ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ಕ್ಯಾಪ್ಟನ್ ರಮೇಶ ರಾವ್ ಮಾತನಾಡಿ, ‘ನೀರು ನಿಂತಿರುವ ಜಾಗಗಳು, ಸಿಮೆಂಟ್ ತೊಟ್ಟಿಗಳು, ತೆಂಗಿನ ಚಿಪ್ಪು, ಟೈರ್, ಟ್ಯಾಂಕ್, ಮರಗಳ ಪೊಟರೆ, ಹೂ ಕುಂಡಗಳು, ಬಿದಿರಿನ ಬೇಲಿ, ಫ್ರಿಜ್ನ ನೀರು ಸಂಗ್ರಹದ ಟ್ರೇಗಳು ಮುಂತಾದ ಕಡೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇವುಗಳ ಬಗ್ಗೆ ನಿಗಾ ವಹಿಸಬೇಕು’ ಎಂದರು.