<p><strong>ಸಿದ್ದಾಪುರ:</strong> ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಗುರುವಾರ ನಡೆಯಿತು.</p>.<p>ಮೊದಲ ದಿನ ಸಂಸ್ಕೃತಿ ಸಂಪದ ಮತ್ತು ದಿ. ಭಾಸ್ಕರ ಹೆಗಡೆ ಕಲಾವೇದಿಕೆ ಕಲ್ಲಗದ್ದೆ ಸಹಯೋಗದಲ್ಲಿ ನಾದಸಂಧ್ಯಾ ಶೀರ್ಷಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯ ಟಿ.ಜಿ. ಹೆಗಡೆ ಉದ್ಘಾಟಿಸಿದರು. ಧರ್ಮಾಧಿಕಾರಿಗಳಾದ ವಿಜಯ ಹೆಗಡೆ ದೊಡ್ಮನೆ ವೇದಿಕೆಯಲ್ಲಿದ್ದರು.</p>.<p>ಕಲಾವೇದಿಕೆಯ ಅಧ್ಯಕ್ಷ ನವೀನ ಹೆಗಡೆ ಸ್ವಾಗತಿಸಿದರು. ಸಂಚಾಲಕ ನಿತಿನ್ ಹೆಗಡೆ ಕಲಗದ್ದೆ ಸಹಕರಿಸಿದರು. ಶಿಕ್ಷಕ ವೀರಭದ್ರ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸತೀಶ ಹೆಗಡೆ ಯಾಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.</p>.<p>ತಬಲಾದಲ್ಲಿ ಮಹೇಶ ಹೆಗಡೆ ಹೊಸಗದ್ದೆ, ಹಾರ್ಮೋನಿಯಂನಲ್ಲಿ ರಾಜೇಂದ್ರ ಕೊಳಗಿ, ತಾನ್ಪುರದಲ್ಲಿ ನವೀನ ಹೆಗಡೆ ಶಿರಸಿ ಸಹಕರಿಸಿದರು.</p>.<p>ನಂತರ ಯುವ ಗಾಯಕ ಮನು ಹೆಗಡೆ ಪುಟ್ಟನಮನೆ ರಾಗ ಜೈಜೈವಂತಿ ಪ್ರಸ್ತುತಪಡಿಸಿದರು. ಡಾ. ಸಮೀರ ಬಾದ್ರಿ ಹಾರ್ಮೋನಿಯಂನಲ್ಲಿ, ಸಂದೇಶ ಹೆಗಡೆ ತಬಲಾದಲ್ಲಿ ಹಾಗೂ ನವೀನ ಹೆಗಡೆ ತಾನ್ಪುರದಲ್ಲಿ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ:</strong> ಪಟ್ಟಣದ ಶೃಂಗೇರಿ ಶಂಕರ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಗುರುವಾರ ನಡೆಯಿತು.</p>.<p>ಮೊದಲ ದಿನ ಸಂಸ್ಕೃತಿ ಸಂಪದ ಮತ್ತು ದಿ. ಭಾಸ್ಕರ ಹೆಗಡೆ ಕಲಾವೇದಿಕೆ ಕಲ್ಲಗದ್ದೆ ಸಹಯೋಗದಲ್ಲಿ ನಾದಸಂಧ್ಯಾ ಶೀರ್ಷಿಕೆಯಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ನಿವೃತ್ತ ಪ್ರಾಚಾರ್ಯ ಟಿ.ಜಿ. ಹೆಗಡೆ ಉದ್ಘಾಟಿಸಿದರು. ಧರ್ಮಾಧಿಕಾರಿಗಳಾದ ವಿಜಯ ಹೆಗಡೆ ದೊಡ್ಮನೆ ವೇದಿಕೆಯಲ್ಲಿದ್ದರು.</p>.<p>ಕಲಾವೇದಿಕೆಯ ಅಧ್ಯಕ್ಷ ನವೀನ ಹೆಗಡೆ ಸ್ವಾಗತಿಸಿದರು. ಸಂಚಾಲಕ ನಿತಿನ್ ಹೆಗಡೆ ಕಲಗದ್ದೆ ಸಹಕರಿಸಿದರು. ಶಿಕ್ಷಕ ವೀರಭದ್ರ ನಾಯ್ಕ ಬೇಡ್ಕಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸತೀಶ ಹೆಗಡೆ ಯಾಣ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.</p>.<p>ತಬಲಾದಲ್ಲಿ ಮಹೇಶ ಹೆಗಡೆ ಹೊಸಗದ್ದೆ, ಹಾರ್ಮೋನಿಯಂನಲ್ಲಿ ರಾಜೇಂದ್ರ ಕೊಳಗಿ, ತಾನ್ಪುರದಲ್ಲಿ ನವೀನ ಹೆಗಡೆ ಶಿರಸಿ ಸಹಕರಿಸಿದರು.</p>.<p>ನಂತರ ಯುವ ಗಾಯಕ ಮನು ಹೆಗಡೆ ಪುಟ್ಟನಮನೆ ರಾಗ ಜೈಜೈವಂತಿ ಪ್ರಸ್ತುತಪಡಿಸಿದರು. ಡಾ. ಸಮೀರ ಬಾದ್ರಿ ಹಾರ್ಮೋನಿಯಂನಲ್ಲಿ, ಸಂದೇಶ ಹೆಗಡೆ ತಬಲಾದಲ್ಲಿ ಹಾಗೂ ನವೀನ ಹೆಗಡೆ ತಾನ್ಪುರದಲ್ಲಿ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>