ನಗರದಲ್ಲಿನಡೆದ ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಲಕೋಟೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ‘ಶಿರಸಿಯ ಅಡಿಕೆಗೆ ವಿಶೇಷ ಅಂಚೆ ಲಕೋಟೆ ಮೂಲಕ ಜಗತ್ತಿಗೆ ಪರಿಚಯಿಸುವುದು ಒಳ್ಳೆಯ ಕಾರ್ಯ. ಪ್ರಧಾನಿ ವಿದೇಶಿ ಗಣ್ಯರ ಜತೆ ಸಂವಹನಕ್ಕೆ ಜಿಐ ಟ್ಯಾಗ್ ಲಕೋಟೆ ಬಳಸುವುದರಿಂದ ಅಡಿಕೆಗೆ ಜಾಗತಿಕ ಪ್ರಚಾರ ದೊರೆಯಲು ಅನುಕೂಲವಾಗುತ್ತದೆ’ ಎಂದರು.