ವಾತಾವರಣದಲ್ಲಿ ಬದಲಾವಣೆ
‘ಅಕಾಲಿಕ ಮಳೆಯಿಂದಾಗಿಈ ಸಮಯದಲ್ಲಿ ಅಡಿಕೆ ಮಿಳ್ಳೆಗಳು ಬೀಳುತ್ತವೆ. ವಾತಾವರಣದಲ್ಲಿ ಉಷ್ಣಾಂಶದ ಭಾರಿ ಏರಿಳಿತ ಆದಾಗ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ವಾತಾವರಣದಲ್ಲಿ ಆದ ಬದಲಾವಣೆಯಿಂದ ಹೀಗಾಗಿರುವ ಕಾರಣ, ರೋಗ ನಿರೋಧಕ, ಕೀಟ ನಾಶಕ ಔಷಧಿ ಸಿಂಪಡಿಸಿದರೂ ಪ್ರಯೋಜನವಾಗದು. ಮಾರ್ಚ್, ಏಪ್ರಿಲ್ನಲ್ಲಿ ಮಿಳ್ಳೆಗಳು ಸಾಮಾನ್ಯವಾಗಿ ‘ಪೊಳ್ಳು ದುಂಬಿ’ ದಾಳಿಯಿಂದ ಉದುರುತ್ತವೆ. ಆಗ ನಿಯಂತ್ರಣ ಕ್ರಮ ಕೈಗೊಳ್ಳಬಹುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸತೀಶ ಹೆಗಡೆ ತಿಳಿಸಿದ್ದಾರೆ.