ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಜಯ ಜ್ಯೋತಿಯನ್ನು ಸ್ವಾಗತಿಸಲು ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟವಾಗಿದೆ. ದೇಶದಾದ್ಯಂತ ಸಂಚರಿಸುತ್ತಿರುವ ಇದು, ಸೆ.24ರ ತನಕ ಕಾರವಾರದಲ್ಲಿ ಇರಲಿದೆ. ಈ ಅವಧಿಯಲ್ಲಿ ನೌಕಾನೆಲೆಯ ನೌಕೆಗಳು, ಕಾರವಾರದ ವಿವಿಧ ಶಾಲೆಗಳಿಗೂ ತಲುಪಲಿದೆ’ ಎಂದು ತಿಳಿಸಿದರು.