<p><strong>ಕಾರವಾರ: </strong>ತಾಲ್ಲೂಕಿನ ಹಣಕೋಣದ ಕಿರು ಜಲಾಶಯದ ಸುತ್ತಮುತ್ತ ಸೂಕ್ತ ನಿರ್ವಹಣೆ ಇಲ್ಲದೇ ಪ್ರವಾಸಿಗರು ಬೇಸರಗೊಂಡಿದ್ದಾರೆ. ನಿಸರ್ಗದ ಸೊಬಗನ್ನು ಸವಿಯಲು ನಿರ್ಮಿಸಲಾದ ಪ್ರದೇಶವೀಗ ಶಿಥಿಲಾವಸ್ಥೆಗೆ ತಲುಪಿದೆ.</p>.<p>ಜಲಾಶಯದತ್ತ ಸಾಗಲು ಅಳವಡಿಸಿರುವ ಪ್ಲಾಟ್ಫಾರಂನ ರೇಲಿಂಗ್ ತುಕ್ಕು ಹಿಡಿದಿದೆ. ಅಲ್ಲದೇಒಂದೆರಡು ಕಡೆ ತುಂಡಾಗಿ ಬಿದ್ದಿದೆ. ಇಲ್ಲಿ ಪ್ರವಾಸಿಗರು ಹೆಜ್ಜೆ ಹಾಕುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕಿದೆ. ಉತ್ತಮ ಪ್ರವಾಸಿ ತಾಣವಾಗಲು ಅರ್ಹವಾಗಿರುವ ಈ ಸ್ಥಳದ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಪ್ರವಾಸಿಗರಆಗ್ರಹವಾಗಿದೆ.</p>.<p class="Subhead"><strong>45 ವರ್ಷಗಳ ಹಿಂದೆ ನಿರ್ಮಾಣ:</strong>1974– 75ನೇಸಾಲಿನಲ್ಲಿ ಈ ಕಿರು ಜಲಾಶಯವನ್ನು ನಿರ್ಮಾಣ ಮಾಡಲಾಗಿತ್ತು. ಹಣಕೋಣ ಭಾಗದ 3.98 ಹೆಕ್ಟೇರ್ ಜಮೀನಿಗೆ ಇಲ್ಲಿಯ ನೀರನ್ನು ಬಳಸಲಾಗುತ್ತಿದೆ. ಭತ್ತ, ಕಲ್ಲಂಗಡಿ ಬೆಳೆಗಳನ್ನು ಇಲ್ಲಿನ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ.</p>.<p>ಜಲಾಶಯದಿಂದಾಗಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಉತ್ತಮವಾಗಿದ್ದು, ಏಪ್ರಿಲ್–ಮೇ ತಿಂಗಳಿನಲ್ಲಿಯೂ ರೈತರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶಗಳಿವೆ ಎನ್ನುತ್ತಾರೆ ಪ್ರವಾಸಿಗರಾದ ಸರೋಜಾ.</p>.<p class="Subhead"><strong>ಕುಂದು–ಕೊರತೆಗಳೇ ಹೆಚ್ಚು:</strong>ಕಾರವಾರದಿಂದ15ಕಿಲೋಮೀಟರ್ ದೂರದ ಹಣಕೋಣದ ಬಳಿ ಇರುವ ಈ ಕಿರು ಜಲಾಶಯವನ್ನು ಗುರುತಿಸಲು ಯಾವುದೇ ನಾಮಫಲಕವಿಲ್ಲ. ಸ್ಥಳೀಯರ ಬಳಿ ಮಾಹಿತಿ ಪಡೆದುಕೊಂಡೇ ಒಂದು ಕಿಲೋಮೀಟರ್ದೂರ ಕಾಲ್ನಡಿಗೆಯಲ್ಲಿ ಕ್ರಮಿಸಬೇಕು.</p>.<p class="Subhead">ಜಲಾಶಯದ ಮತ್ತೊಂದು ತುದಿಯಲ್ಲಿರುವ ವ್ಯೂ ಪಾಯಿಂಟ್, ಗಿಡಗಂಟಿಗಳಿಂದಲೇ ಮುಚ್ಚಿ ಹೋಗಿದೆ.ಯಾವುದೇ ಮೂಲಸೌಕರ್ಯಗಳಿಲ್ಲ. ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ ಪೊಟ್ಟಣಗಳನ್ನು ಹಾಕಲು ಕಸದ ಬುಟ್ಟಿಯೂ ಇಲ್ಲ. ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡಲಾಗುತ್ತಿದೆ. ಹಾಗಾಗಿ ಪರಿಸರಕ್ಕೂ ಹಾನಿಯಾಗುತ್ತಿದೆ.