<p><strong>ಶಿರಸಿ:</strong> ತಾಲ್ಲೂಕಿನೆಲ್ಲೆಡೆ ಗುಡಿಗಾರರ ಮನೆಗಳಲ್ಲಿ ಈಗ ಬಿಡುವಿಲ್ಲದ ಕೆಲಸ. ನಸುಕು ಹರಿಯುವ ಹೊತ್ತಿನಿಂದ ಕತ್ತಲು ಮುಸುಕುವ ತನಕವೂ ಮಣ್ಣಿನ ಸಾಂಗತ್ಯದಲ್ಲೇ ಸಮಯ ಕಳೆಯುವ ಗುಡಿಗಾರರು ಸುಂದರವಾದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ.</p>.<p>ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ 20 ದಿನಗಳು ಬಾಕಿ ಇವೆ. ಆದರೆ, ಗುಡಿಗಾರರ ಮನೆಗಳಲ್ಲಿ ಈಗಲೇ ಸಂಭ್ರಮದ ಅಲೆ ಹರಡಿದೆ. ಆರೆಂಟು ಜನರು ಸುತ್ತುವರಿದು ಕುಳಿತು, ಲೋಕಾಭಿರಾಮವಾಗಿ ಮಾತನಾಡುತ್ತ, ಮಣ್ಣಿನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.</p>.<p>ನಗರದಲ್ಲಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ವಿಗ್ರಹಗಳು ತಯಾರಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿಗಾರರ ಜೊತೆಗೆ ಹವ್ಯಾಸಿ ಕಲಾವಿದರು ಮಣ್ಣಿನಲ್ಲಿ ಗಣೇಶನನ್ನು ಅರಳಿಸುತ್ತಾರೆ. ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಸಾರ್ವಜನಿಕ ಗಣೇಶೋತ್ಸವಗಳು ಸರಳವಾಗಿ ನಡೆಯುತ್ತವೆ. ಆದರೆ, ಮನೆಗಳಲ್ಲಿ ಹಬ್ಬದ ಆಚರಣೆಗೆ ಇದು ಅಡ್ಡಿಯಾಗಲಾರದು.</p>.<p>‘ಒಂದೂವರೆ ತಿಂಗಳುಗಳಿಂದ ಮೂರ್ತಿ ತಯಾರಿಕೆ ಕಾರ್ಯ ನಿರಂತರವಾಗಿ ಸಾಗಿದೆ. 250ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದೇವೆ. ಈಗ ಮೂರ್ತಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಕೆಲಸಗಾರರು, ಮನೆಯ ಸದಸ್ಯರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಎಲ್ಲ ಗ್ರಾಹಕರು, ಪ್ರತಿವರ್ಷದಂತೆ ಈ ವರ್ಷವೂ ಮೂರ್ತಿಗೆ ಬೇಡಿಕೆ ಸಲ್ಲಿಸಿದ್ದಾರೆ’ ಎನ್ನುತ್ತಾರೆ ಚನ್ನಪಟ್ಟಣ ಬಜಾರದಲ್ಲಿರುವ ಮೋಹನ ಗುಡಿಗಾರ ಕುಟುಂಬದವರು.</p>.