ಕುಂಬಾರವಾಡದ ಹಳೇ ಪಶು ಆಸ್ಪತ್ರೆಯ ಕಟ್ಟಡದಲ್ಲಿ ಅಂಬಾಳಿಯ ವಿಠ್ಠಲ ವೇಳಿಪ ಎಂಬುವವರು ಗಣೇಶ ಚತುರ್ಥಿಯ ಸಲುವಾಗಿ 70ಕ್ಕೂ ಅಧಿಕ ಗಣಪತಿಯ ಮೂರ್ತಿಗಳನ್ನು ತಯಾರಿಸಿ ಇಟ್ಟಿದ್ದರು. ಗುರುವಾರ ಬೆಳಗಿನ ಜಾವ ಬೀಸಿದ ರಭಸದ ಗಾಳಿಯ ಪರಿಣಾಮವಾಗಿ ಈ ಕಟ್ಟಡದ ಮೇಲೆ ಬೃಹತ್ ಮರವೊಂದು ಉರುಳಿ ಬಿತ್ತು. ಇದರಿಂದ ಗಣಪತಿಯ ಮೂರ್ತಿಗಳು, ಅವುಗಳಿಗೆ ಬಳಿಯಲು ತಂದಿಟ್ಟ ಬಣ್ಣ, ಗಣಪತಿ ತಯಾರಿಕೆಯ ಮಾದರಿಗಳು ಸೇರಿದಂತೆ ₹ 70 ಸಾವಿರಕ್ಕೂ ಅಧಿಕ ನಷ್ಟವಾಗಿದೆ.