<p><strong>ಕಾರವಾರ: ‘</strong>ಕಾರವಾರದಿಂದಉಳ್ಳಾಲವರೆಗಿನ 320 ಕಿಲೋಮೀಟರ್ ಕಡಲತೀರದಲ್ಲಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ಆರಂಭಿಸಿರುವವಿವಿಧ ಕಾಮಗಾರಿಗಳು ಬಾಕಿಯಿವೆ. ಅವುಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.</p>.<p>ಅಂಕೋಲಾ ತಾಲ್ಲೂಕಿನ ಗಾಬಿತಕೇಣಿಯಲ್ಲಿ ಕಡಲ್ಕೊರೆತವಾದ ಪ್ರದೇಶವನ್ನುಭಾನುವಾರ ವೀಕ್ಷಿಸಿದ ಅವರು, ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.</p>.<p>‘ರಾಜ್ಯದಬಂದರುಗಳ ಹೂಳೆತ್ತಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ತಡೆಗೋಡೆಗಳ ರಚನೆಯೆಂದರೆ ಸಮುದ್ರಕ್ಕೆ ಕೇವಲ ಕಲ್ಲು ಹಾಕುವುದು ಎಂಬ ಆಪಾದನೆಯಿದೆ. ಈಗ ತುರ್ತಾಗಿ ಕಡಲತೀರಕ್ಕೆಕಲ್ಲು ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದರೆ, ಅದೇ ಕಲ್ಲನ್ನು ಶಾಶ್ವತ ತಡೆಗೋಡೆಗೆ ಬಳಸಿಕೊಳ್ಳುವಂತೆ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.</p>.<p class="Subhead">‘ನೀಲಿಕ್ರಾಂತಿ’ ಯೋಜನೆ:‘ಕೇಂದ್ರ ಸರ್ಕಾರವು ಮೀನುಗಾರಿಕೆಯನ್ನು ಕೃಷಿಯ ಭಾಗವನ್ನಾಗಿ ಪರಿಗಣಿಸಿ ಸುತ್ತೋಲೆ ಹೊರಡಿಸಿದೆ. ಈ ಸಲ ಸುಮಾರು ₹ 20 ಸಾವಿರ ಕೋಟಿಯನ್ನು ದೇಶದಾದ್ಯಂತ ಮೀನುಗಾರಿಕೆಗಾಗಿ ವಿನಿಯೋಗಿಸಲುಉದ್ದೇಶಿಸಿದೆ. ‘ನೀಲಿಕ್ರಾಂತಿ’ ಯೋಜನೆಯಡಿ ರಾಜ್ಯಕ್ಕೆ ಐದು ವರ್ಷಗಳ ಅವಧಿಯಲ್ಲಿ ₹ 3.5 ಸಾವಿರ ಕೋಟಿಯಿಂದ ₹ 4 ಸಾವಿರ ಕೋಟಿ ಸಿಗಬಹುದು ಎಂದು ಅಂದಾಜಿಸಲಾಗಿದೆ’ ಎಂದರು.</p>.<p>‘ಮೂರು ವರ್ಷಗಳಲ್ಲಿ ರಾಜ್ಯದ ಮೀನುಗಾರಿಕೆ ಅಭಿವೃದ್ಧಿ, ಜಟ್ಟಿಗಳು, ಕಿರು ಬಂದರುಗಳ ನಿರ್ಮಾಣ, ಮೀನುಗಾರರಿಗೆ ಸವಲತ್ತು, ಪಂಜರ ಕೃಷಿಗೆ ಪ್ರೋತ್ಸಾಹ, ಮೀನಿನ ಮರಿಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>‘ಕಳೆದ ಬಜೆಟ್ನಲ್ಲಿ 1,000 ಮೀನುಗಾರ ಮಹಿಳೆಯರಿಗೆ ಶೇ 50ರ ದರದಲ್ಲಿ ದ್ವಿಚಕ್ರ ವಾಹನಗಳನ್ನುಪ್ರಕಟಿಸಲಾಗಿತ್ತು. ಆ ಯೋಜನೆ ಸಕ್ರಿಯವಾಗಿದ್ದು,₹ 6 ಕೋಟಿ ಬಿಡುಗಡೆಯಾದ ಕೂಡಲೇ ವಾಹನಗಳನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.</p>.<p>‘ಮೀನುಗಾರರ ಸಾಲಮನ್ನಾ ಯೋಜನೆಯಡಿ 2017–18, 2018–19ನೇ ಸಾಲಿಗೆ ₹ 60 ಕೋಟಿ ಮನ್ನಾ ಆಗಿದೆ. 