ಹಾಗಾಗಿ ಈ ಸ್ಥಳವನ್ನು ಮತ್ತಷ್ಟು ಸುಂದರವಾಗಿಸಲು ಕಿರು ನೀರಾವರಿ ಇಲಾಖೆ ಗಮನ ಹರಿಸಬೇಕು ಎನ್ನುವುದು ಅವರ ಒತ್ತಾಯವಾಗಿದೆ.</p>.<p class="Subhead"><strong>‘ಏಪ್ರಿಲ್ನಲ್ಲಿ ಮತ್ತಷ್ಟು ದುರಸ್ತಿ’:</strong>‘ಹಣಕೋಣ ಕಿರು ಜಲಾಶಯವನ್ನು ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ನಿರ್ವಹಣೆ ಮಾಡಲಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವ ಸಂದರ್ಭದಲ್ಲಿ ಮತ್ತಷ್ಟು ದುರಸ್ತಿ ಮಾಡಲಾಗುತ್ತದೆ’ ಎಂದು ಇಲಾಖೆಯಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ.</p>.<p>‘ವ್ಯೂ ಪಾಯಿಂಟ್ನ ರೇಲಿಂಗ್ ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಅದನ್ನು ನೂತನವಾಗಿ ನಿರ್ಮಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.ಒಂದೂವರೆಕಿಲೋಮೀಟರ್ ವ್ಯಾಪ್ತಿಯ ಗಿಡಗಂಟಿಗಳನ್ನು ಕತ್ತರಿಸಲಾಗುತ್ತದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ: </strong>ತಾಲ್ಲೂಕಿನ ಹಣಕೋಣದ ಕಿರು ಜಲಾಶಯದ ಸುತ್ತಮುತ್ತ ಸೂಕ್ತ ನಿರ್ವಹಣೆ ಇಲ್ಲದೇ ಪ್ರವಾಸಿಗರು ಬೇಸರಗೊಂಡಿದ್ದಾರೆ. ನಿಸರ್ಗದ ಸೊಬಗನ್ನು ಸವಿಯಲು ನಿರ್ಮಿಸಲಾದ ಪ್ರದೇಶವೀಗ ಶಿಥಿಲಾವಸ್ಥೆಗೆ ತಲುಪಿದೆ.</p>.<p>ಜಲಾಶಯದತ್ತ ಸಾಗಲು ಅಳವಡಿಸಿರುವ ಪ್ಲಾಟ್ಫಾರಂನ ರೇಲಿಂಗ್ ತುಕ್ಕು ಹಿಡಿದಿದೆ. ಅಲ್ಲದೇಒಂದೆರಡು ಕಡೆ ತುಂಡಾಗಿ ಬಿದ್ದಿದೆ. ಇಲ್ಲಿ ಪ್ರವಾಸಿಗರು ಹೆಜ್ಜೆ ಹಾಕುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕಿದೆ. ಉತ್ತಮ ಪ್ರವಾಸಿ ತಾಣವಾಗಲು ಅರ್ಹವಾಗಿರುವ ಈ ಸ್ಥಳದ ನಿರ್ವಹಣೆಯ ಬಗ್ಗೆ ಗಮನ ಹರಿಸಬೇಕು ಎನ್ನುವುದು ಪ್ರವಾಸಿಗರಆಗ್ರಹವಾಗಿದೆ.</p>.<p class="Subhead"><strong>45 ವರ್ಷಗಳ ಹಿಂದೆ ನಿರ್ಮಾಣ:</strong>1974– 75ನೇಸಾಲಿನಲ್ಲಿ ಈ ಕಿರು ಜಲಾಶಯವನ್ನು ನಿರ್ಮಾಣ ಮಾಡಲಾಗಿತ್ತು. ಹಣಕೋಣ ಭಾಗದ 3.98 ಹೆಕ್ಟೇರ್ ಜಮೀನಿಗೆ ಇಲ್ಲಿಯ ನೀರನ್ನು ಬಳಸಲಾಗುತ್ತಿದೆ. ಭತ್ತ, ಕಲ್ಲಂಗಡಿ ಬೆಳೆಗಳನ್ನು ಇಲ್ಲಿನ ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ.