<p><strong>ಜೊಯಿಡಾ:</strong> ತಾಲ್ಲೂಕಿನಲ್ಲಿ ಸೋಮವಾರ ಪ್ರಾರಂಭವಾದ ಗಾಳಿ ಸಹಿತ ಬಿರುಸಿನ ಮಳೆ ಗುರುವಾರವೂ ಮುಂದುವರಿಯಿತು. 48 ಗಂಟೆಗಳಲ್ಲಿ 25 ಸೆ.ಮೀ.ಗೂ ಅಧಿಕ ಮಳೆಯಾಗಿದೆ.</p>.<p>ಗಾಳಿಯ ಅಬ್ಬರಕ್ಕೆ ಹಲವೆಡೆ ಮನೆಗಳ ಮೇಲೆ ಮರಗಳು ಮುರಿದು ಬಿದ್ದಿವೆ. ತಾಲ್ಲೂಕಿನಾದ್ಯಾಂತ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಮೂರು ದಿನಗಳಿಂದ ಜೊಯಿಡಾ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಇಲ್ಲದೆ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.</p>.<p>ಕುಂಬಾರವಾಡದ ಹಳೇ ಪಶು ಆಸ್ಪತ್ರೆಯ ಕಟ್ಟಡದಲ್ಲಿ ಅಂಬಾಳಿಯ ವಿಠ್ಠಲ ವೇಳಿಪ ಎಂಬುವವರು ಗಣೇಶ ಚತುರ್ಥಿಯ ಸಲುವಾಗಿ 70ಕ್ಕೂ ಅಧಿಕ ಗಣಪತಿಯ ಮೂರ್ತಿಗಳನ್ನು ತಯಾರಿಸಿ ಇಟ್ಟಿದ್ದರು. ಗುರುವಾರ ಬೆಳಗಿನ ಜಾವ ಬೀಸಿದ ರಭಸದ ಗಾಳಿಯ ಪರಿಣಾಮವಾಗಿ ಈ ಕಟ್ಟಡದ ಮೇಲೆ ಬೃಹತ್ ಮರವೊಂದು ಉರುಳಿ ಬಿತ್ತು. ಇದರಿಂದ ಗಣಪತಿಯ ಮೂರ್ತಿಗಳು, ಅವುಗಳಿಗೆ ಬಳಿಯಲು ತಂದಿಟ್ಟ ಬಣ್ಣ, ಗಣಪತಿ ತಯಾರಿಕೆಯ ಮಾದರಿಗಳು ಸೇರಿದಂತೆ ₹ 70 ಸಾವಿರಕ್ಕೂ ಅಧಿಕ ನಷ್ಟವಾಗಿದೆ.</p>.<p>ನಾಲ್ಕು ದಿನಗಳಲ್ಲಿ ಅಣಶಿಯಿಂದ ರಾಮನಗರದ ಮಾರ್ಗ ಮಧ್ಯದಲ್ಲಿ ಬೆಳಗಾವಿ– ಸದಾಶಿವಗಡ ರಾಜ್ಯ ಹೆದ್ದಾರಿಯ ಮೇಲೆ 30ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಇದರಿಂದಾಗಿ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕದ ಸಮಸ್ಯೆ ಎದುರಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೊಯಿಡಾ:</strong> ತಾಲ್ಲೂಕಿನಲ್ಲಿ ಸೋಮವಾರ ಪ್ರಾರಂಭವಾದ ಗಾಳಿ ಸಹಿತ ಬಿರುಸಿನ ಮಳೆ ಗುರುವಾರವೂ ಮುಂದುವರಿಯಿತು. 48 ಗಂಟೆಗಳಲ್ಲಿ 25 ಸೆ.ಮೀ.ಗೂ ಅಧಿಕ ಮಳೆಯಾಗಿದೆ.</p>.<p>ಗಾಳಿಯ ಅಬ್ಬರಕ್ಕೆ ಹಲವೆಡೆ ಮನೆಗಳ ಮೇಲೆ ಮರಗಳು ಮುರಿದು ಬಿದ್ದಿವೆ. ತಾಲ್ಲೂಕಿನಾದ್ಯಾಂತ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದಾಗಿ ಮೂರು ದಿನಗಳಿಂದ ಜೊಯಿಡಾ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿದ್ಯುತ್ ಇಲ್ಲದೆ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.</p>.<p>ಕುಂಬಾರವಾಡದ ಹಳೇ ಪಶು ಆಸ್ಪತ್ರೆಯ ಕಟ್ಟಡದಲ್ಲಿ ಅಂಬಾಳಿಯ ವಿಠ್ಠಲ ವೇಳಿಪ ಎಂಬುವವರು ಗಣೇಶ ಚತುರ್ಥಿಯ ಸಲುವಾಗಿ 70ಕ್ಕೂ ಅಧಿಕ ಗಣಪತಿಯ ಮೂರ್ತಿಗಳನ್ನು ತಯಾರಿಸಿ ಇಟ್ಟಿದ್ದರು. ಗುರುವಾರ ಬೆಳಗಿನ ಜಾವ ಬೀಸಿದ ರಭಸದ ಗಾಳಿಯ ಪರಿಣಾಮವಾಗಿ ಈ ಕಟ್ಟಡದ ಮೇಲೆ ಬೃಹತ್ ಮರವೊಂದು ಉರುಳಿ ಬಿತ್ತು. ಇದರಿಂದ ಗಣಪತಿಯ ಮೂರ್ತಿಗಳು, ಅವುಗಳಿಗೆ ಬಳಿಯಲು ತಂದಿಟ್ಟ ಬಣ್ಣ, ಗಣಪತಿ ತಯಾರಿಕೆಯ ಮಾದರಿಗಳು ಸೇರಿದಂತೆ ₹ 70 ಸಾವಿರಕ್ಕೂ ಅಧಿಕ ನಷ್ಟವಾಗಿದೆ.</p>.<p>ನಾಲ್ಕು ದಿನಗಳಲ್ಲಿ ಅಣಶಿಯಿಂದ ರಾಮನಗರದ ಮಾರ್ಗ ಮಧ್ಯದಲ್ಲಿ ಬೆಳಗಾವಿ– ಸದಾಶಿವಗಡ ರಾಜ್ಯ ಹೆದ್ದಾರಿಯ ಮೇಲೆ 30ಕ್ಕೂ ಹೆಚ್ಚು ಮರಗಳು ಉರುಳಿ ಬಿದ್ದಿವೆ. ಇದರಿಂದಾಗಿ ಸಾರ್ವಜನಿಕರಿಗೆ ಸಾರಿಗೆ ಸಂಪರ್ಕದ ಸಮಸ್ಯೆ ಎದುರಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>