ಅಸಮರ್ಪಕ ರಸ್ತೆ ಕಾಮಗಾರಿ:‘ರಾಷ್ಟ್ರೀಯ ಹೆದ್ದಾರಿಗೆ ಪ್ರತಿಸಲ ಮರು ಡಾಂಬರೀಕರಣ ಮಾಡಿದಾಗ ರಸ್ತೆಯು ನೆಲಕ್ಕಿಂತ ಅರ್ಧ ಅಡಿ ಹೆಚ್ಚು ಎತ್ತರವಾಗುತ್ತದೆ. ವೇಗವಾಗಿ ಹೋಗುವ ಟ್ಯಾಂಕರ್ನಂಥ ಭಾರದ ವಾಹನ ರಸ್ತೆ ಕೆಳಗೆ ಇಳಿದಾಗ ಉರುಳಿ ಬೀಳುತ್ತವೆ. ರಸ್ತೆಯ ಎರಡೂ ಬದಿ ಇಳಿಜಾರು ನಿರ್ಮಿಸಿ ಸರಿಪಡಿಸಿದರೆ ಅಪಘಾತ ತಪ್ಪುತ್ತದೆ’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸ್ಥಳೀಯ ಮುಖಂಡ ಗಜು ನಾಯ್ಕ ಅಳ್ವೆಕೋಡಿ ತಿಳಿಸಿದರು.