರೀಪಾದ ಬಾನಾವಳಿ ಅವರೂ ಮನವಿ ಮಾಡಿದ್ದಾರೆ.</p>.<p class="Subhead"><strong>‘ಅಲ್ಲೇ ವ್ಯವಸ್ಥೆ ಮಾಡಿ’:</strong></p>.<p>‘ಮೀನುಗಾರಿಕೆ ಆರಂಭವಾಗಲು ಸ್ವಲ್ಪ ದಿನಗಳಷ್ಟೇ ಇವೆ. ದಿನವಿಡೀ ಸಮುದ್ರದಲ್ಲಿ ಕಷ್ಟ ಪಡುವ ಸಮುದಾಯವು, ಬಲೆ ಹೆಣೆಯಲು ಸೂಕ್ತ ಜಾಗಕ್ಕೂ ಪರದಾಡುವಂತಾಗಿದೆ. ಇದು ವಿಪರ್ಯಾಸ’ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ರಾಜು ತಾಂಡೇಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.</p>.<p>‘ಮೀನುಗಾರರು ತಮ್ಮ ವೃತ್ತಿಯ ಸಲಕರಣೆಗಳನ್ನು ಕಡಲತೀರದ ಹೊರತಾಗಿ ದೂರದಲ್ಲಿ ಎಲ್ಲೋ ಇಡಲು ಸಾಧ್ಯವಾಗದು. ಹಾಗಾಗಿ ಅಲ್ಲೇ ವ್ಯವಸ್ಥೆ ಮಾಡಿಕೊಡಬೇಕು. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಹೋರಾಟಕ್ಕೆ ಸಿದ್ಧರಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.</p>.<p>* ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಮೀನುಗಾರರ ಶೆಡ್ ದುರಸ್ತಿಯ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.</p>.<p>– ಕವಿತಾ ಆರ್.ಕೆ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>