<p><strong>ಶಿರಸಿ: </strong>ಕಾರ್ಮಿಕ ಸಚಿವರಾಗಿ ಎರಡನೆ ಬಾರಿಗೆ ಸಂಪುಟ ಸೇರಿದ ಶಿವರಾಮ ಹೆಬ್ಬಾರ ಅವರನ್ನು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಶಿರಸಿಯ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.</p>.<p>ಸಂಪುಟ ಸೇರ್ಪಡೆ ಬಳಿಕ ಶಿವರಾಮ ಹೆಬ್ಬಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದರು. ಕಾಗೇರಿ ಅವರ ಕಚೇರಿಗೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ವೇಳೆ ವಿಧಾನಸಭಾ ಅಧ್ಯಕ್ಷ ಹಾಗೂ ಸಚಿವರು ಇಬ್ಬರೇ ಇದ್ದರು.</p>.<p>ಮಾತುಕತೆ ಮುಗಿದ ಬಳಿಕ ಕೊಠಡಿಯಿಂದ ಹೊರಬಂದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿ ನೇಮಕವಾದ ಶಿವರಾಮ ಹೆಬ್ಬಾರ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡರು. ಅಲ್ಲದೆ ಹಾರ ಹಾಕಿ ಉತ್ತಮವಾಗಿ ಹುದ್ದೆ ಜವಾಬ್ದಾರಿ ನಿಭಾಯಿಸಿ ಎಂದು ಹಾರೈಸಿದರು.</p>.<p>'ಕೋವಿಡ್ ಮೂರನೆ ಅಲೆ ನಿಯಂತ್ರಣ, ಅತಿವೃಷ್ಟಿ ಪರಿಹಾರದ ಸಂಬಂಧ ಚರ್ಚಿಸಿದ್ದೇವೆ. ಇದರ ಹೊರತು ಬೇರೆ ಚರ್ಚೆ ನಡೆದಿಲ್ಲ' ಎಂದು ಕಾಗೇರಿ ಪ್ರತಿಕ್ರಿಯಿಸಿದರು.</p>.<p>ಸಿಎಂ ರೇಸ್ ನಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಕೊನೆ ಗಳಿಗೆಯಲ್ಲಿ ಸಚಿವ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದರು. ಆದರೆ ಉತ್ತರ ಕನ್ನಡಕ್ಕೆ ನೀಡಬೇಕಿದ್ದ ಪ್ರಾತಿನಿಧ್ಯ ಅವರ ಬದಲು ಶಿವರಾಮ ಹೆಬ್ಬಾರ ಅವರಿಗೆ ಒಲಿದಿದೆ. ಹೀಗಾಗಿ ಅವರಿಬ್ಬರ ಭೇಟಿ ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಕಾರ್ಮಿಕ ಸಚಿವರಾಗಿ ಎರಡನೆ ಬಾರಿಗೆ ಸಂಪುಟ ಸೇರಿದ ಶಿವರಾಮ ಹೆಬ್ಬಾರ ಅವರನ್ನು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಶಿರಸಿಯ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಅಭಿನಂದಿಸಿದರು.</p>.<p>ಸಂಪುಟ ಸೇರ್ಪಡೆ ಬಳಿಕ ಶಿವರಾಮ ಹೆಬ್ಬಾರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದರು. ಕಾಗೇರಿ ಅವರ ಕಚೇರಿಗೆ ತೆರಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ವೇಳೆ ವಿಧಾನಸಭಾ ಅಧ್ಯಕ್ಷ ಹಾಗೂ ಸಚಿವರು ಇಬ್ಬರೇ ಇದ್ದರು.</p>.<p>ಮಾತುಕತೆ ಮುಗಿದ ಬಳಿಕ ಕೊಠಡಿಯಿಂದ ಹೊರಬಂದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವರಾಗಿ ನೇಮಕವಾದ ಶಿವರಾಮ ಹೆಬ್ಬಾರ ಅವರ ಜತೆ ನಿಂತು ಫೋಟೊ ತೆಗೆಸಿಕೊಂಡರು. ಅಲ್ಲದೆ ಹಾರ ಹಾಕಿ ಉತ್ತಮವಾಗಿ ಹುದ್ದೆ ಜವಾಬ್ದಾರಿ ನಿಭಾಯಿಸಿ ಎಂದು ಹಾರೈಸಿದರು.</p>.<p>'ಕೋವಿಡ್ ಮೂರನೆ ಅಲೆ ನಿಯಂತ್ರಣ, ಅತಿವೃಷ್ಟಿ ಪರಿಹಾರದ ಸಂಬಂಧ ಚರ್ಚಿಸಿದ್ದೇವೆ. ಇದರ ಹೊರತು ಬೇರೆ ಚರ್ಚೆ ನಡೆದಿಲ್ಲ' ಎಂದು ಕಾಗೇರಿ ಪ್ರತಿಕ್ರಿಯಿಸಿದರು.</p>.<p>ಸಿಎಂ ರೇಸ್ ನಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಕೊನೆ ಗಳಿಗೆಯಲ್ಲಿ ಸಚಿವ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದರು. ಆದರೆ ಉತ್ತರ ಕನ್ನಡಕ್ಕೆ ನೀಡಬೇಕಿದ್ದ ಪ್ರಾತಿನಿಧ್ಯ ಅವರ ಬದಲು ಶಿವರಾಮ ಹೆಬ್ಬಾರ ಅವರಿಗೆ ಒಲಿದಿದೆ. ಹೀಗಾಗಿ ಅವರಿಬ್ಬರ ಭೇಟಿ ಜಿಲ್ಲೆಯಲ್ಲಿ ಅಚ್ಚರಿ ಮೂಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>