</p>.<p>ಜಲಾಶಯದಿಂದಾಗಿ ಈ ಭಾಗದಲ್ಲಿ ಅಂತರ್ಜಲದ ಮಟ್ಟ ಉತ್ತಮವಾಗಿದ್ದು, ಏಪ್ರಿಲ್–ಮೇ ತಿಂಗಳಿನಲ್ಲಿಯೂ ರೈತರಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಅವಕಾಶಗಳಿವೆ ಎನ್ನುತ್ತಾರೆ ಪ್ರವಾಸಿಗರಾದ ಸರೋಜಾ.</p>.<p class="Subhead"><strong>ಕುಂದು–ಕೊರತೆಗಳೇ ಹೆಚ್ಚು:</strong>ಕಾರವಾರದಿಂದ15ಕಿಲೋಮೀಟರ್ ದೂರದ ಹಣಕೋಣದ ಬಳಿ ಇರುವ ಈ ಕಿರು ಜಲಾಶಯವನ್ನು ಗುರುತಿಸಲು ಯಾವುದೇ ನಾಮಫಲಕವಿಲ್ಲ. ಸ್ಥಳೀಯರ ಬಳಿ ಮಾಹಿತಿ ಪಡೆದುಕೊಂಡೇ ಒಂದು ಕಿಲೋಮೀಟರ್ದೂರ ಕಾಲ್ನಡಿಗೆಯಲ್ಲಿ ಕ್ರಮಿಸಬೇಕು.</p>.<p class="Subhead">ಜಲಾಶಯದ ಮತ್ತೊಂದು ತುದಿಯಲ್ಲಿರುವ ವ್ಯೂ ಪಾಯಿಂಟ್, ಗಿಡಗಂಟಿಗಳಿಂದಲೇ ಮುಚ್ಚಿ ಹೋಗಿದೆ.ಯಾವುದೇ ಮೂಲಸೌಕರ್ಯಗಳಿಲ್ಲ. ಪ್ಲಾಸ್ಟಿಕ್ ಬಾಟಲಿಗಳು, ತಿಂಡಿ ಪೊಟ್ಟಣಗಳನ್ನು ಹಾಕಲು ಕಸದ ಬುಟ್ಟಿಯೂ ಇಲ್ಲ. ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡಲಾಗುತ್ತಿದೆ. ಹಾಗಾಗಿ ಪರಿಸರಕ್ಕೂ ಹಾನಿಯಾಗುತ್ತಿದೆ.ಹಾಗಾಗಿ ಈ ಸ್ಥಳವನ್ನು ಮತ್ತಷ್ಟು ಸುಂದರವಾಗಿಸಲು ಕಿರು ನೀರಾವರಿ ಇಲಾಖೆ ಗಮನ ಹರಿಸಬೇಕು ಎನ್ನುವುದು ಅವರ ಒತ್ತಾಯವಾಗಿದೆ.</p>.<p class="Subhead"><strong>‘ಏಪ್ರಿಲ್ನಲ್ಲಿ ಮತ್ತಷ್ಟು ದುರಸ್ತಿ’:</strong>‘ಹಣಕೋಣ ಕಿರು ಜಲಾಶಯವನ್ನು ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಇಲಾಖೆಯಿಂದ ಪ್ರತಿ ವರ್ಷಕ್ಕೊಮ್ಮೆ ನಿರ್ವಹಣೆ ಮಾಡಲಾಗುತ್ತದೆ. ಏಪ್ರಿಲ್ ತಿಂಗಳಿನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವ ಸಂದರ್ಭದಲ್ಲಿ ಮತ್ತಷ್ಟು ದುರಸ್ತಿ ಮಾಡಲಾಗುತ್ತದೆ’ ಎಂದು ಇಲಾಖೆಯಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮನೋಹರ್ ಪ್ರತಿಕ್ರಿಯಿಸಿದ್ದಾರೆ.</p>.<p>‘ವ್ಯೂ ಪಾಯಿಂಟ್ನ ರೇಲಿಂಗ್ ಶಿಥಿಲಗೊಂಡಿರುವುದು ಗಮನಕ್ಕೆ ಬಂದಿದೆ. ಅದನ್ನು ನೂತನವಾಗಿ ನಿರ್ಮಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.ಒಂದೂವರೆಕಿಲೋಮೀಟರ್ ವ್ಯಾಪ್ತಿಯ ಗಿಡಗಂಟಿಗಳನ್ನು ಕತ್ತರಿಸಲಾಗುತ್ತದೆ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>