23 ಸಾವಿರ ಜನರಿಗೆ ಪ್ರಯೋಜನವಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಗೆ ಶೇ 80, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆತಲಾ ಶೇ 10ರಷ್ಟು ಪಾಲು ಸಿಕ್ಕಿದೆ. ಆಯಾ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕ್ಗಳಿಂದಹೆಚ್ಚು ಸಾಲ ಕೊಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನವ್ಯವಸ್ಥಾಪಕರನ್ನು ಕರೆದು ತಿಳಿಸುವಂತೆ ಶಾಸಕರಿಗೆಸೂಚಿಸಿದ್ದೇನೆ’ ಎಂದು ಹೇಳಿದರು.</p>.<p class="Subhead">‘ಒಂದು ವಾರದಲ್ಲಿ ಬಿಡುಗಡೆ’:‘ಜನವರಿಯಿಂದ ಮಾರ್ಚ್ವರೆಗೆ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಬರಬೇಕಿದ್ದು, ಹಣಕಾಸು ಇಲಾಖೆಗೆ₹ 33 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿದೆ.ಒಂದು ವಾರದಲ್ಲಿ ಬಿಡುಗಡೆಯಾಗಲಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.</p>.<p>‘ಮೀನುಗಾರರಿಗೆ ಶೂನ್ಯ ಮತ್ತು ಶೇ 2ರ ಬಡ್ಡಿ ದರದಲ್ಲಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್ಗಳು ಕೊಡುತ್ತಿಲ್ಲ ಎಂಬ ವಿಚಾರ ಗೊತ್ತಾಗಿದೆ. ಈ ಸಂಬಂಧ 15 ದಿನಗಳಲ್ಲಿಪ್ರಮುಖರ ಸಭೆ ನಡೆಸಲಾಗುತ್ತದೆ.ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೀನುಗಾರರ ಉಳಿತಾಯ ಪರಿಹಾರ ಯೋಜನೆಗೆ, ಕೇಂದ್ರ ಸರ್ಕಾರವು ₹ 500 ಕೋಟಿ ಬಿಡುಗಡೆ ಮಾಡಿದ್ದು,ರಾಜ್ಯವೂ ನೀಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: ‘</strong>ಕಾರವಾರದಿಂದಉಳ್ಳಾಲವರೆಗಿನ 320 ಕಿಲೋಮೀಟರ್ ಕಡಲತೀರದಲ್ಲಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ನೆರವಿನಲ್ಲಿ ಆರಂಭಿಸಿರುವವಿವಿಧ ಕಾಮಗಾರಿಗಳು ಬಾಕಿಯಿವೆ. ಅವುಗಳನ್ನು ಹಂತಹಂತವಾಗಿ ಆರಂಭಿಸಲಾಗುತ್ತಿದೆ’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.</p>.<p>ಅಂಕೋಲಾ ತಾಲ್ಲೂಕಿನ ಗಾಬಿತಕೇಣಿಯಲ್ಲಿ ಕಡಲ್ಕೊರೆತವಾದ ಪ್ರದೇಶವನ್ನುಭಾನುವಾರ ವೀಕ್ಷಿಸಿದ ಅವರು, ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.</p>.<p>‘ರಾಜ್ಯದಬಂದರುಗಳ ಹೂಳೆತ್ತಬೇಕು ಎಂಬ ಬೇಡಿಕೆಯನ್ನು ಪರಿಶೀಲಿಸಲಾಗುತ್ತಿದೆ. ತಡೆಗೋಡೆಗಳ ರಚನೆಯೆಂದರೆ ಸಮುದ್ರಕ್ಕೆ ಕೇವಲ ಕಲ್ಲು ಹಾಕುವುದು ಎಂಬ ಆಪಾದನೆಯಿದೆ. ಈಗ ತುರ್ತಾಗಿ ಕಡಲತೀರಕ್ಕೆಕಲ್ಲು ಹಾಕಬೇಕು ಎಂದು ಜಿಲ್ಲಾಧಿಕಾರಿಗಳು ವರದಿ ನೀಡಿದರೆ, ಅದೇ ಕಲ್ಲನ್ನು ಶಾಶ್ವತ ತಡೆಗೋಡೆಗೆ ಬಳಸಿಕೊಳ್ಳುವಂತೆ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.</p>.