ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ, ಎಸ್ಪಿ ಶಿವಪ್ರಕಾಶ ದೇವರಾಜು ಅವರು, ‘ಹೈದ್ರಾಬಾದ್ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಪ್ರಕರಣ ಅಮಾನವೀಯ. ಮಹಿಳೆಯರ ಸುರಕ್ಷತೆ ಹಿನ್ನೆಲೆಯಲ್ಲಿ ಓಬವ್ವ ತಂಡ ರಚಿಸಲಾಗಿದೆ. ಕಾಡಿನ ಜಿಲ್ಲೆಯಲ್ಲಿ ಶಾಲೆ–ಕಾಲೇಜು ಮುಗಿಸಿ ಮನೆಗೆ ಹೋಗುವ ಮಕ್ಕಳ ಸುರಕ್ಷತೆ ಮಹತ್ವದ್ದಾಗಿದೆ. ಈ ಮಕ್ಕಳು ಭಯವಿಲ್ಲದೇ ಮನೆ ತಲುಪಲು ಈ ವ್ಯವಸ್ಥೆ ಅನುಕೂಲವಾಗಲಿದೆ. ಉಪವಿಭಾಗದಲ್ಲಿ ಮೂವರು ಎಎಸ್ಐ, 18 ಪಿಸಿ ಸೇರಿ 21 ಜನರ ಮಹಿಳಾ ತಂಡ ಸಿದ್ಧವಾಗಿದೆ ಎಂದರು.