ಅವರು ದೊಣಿಗಳನ್ನು ಇಡಲು ಬಳಸುತ್ತಿದ್ದ ಬಂಡೆಕಲ್ಲುಗಳನ್ನು ಬಂದರಿನ ರಸ್ತೆ ಕಾಮಗಾರಿಗೆ ಬಳಸುವ ಆತಂಕ ಎದುರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಮಗಾರಿಗೆ ಚಾಲನೆ ನೀಡಿದ್ದ ಬಂದರು ಕಂಪನಿಯು, ಪೊಲೀಸರ ರಕ್ಷಣೆಯೊಂದಿಗೆ ಮೀನುಗಾರರ ನೆಲೆಗಳನ್ನು ತೆರವು ಮಾಡಿತ್ತು. ಇದರಿಂದ ಬೆದರಿದ್ದ ಟೊಂಕಾದ ಮೀನುಗಾರರು ದೋಣಿಗಳನ್ನು ಬ್ಲೂ ಫ್ಲ್ಯಾಗ್ ಕಡಲತಿರ ಸಮೀಪದ ಮರಳುತೀರದಲ್ಲಿ ಇಡುತ್ತಿದ್ದು, ಅಲ್ಲಿಂದಲೇ ಮೀನುಗಾರಿಕೆಗೆ ತೆರಳುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ದೋಣಿಯಲ್ಲಿದ್ದ ಇನ್ನುಳಿದ ಮೀನುಗಾರರಾದ ವಿಜಯ್ ಕ್ರಿಸ್ತಾದಾಸ್ ಫರ್ನಾಂಡೀಸ್ (49), ಶಂಕರ ಮಾದೇವ ತಾಂಡೇಲ್ (38) ಹಾಗೂ ಕಾಮೇಶ್ವರ ದೇವಯ್ಯ ತಾಂಡೇಲ್ (39) ಈಜಿಕೊಂಡು ದಡ ಸೇರಿದ್ದಾರೆ.