<p class="Subhead">‘ನೀಲಿಕ್ರಾಂತಿ’ ಯೋಜನೆ:‘ಕೇಂದ್ರ ಸರ್ಕಾರವು ಮೀನುಗಾರಿಕೆಯನ್ನು ಕೃಷಿಯ ಭಾಗವನ್ನಾಗಿ ಪರಿಗಣಿಸಿ ಸುತ್ತೋಲೆ ಹೊರಡಿಸಿದೆ. ಈ ಸಲ ಸುಮಾರು ₹ 20 ಸಾವಿರ ಕೋಟಿಯನ್ನು ದೇಶದಾದ್ಯಂತ ಮೀನುಗಾರಿಕೆಗಾಗಿ ವಿನಿಯೋಗಿಸಲುಉದ್ದೇಶಿಸಿದೆ. ‘ನೀಲಿಕ್ರಾಂತಿ’ ಯೋಜನೆಯಡಿ ರಾಜ್ಯಕ್ಕೆ ಐದು ವರ್ಷಗಳ ಅವಧಿಯಲ್ಲಿ ₹ 3.5 ಸಾವಿರ ಕೋಟಿಯಿಂದ ₹ 4 ಸಾವಿರ ಕೋಟಿ ಸಿಗಬಹುದು ಎಂದು ಅಂದಾಜಿಸಲಾಗಿದೆ’ ಎಂದರು.</p>.<p>‘ಮೂರು ವರ್ಷಗಳಲ್ಲಿ ರಾಜ್ಯದ ಮೀನುಗಾರಿಕೆ ಅಭಿವೃದ್ಧಿ, ಜಟ್ಟಿಗಳು, ಕಿರು ಬಂದರುಗಳ ನಿರ್ಮಾಣ, ಮೀನುಗಾರರಿಗೆ ಸವಲತ್ತು, ಪಂಜರ ಕೃಷಿಗೆ ಪ್ರೋತ್ಸಾಹ, ಮೀನಿನ ಮರಿಗಳನ್ನು ಸ್ಥಳೀಯವಾಗಿ ಉತ್ಪಾದಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>‘ಕಳೆದ ಬಜೆಟ್ನಲ್ಲಿ 1,000 ಮೀನುಗಾರ ಮಹಿಳೆಯರಿಗೆ ಶೇ 50ರ ದರದಲ್ಲಿ ದ್ವಿಚಕ್ರ ವಾಹನಗಳನ್ನುಪ್ರಕಟಿಸಲಾಗಿತ್ತು. ಆ ಯೋಜನೆ ಸಕ್ರಿಯವಾಗಿದ್ದು,₹ 6 ಕೋಟಿ ಬಿಡುಗಡೆಯಾದ ಕೂಡಲೇ ವಾಹನಗಳನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.</p>.<p>‘ಮೀನುಗಾರರ ಸಾಲಮನ್ನಾ ಯೋಜನೆಯಡಿ 2017–18, 2018–19ನೇ ಸಾಲಿಗೆ ₹ 60 ಕೋಟಿ ಮನ್ನಾ ಆಗಿದೆ. 23 ಸಾವಿರ ಜನರಿಗೆ ಪ್ರಯೋಜನವಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಗೆ ಶೇ 80, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡಕ್ಕೆತಲಾ ಶೇ 10ರಷ್ಟು ಪಾಲು ಸಿಕ್ಕಿದೆ. ಆಯಾ ಜಿಲ್ಲೆಗಳ ರಾಷ್ಟ್ರೀಕೃತ ಬ್ಯಾಂಕ್ಗಳಿಂದಹೆಚ್ಚು ಸಾಲ ಕೊಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ನವ್ಯವಸ್ಥಾಪಕರನ್ನು ಕರೆದು ತಿಳಿಸುವಂತೆ ಶಾಸಕರಿಗೆಸೂಚಿಸಿದ್ದೇನೆ’ ಎಂದು ಹೇಳಿದರು.</p>.<p class="Subhead">‘ಒಂದು ವಾರದಲ್ಲಿ ಬಿಡುಗಡೆ’:‘ಜನವರಿಯಿಂದ ಮಾರ್ಚ್ವರೆಗೆ ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಬರಬೇಕಿದ್ದು, ಹಣಕಾಸು ಇಲಾಖೆಗೆ₹ 33 ಕೋಟಿಯ ಪ್ರಸ್ತಾವ ಸಲ್ಲಿಸಲಾಗಿದೆ.ಒಂದು ವಾರದಲ್ಲಿ ಬಿಡುಗಡೆಯಾಗಲಿದೆ’ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.</p>.<p>‘ಮೀನುಗಾರರಿಗೆ ಶೂನ್ಯ ಮತ್ತು ಶೇ 2ರ ಬಡ್ಡಿ ದರದಲ್ಲಿ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್ಗಳು ಕೊಡುತ್ತಿಲ್ಲ ಎಂಬ ವಿಚಾರ ಗೊತ್ತಾಗಿದೆ. ಈ ಸಂಬಂಧ 15 ದಿನಗಳಲ್ಲಿಪ್ರಮುಖರ ಸಭೆ ನಡೆಸಲಾಗುತ್ತದೆ.ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೀನುಗಾರರ ಉಳಿತಾಯ ಪರಿಹಾರ ಯೋಜನೆಗೆ, ಕೇಂದ್ರ ಸರ್ಕಾರವು ₹ 500 ಕೋಟಿ ಬಿಡುಗಡೆ ಮಾಡಿದ್ದು,ರಾಜ್ಯವೂ ನೀಡಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>