ಅತಿವೃಷ್ಟಿ ಕಾರಣಕ್ಕೆ ಎಲ್ಲ ಬೆಳೆಗಳಿಗೆ ಕೊಳೆ ರೋಗ ಕಾಡುತ್ತಿದೆ. ಈಗಾಗಲೇ ಅರ್ಧ ಬೆಳೆ ಹಾಳಾಗಿದೆ. ಸರ್ಕಾರ ಹೆಚ್ಚಿನ ಪರಿಹಾರ ನೀಡಲು ಮುಂದಾಗಬೇಕು
ಗೋಪಾಲಕೃಷ್ಣ ವೈದ್ಯ (ಶಿರಸಿ) ಟಿಎಸ್ಎಸ್ ಅಧ್ಯಕ್ಷ
ರೈತರು ಬೆಳೆದ ಬೆಳೆ ನಷ್ಟಕ್ಕೆ ಅಲ್ಪ ಮೊತ್ತದ ಪರಿಹಾರ ನೀಡಲಾಗುತ್ತಿದೆ. ಅದಕ್ಕೂ ಹಲವು ಷರತ್ತು ವಿಧಿಸಲಾಗುತ್ತಿದೆ. ನಿಯಮ ಸರಳೀಕರಿಸುವ ಜತೆಗೆ ಹೆಚ್ಚು ಮೊತ್ತದ ಪರಿಹಾರ ನೀಡಬೇಕು
ಹುಲಿಯಾ ಗೌಡ (ಗೋಕರ್ಣ) ಕೇತಕಿ ವಿನಾಯಕ ಕಾರ್ಮಿಕ ಸಂಘದ ಅಧ್ಯಕ್ಷ
ಅಡಿಕೆಗೆ ಕೊಳೆ ರೋಗ ಹರಡಿದ್ದು ಶೇ 40ರಷ್ಟು ಬೆಳೆ ನಾಶಗೊಂಡಿದೆ. ಸರ್ಕಾರದಿಂದ ಸಿಗುವ ಪರಿಹಾರಕ್ಕೂ ಅಡಿಕೆಗೆ ಇರುವ ಬೆಲೆಗೂ ಬಹಳ ವ್ಯತ್ಯಾಸವಿದ್ದು ಸಣ್ಣ ಹಿಡುವಳಿದಾರರಿಗೆ ಆರ್ಥಿಕವಾಗಿ ಪೆಟ್ಟು ಬಿದ್ದಂತಾಗಿದೆ
ಗಜಾನನ ಹೆಗಡೆ ಮದ್ದಿನಕೇರಿ (ಸಿದ್ದಾಪುರ) ಕೃಷಿಕ
ಅತಿವೃಷ್ಟಿಯಿಂದ ಗೋವಿನಜೋಳ ಬೆಳೆಗೆ ತೀವ್ರ ಹಾನಿಯಾಗಿದ್ದು ಗಟ್ಟಿ ಕಾಳಿನ ತೆನೆ ಸಿಗುವುದು ಅನುಮಾನವಿದೆ