‘ತುಂಬ ಸಂತಸವಾಗಿದೆ’:‘ನಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೆಯೇ ದೇಶ ಸೇವೆಯ ಕುರಿತು ಆಗಾಗ ತಿಳಿಸುತ್ತಿದ್ದೆ. ಚೈತ್ರಾಶಾಲಾ, ಕಾಲೇಜಿನ ಓದಿನ ದಿನಗಳಲ್ಲೇ ನೌಕಾಪಡೆಗೆ ಸೇರುವ ಗುರಿ ಹೊಂದಿದ್ದಳು. ಅವಳು ಈಗ ಗುರಿ ತಲುಪಿದ್ದಾಳೆ. ಕಿರಿಯ ವಯಸ್ಸಿಗೇ ಜವಾಬ್ದಾರಿ ವಹಿಸಿಕೊಂಡಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ. ಇನ್ನೂ ಹೆಚ್ಚಿನ ದೇಶ ಸೇವೆ ಮಾಡುವ ಭಾಗ್ಯ ಅವಳಿಗೆ ದೊರೆಯಲಿ ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಅವರ ತಂದೆ, ಕಾರವಾರದಲ್ಲಿಜಿಲ್ಲಾ ಸಶಸ್ತ್ರ ಮೀಸಲುಪಡೆಯ ಮುಖ್ಯ ಕಾನ್ಸ್ಟೆಬಲ್ ಆಗಿರುವ ನಾಗಪ್ಪ ನಾಯ್ಕ.