<p>‘ಕೋವಿಡ್ 19 ಕಾರಣಕ್ಕೆ ಮೂರ್ತಿಗಳ ಬೇಡಿಕೆಯಲ್ಲಿ ವ್ಯತ್ಯಾಸವಾಗಿಲ್ಲ. ಚೌತಿ ಹಬ್ಬದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಕ್ರಮ ಅನೇಕ ಕುಟುಂಬಗಳಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಕಳೆದ 70–80 ವರ್ಷಗಳಿಂದ ತಪ್ಪದೇ ಗಣೇಶ ವಿಗ್ರಹ ಕೊಂಡೊಯ್ಯುವ ಗ್ರಾಹಕರಿದ್ದಾರೆ. ಅವರು ಈ ವರ್ಷ ಕೂಡ ಈಗಾಗಲೇ ಆರ್ಡರ್ ಕೊಟ್ಟಿದ್ದಾರೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಸಾರ್ವಜನಿಕ ವಿಗ್ರಹಗಳನ್ನು ಹೆಚ್ಚು ತಯಾರಿಸುತ್ತಿದ್ದ ಗುಡಿಗಾರರಿಗೆ ಈ ಬಾರಿ ನಷ್ಟವಾಗಿದೆ. ತಾಲ್ಲೂಕಿನಲ್ಲಿ 190ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದ್ದರು. ಈ ಬಾರಿ ಸರಳ ಆಚರಣೆ ಇರುವುದಕ್ಕೆ ಮನೆಯಲ್ಲಿ ಸ್ಥಾಪಿಸುವ ವಿಗ್ರಹಗಳನ್ನೇ ಸಾರ್ವಜನಿಕ ಸ್ಥಳದಲ್ಲಿಯೂ ಇಟ್ಟು, ಅದೇ ದಿನ ವಿಸರ್ಜನೆ ಮಾಡುವ ಯೋಜನೆ ಬಹುತೇಕ ಗಣೇಶೋತ್ಸವ ಮಂಡಳಿಗಳದ್ದಾಗಿದೆ. ಹೀಗಾಗಿ, ಎಲ್ಲ ಗುಡಿಗಾರರ ಮನೆಗಳಲ್ಲಿ ಈ ಬಾರಿ ಸಣ್ಣ ವಿಗ್ರಹಗಳು ಮಾತ್ರ ಕಾಣಸಿಗುತ್ತವೆ’ ಎಂದು ಗುಡಿಗಾರರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾಲ್ಲೂಕಿನೆಲ್ಲೆಡೆ ಗುಡಿಗಾರರ ಮನೆಗಳಲ್ಲಿ ಈಗ ಬಿಡುವಿಲ್ಲದ ಕೆಲಸ. ನಸುಕು ಹರಿಯುವ ಹೊತ್ತಿನಿಂದ ಕತ್ತಲು ಮುಸುಕುವ ತನಕವೂ ಮಣ್ಣಿನ ಸಾಂಗತ್ಯದಲ್ಲೇ ಸಮಯ ಕಳೆಯುವ ಗುಡಿಗಾರರು ಸುಂದರವಾದ ಗಣಪತಿ ಮೂರ್ತಿಯನ್ನು ಸಿದ್ಧಪಡಿಸುತ್ತಿದ್ದಾರೆ.</p>.<p>ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೂ 20 ದಿನಗಳು ಬಾಕಿ ಇವೆ. ಆದರೆ, ಗುಡಿಗಾರರ ಮನೆಗಳಲ್ಲಿ ಈಗಲೇ ಸಂಭ್ರಮದ ಅಲೆ ಹರಡಿದೆ. ಆರೆಂಟು ಜನರು ಸುತ್ತುವರಿದು ಕುಳಿತು, ಲೋಕಾಭಿರಾಮವಾಗಿ ಮಾತನಾಡುತ್ತ, ಮಣ್ಣಿನಲ್ಲಿ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ.</p>.<p>ನಗರದಲ್ಲಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಗಣಪತಿ ವಿಗ್ರಹಗಳು ತಯಾರಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿಗಾರರ ಜೊತೆಗೆ ಹವ್ಯಾಸಿ ಕಲಾವಿದರು ಮಣ್ಣಿನಲ್ಲಿ ಗಣೇಶನನ್ನು ಅರಳಿಸುತ್ತಾರೆ. ಈ ಬಾರಿ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆ ಇರುವುದರಿಂದ ಸಾರ್ವಜನಿಕ ಗಣೇಶೋತ್ಸವಗಳು ಸರಳವಾಗಿ ನಡೆಯುತ್ತವೆ. ಆದರೆ, ಮನೆಗಳಲ್ಲಿ ಹಬ್ಬದ ಆಚರಣೆಗೆ ಇದು ಅಡ್ಡಿಯಾಗಲಾರದು.