ಬಂದರು ವಿಸ್ತರಣೆ ಸಂಬಂಧ ಬಳಸಲು ಉದ್ದೇಶಿಸಲಾಗಿರುವ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಮಕ್ಕಳ ಉದ್ಯಾನದ ಬಳಿ, ಅಲಿಗದ್ದಾ, ಬಂದರು ಪ್ರದೇಶವನ್ನು ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮೀನುಗಾರರ ಮುಖಂಡರು, ಸ್ಥಳೀಯರು ಬಂದರು ವಿಸ್ತರಣೆಯಿಂದ ಆಗಬಹುದಾದ ತೊಂದರೆಗಳ ಬಗ್ಗೆ ತಿಳಿಸಿದರು. ಇದಕ್ಕೂ ಮೊದಲು ಮೀನುಗಾರರ ಮನವಿಗಳನ್ನು ಸ್ವೀಕರಿಸಿ, ಕೇಂದ್ರ ಕಚೇರಿಗೆ ಸಮಗ್ರವಾದ ವರದಿಯನ್ನು ಸಲ್ಲಿಸುವುದಾಗಿ ತಿಳಿಸಿದರು.