'ತಾಲ್ಲೂಕಿನ ಟಿಬೆಟನ್ ಕ್ಯಾಂಪ್ನಲ್ಲಿ ನೆಲೆಸಿದ್ದ ಛತ್ತಿಸಗಡದ ಒಟ್ಟು ಐವರು ಕಾರ್ಮಿಕರನ್ನು ಬುಧವಾರ ಖಾಸಗಿ ವಾಹನದ ಮೂಲಕ ಬೆಂಗಳೂರಿಗೆ ಕಳಿಸಲಾಯಿತು. ಅಲ್ಲಿಂದ ವಿಮಾನದ ಮೂಲಕ ತಮ್ಮ ಊರಿಗೆ ತೆರಳಲಿದ್ದಾರೆ. ಇನ್ನೂ 44 ಜನರು ಇಲ್ಲಿಯೇ ಇದ್ದು, ಅವರನ್ನು ಸಹ ಮುಂದಿನ ದಿನಗಳಲ್ಲಿ ವಿಮಾನದ ಮೂಲಕ ಕಳಿಸುವ ವ್ಯವಸ್ಥೆ ಮಾಡಲಾಗುತ್ತದೆ' ಎಂದು ಇಲ್ಲಿನ ಹಿರಿಯ ವಕೀಲ ಗುಡ್ಡಪ್ಪ ಕಾತೂರ ಹೇಳಿದರು.