<p><strong>ಜೊಯಿಡಾ (ಉತ್ತರ ಕನ್ನಡ):</strong>ಈ ಗ್ರಾಮಕ್ಕೆ ಹೋಗಲು ಕಚ್ಚಾ ರಸ್ತೆ ಇದೆ. ಮಳೆ ಬಂದರೆ ವಾಹನಗಳ ಸಂಚಾರವೇ ದುಸ್ತರವಾಗುತ್ತದೆ. ದಾರಿಗೆ ಮರ ಅಡ್ಡ ಬಿದ್ದರಂತೂ ಸಂಪರ್ಕ ಕಳೆದುಕೊಂಡಂತೆಯೇ ಆಗುತ್ತದೆ. ಯಾರಿಗಾದರೂ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಲಿ ಕಟ್ಟಲೇಬೇಕು.</p>.<p>ತಾಲ್ಲೂಕಿನ ‘ನಗರಿ’ ಗ್ರಾಮದದುಃಸ್ಥಿತಿಯಿದು. ಗ್ರಾಮಕ್ಕೆ ಕಾಡಿನ ಮಧ್ಯೆ ಸಾಗುವ ಕಚ್ಚಾರಸ್ತೆ ಮೇಲೆ 10 ದಿನಗಳ ಹಿಂದೆ ಬೃಹತ್ ಮರವೊಂದು ಬಿದ್ದಿತ್ತು. ಅದನ್ನುಅರಣ್ಯ ಇಲಾಖೆಯವರುಇನ್ನೂತೆರವು ಮಾಡಿಲ್ಲ. ಹೀಗಾಗಿ ವಾಹನ ಸಂಚಾರ ಸಾಧ್ಯವಾಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.</p>.<p>ಗ್ರಾಮದ ತೆರೆಮಳೆ ಎಂಬಲ್ಲಿನ ಲಕ್ಷ್ಮೀ ದೇಸಾಯಿ (85) ಎಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಪುತ್ರ ಪ್ರಭಾಕರ ದೇಸಾಯಿ ಶನಿವಾರ ಜೊಯಿಡಾದ ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಯಿತು.</p>.<p>ಕೋಲಿಗೆ ಕಂಬಳಿಯನ್ನು ಜೋಲಿಯಂತೆ ಕಟ್ಟಿ ಅದರಲ್ಲಿ ಅಮ್ಮನನ್ನು ಮಲಗಿಸಿದರು. ಬಳಿಕ ತಮ್ಮ ಪರಿಚಯಸ್ಥರ ಜೊತೆಗೂಡಿ ಹೆಗಲ ಮೇಲೆ ಹೊತ್ತು, ಸುಮಾರು ಎರಡು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಹೆಜ್ಜೆ ಹಾಕಿಮುಖ್ಯರಸ್ತೆಗೆ ತಲುಪಿದರು. ನಂತರ ಅಲ್ಲಿಂದ ವಾಹನದಲ್ಲಿ ಜೊಯಿಡಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು.</p>.<p>‘ಈ ಹಳ್ಳಿಯಲ್ಲಿ ನಾಲ್ಕು ಮನೆಗಳಿವೆ.ಡಾಂಬರು ರಸ್ತೆ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ 20 ವರ್ಷಗಳಿಂದ ಹಲವು ಬಾರಿ ಮನವಿ ನೀಡಲಾಗಿದೆ. ಆದರೂನಮ್ಮಸಮಸ್ಯೆಯನ್ನು ಯಾರೂ ಬಗೆಹರಿಸುತ್ತಿಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ಹೋಗಲು ಸಾಧ್ಯವಾಗುವುದೇ ಇಲ್ಲ. ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲೂಅವಕಾಶವಿಲ್ಲದಂತೆ ಮರ ಬಿದ್ದಿದೆ’ ಎಂದು ಪ್ರಭಾಕರ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪಂಚಾಯಿತಿಯು ಮರ ತೆಗೆಯಲು, ಅರಣ್ಯ ಇಲಾಖೆಗೆ ತಿಳಿಸಿರುವುದಾಗಿ ಹೇಳುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.</p>.<p><strong>*</strong><em>'ತೆರೆಮಳೆ ರಸ್ತೆಯಲ್ಲಿ ಬಿದ್ದಿರುವ ಮರ ತೆಗೆಯುವಂತೆ ಗ್ರಾಮ ಪಂಚಾಯ್ತಿಯಿಂದಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ '</em></p>.