</p>.<p>‘ಒಂದೂವರೆ ತಿಂಗಳುಗಳಿಂದ ಮೂರ್ತಿ ತಯಾರಿಕೆ ಕಾರ್ಯ ನಿರಂತರವಾಗಿ ಸಾಗಿದೆ. 250ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದೇವೆ. ಈಗ ಮೂರ್ತಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದೆ. ಕೆಲಸಗಾರರು, ಮನೆಯ ಸದಸ್ಯರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಎಲ್ಲ ಗ್ರಾಹಕರು, ಪ್ರತಿವರ್ಷದಂತೆ ಈ ವರ್ಷವೂ ಮೂರ್ತಿಗೆ ಬೇಡಿಕೆ ಸಲ್ಲಿಸಿದ್ದಾರೆ’ ಎನ್ನುತ್ತಾರೆ ಚನ್ನಪಟ್ಟಣ ಬಜಾರದಲ್ಲಿರುವ ಮೋಹನ ಗುಡಿಗಾರ ಕುಟುಂಬದವರು.</p>.<p>‘ಕೋವಿಡ್ 19 ಕಾರಣಕ್ಕೆ ಮೂರ್ತಿಗಳ ಬೇಡಿಕೆಯಲ್ಲಿ ವ್ಯತ್ಯಾಸವಾಗಿಲ್ಲ. ಚೌತಿ ಹಬ್ಬದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಕ್ರಮ ಅನೇಕ ಕುಟುಂಬಗಳಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಕಳೆದ 70–80 ವರ್ಷಗಳಿಂದ ತಪ್ಪದೇ ಗಣೇಶ ವಿಗ್ರಹ ಕೊಂಡೊಯ್ಯುವ ಗ್ರಾಹಕರಿದ್ದಾರೆ. ಅವರು ಈ ವರ್ಷ ಕೂಡ ಈಗಾಗಲೇ ಆರ್ಡರ್ ಕೊಟ್ಟಿದ್ದಾರೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.</p>.<p>‘ಸಾರ್ವಜನಿಕ ವಿಗ್ರಹಗಳನ್ನು ಹೆಚ್ಚು ತಯಾರಿಸುತ್ತಿದ್ದ ಗುಡಿಗಾರರಿಗೆ ಈ ಬಾರಿ ನಷ್ಟವಾಗಿದೆ. ತಾಲ್ಲೂಕಿನಲ್ಲಿ 190ಕ್ಕೂ ಹೆಚ್ಚು ಕಡೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸುತ್ತಿದ್ದರು. ಈ ಬಾರಿ ಸರಳ ಆಚರಣೆ ಇರುವುದಕ್ಕೆ ಮನೆಯಲ್ಲಿ ಸ್ಥಾಪಿಸುವ ವಿಗ್ರಹಗಳನ್ನೇ ಸಾರ್ವಜನಿಕ ಸ್ಥಳದಲ್ಲಿಯೂ ಇಟ್ಟು, ಅದೇ ದಿನ ವಿಸರ್ಜನೆ ಮಾಡುವ ಯೋಜನೆ ಬಹುತೇಕ ಗಣೇಶೋತ್ಸವ ಮಂಡಳಿಗಳದ್ದಾಗಿದೆ. ಹೀಗಾಗಿ, ಎಲ್ಲ ಗುಡಿಗಾರರ ಮನೆಗಳಲ್ಲಿ ಈ ಬಾರಿ ಸಣ್ಣ ವಿಗ್ರಹಗಳು ಮಾತ್ರ ಕಾಣಸಿಗುತ್ತವೆ’ ಎಂದು ಗುಡಿಗಾರರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>