ತೀರಾ ಹಿಂದುಳಿದ ಪ್ರದೇಶಗಳಲ್ಲೇ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅವರನ್ನು ‘ಕುಗ್ರಾಮದ ಜನರ ಗುರು’ ಎಂದೇ ಹಲವರು ಗುರುತಿಸುತ್ತಾರೆ. ಮುಂಡಗೋಡ ತಾಲ್ಲೂಕಿನ ಅತಿ ಹಿಂದುಳಿದ ಪ್ರದೇಶಗಳಾದ ಬಸವನಕೊಪ್ಪ, ಚೌಡಳ್ಳಿ, ಬಡ್ಡಿಗೇರಿ ಶಾಲೆಗಳಲ್ಲಿ ಕೆಲಸ ಮಾಡಿ, ಗ್ರಾಮಸ್ಥರಲ್ಲಿ ಸಾಕ್ಷರತೆಯ ಬೀಜ ಬಿತ್ತಿರುವುದು ಇದಕ್ಕೆ ಕಾರಣ.