ವಾನಳ್ಳಿಯಲ್ಲಿ ಶೇಡಿಹೊಳೆಗೆ ಪ್ರವಾಹ ಬಂದಿದ್ದು, ಹೊಳೆಯಂಚಿನ ಭತ್ತದ ಗದ್ದೆ ನೀರಿನಲ್ಲಿ ಮುಳುಗಿದೆ. ಅಡಿಕೆ ತೋಟದಲ್ಲಿ ನೀರು ನಿಂತು, ಮರಗಳಿಗೆ ಹಾಕಿರುವ ಗೊಬ್ಬರ ಕೊಚ್ಚಿಕೊಂಡು ಹೋಗಿದೆ. 50 ಎಕರೆಗೂ ಅಧಿಕ ತೋಟಕ್ಕೆ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಮೂರ್ನಾಲ್ಕು ದಶಕಗಳ ನಂತರ ಮೊದಲ ಬಾರಿಗೆ ಈ ಹೊಳೆಗೆ ನೆರೆ ಬಂದಿದೆ. ಪಟ್ಟಣದ ಹೊಳೆ, ತಣ್ಣೀರು ಹೊಳೆಗಳಿಗೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸುತ್ತಲಿನ ಅಡಿಕೆ ತೋಟಗಳು ಜಲಾವೃತಗೊಂಡಿವೆ.