<p><strong>ಭಟ್ಕಳ (ಉತ್ತರ ಕನ್ನಡ ಜಿಲ್ಲೆ):</strong> ತಾಲ್ಲೂಕಿನ ಅಳ್ವೆಕೋಡಿಯಲ್ಲಿ ಜುಲೈ 30ರಂದು ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಕಣ್ಮರೆಯಾದ ನಾಲ್ವರ ಮೀನುಗಾರರ ಪೈಕಿ ನಿಶ್ಚಿತ್ ಮೊಗೇರ ಎಂಬುವರ ಶವ ಶನಿವಾರ ಕುಂದಾಪುರದ ಮರವಂತೆ ಸಮುದ್ರದಲ್ಲಿ ಪತ್ತೆಯಾಗಿದೆ. </p>.<p>ರಾಮಕೃಷ್ಣ ಮೊಗೇರ ಎಂಬುವರ ಶವ, ಘಟನೆ ನಡೆದ ಮರುದಿನವೇ ಪತ್ತೆಯಾಗಿತ್ತು. ಈವರೆಗೆ ಇಬ್ಬರ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ.</p>.<p>ರಾಜ್ಯ ಮೀನುಗಾರ ಇಲಾಖೆ ನಿರ್ದೇಶಕ ದಿನೇಶ ಕಲ್ಲೇರ ಹಗೂ ಭಟ್ಕಳ ಉಪವಿಭಾಗಾಧಿಕಾರಿ ಕೆ.ವಿ ಕಾವ್ಯರಾಣಿ ಅಳ್ವೇಕೋಡಿ ಸಮುದ್ರ ತೀರಕ್ಕೆ ಭೇಟಿ ನೀಡಿ ಮೀನುಗಾರರ ಮುಖಂಡರ ಜೊತೆ ಸಮಾಲೋಚಿಸಿದರು. ಮೀನುಗಾರರ ಕುಟುಂಬದವರಿಗೆ ಸಾಂತ್ವನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ (ಉತ್ತರ ಕನ್ನಡ ಜಿಲ್ಲೆ):</strong> ತಾಲ್ಲೂಕಿನ ಅಳ್ವೆಕೋಡಿಯಲ್ಲಿ ಜುಲೈ 30ರಂದು ಮೀನುಗಾರಿಕೆಗೆ ತೆರಳಿದ್ದ ದೋಣಿ ಮುಗುಚಿ ಕಣ್ಮರೆಯಾದ ನಾಲ್ವರ ಮೀನುಗಾರರ ಪೈಕಿ ನಿಶ್ಚಿತ್ ಮೊಗೇರ ಎಂಬುವರ ಶವ ಶನಿವಾರ ಕುಂದಾಪುರದ ಮರವಂತೆ ಸಮುದ್ರದಲ್ಲಿ ಪತ್ತೆಯಾಗಿದೆ. </p>.<p>ರಾಮಕೃಷ್ಣ ಮೊಗೇರ ಎಂಬುವರ ಶವ, ಘಟನೆ ನಡೆದ ಮರುದಿನವೇ ಪತ್ತೆಯಾಗಿತ್ತು. ಈವರೆಗೆ ಇಬ್ಬರ ಶವ ಪತ್ತೆಯಾಗಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆದಿದೆ.</p>.<p>ರಾಜ್ಯ ಮೀನುಗಾರ ಇಲಾಖೆ ನಿರ್ದೇಶಕ ದಿನೇಶ ಕಲ್ಲೇರ ಹಗೂ ಭಟ್ಕಳ ಉಪವಿಭಾಗಾಧಿಕಾರಿ ಕೆ.ವಿ ಕಾವ್ಯರಾಣಿ ಅಳ್ವೇಕೋಡಿ ಸಮುದ್ರ ತೀರಕ್ಕೆ ಭೇಟಿ ನೀಡಿ ಮೀನುಗಾರರ ಮುಖಂಡರ ಜೊತೆ ಸಮಾಲೋಚಿಸಿದರು. ಮೀನುಗಾರರ ಕುಟುಂಬದವರಿಗೆ ಸಾಂತ್ವನ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>