<p>– <em><strong>ನಬಿಲಾಲ್ ಇನಾಮ್ದಾರ, </strong>ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೊಯಿಡಾ (ಉತ್ತರ ಕನ್ನಡ):</strong>ಈ ಗ್ರಾಮಕ್ಕೆ ಹೋಗಲು ಕಚ್ಚಾ ರಸ್ತೆ ಇದೆ. ಮಳೆ ಬಂದರೆ ವಾಹನಗಳ ಸಂಚಾರವೇ ದುಸ್ತರವಾಗುತ್ತದೆ. ದಾರಿಗೆ ಮರ ಅಡ್ಡ ಬಿದ್ದರಂತೂ ಸಂಪರ್ಕ ಕಳೆದುಕೊಂಡಂತೆಯೇ ಆಗುತ್ತದೆ. ಯಾರಿಗಾದರೂ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಬೇಕೆಂದರೆ ಜೋಲಿ ಕಟ್ಟಲೇಬೇಕು.</p>.<p>ತಾಲ್ಲೂಕಿನ ‘ನಗರಿ’ ಗ್ರಾಮದದುಃಸ್ಥಿತಿಯಿದು. ಗ್ರಾಮಕ್ಕೆ ಕಾಡಿನ ಮಧ್ಯೆ ಸಾಗುವ ಕಚ್ಚಾರಸ್ತೆ ಮೇಲೆ 10 ದಿನಗಳ ಹಿಂದೆ ಬೃಹತ್ ಮರವೊಂದು ಬಿದ್ದಿತ್ತು. ಅದನ್ನುಅರಣ್ಯ ಇಲಾಖೆಯವರುಇನ್ನೂತೆರವು ಮಾಡಿಲ್ಲ. ಹೀಗಾಗಿ ವಾಹನ ಸಂಚಾರ ಸಾಧ್ಯವಾಗದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.</p>.<p>ಗ್ರಾಮದ ತೆರೆಮಳೆ ಎಂಬಲ್ಲಿನ ಲಕ್ಷ್ಮೀ ದೇಸಾಯಿ (85) ಎಂಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರ ಪುತ್ರ ಪ್ರಭಾಕರ ದೇಸಾಯಿ ಶನಿವಾರ ಜೊಯಿಡಾದ ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡಬೇಕಾಯಿತು.</p>.<p>ಕೋಲಿಗೆ ಕಂಬಳಿಯನ್ನು ಜೋಲಿಯಂತೆ ಕಟ್ಟಿ ಅದರಲ್ಲಿ ಅಮ್ಮನನ್ನು ಮಲಗಿಸಿದರು. ಬಳಿಕ ತಮ್ಮ ಪರಿಚಯಸ್ಥರ ಜೊತೆಗೂಡಿ ಹೆಗಲ ಮೇಲೆ ಹೊತ್ತು, ಸುಮಾರು ಎರಡು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿ ಹೆಜ್ಜೆ ಹಾಕಿಮುಖ್ಯರಸ್ತೆಗೆ ತಲುಪಿದರು. ನಂತರ ಅಲ್ಲಿಂದ ವಾಹನದಲ್ಲಿ ಜೊಯಿಡಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು.</p>.<p>‘ಈ ಹಳ್ಳಿಯಲ್ಲಿ ನಾಲ್ಕು ಮನೆಗಳಿವೆ.ಡಾಂಬರು ರಸ್ತೆ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ 20 ವರ್ಷಗಳಿಂದ ಹಲವು ಬಾರಿ ಮನವಿ ನೀಡಲಾಗಿದೆ. ಆದರೂನಮ್ಮಸಮಸ್ಯೆಯನ್ನು ಯಾರೂ ಬಗೆಹರಿಸುತ್ತಿಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಾಲ್ಕು ಚಕ್ರದ ವಾಹನ ಹೋಗಲು ಸಾಧ್ಯವಾಗುವುದೇ ಇಲ್ಲ. ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲೂಅವಕಾಶವಿಲ್ಲದಂತೆ ಮರ ಬಿದ್ದಿದೆ’ ಎಂದು ಪ್ರಭಾಕರ ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪಂಚಾಯಿತಿಯು ಮರ ತೆಗೆಯಲು, ಅರಣ್ಯ ಇಲಾಖೆಗೆ ತಿಳಿಸಿರುವುದಾಗಿ ಹೇಳುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.</p>.<p><strong>*</strong><em>'ತೆರೆಮಳೆ ರಸ್ತೆಯಲ್ಲಿ ಬಿದ್ದಿರುವ ಮರ ತೆಗೆಯುವಂತೆ ಗ್ರಾಮ ಪಂಚಾಯ್ತಿಯಿಂದಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇವೆ '</em></p>.<p>– <em><strong>ನಬಿಲಾಲ್ ಇನಾಮ್ದಾರ, </strong>ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>