ಬಿಜೆಪಿ ಗ್ರಾಮೀಣ ಘಟಕದಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ, ಭಗತ್ ಸಿಂಗ್, ಭಾರತಾಂಬೆ, ಭಾರತದ ನಕ್ಷೆ, ಹಸಿರು ಭಾರತ, ಸ್ವಚ್ಛ ಭಾರತ ಮುಂತಾದ ರಂಗೋಲಿಗಳು ಗಮನ ಸೆಳೆದವು. ಕಮಲದ ಬೃಹತ್ ರಂಗೋಲಿಯಲ್ಲಿ 105 ದೀಪಗಳನ್ನು ಹಚ್ಚಿ ಸದೃಢ ಭಾರತದ ಕನಸನ್ನು ಸಾಕಾರಗೊಳಿಸುವ ಕುರಿತು ಪ್ರತಿಜ್ಞೆ ಸ್ವೀಕರಿಸಿದರು.