<p><strong>ಶಿರಸಿ:</strong> ಕಳೆದ ಜುಲೈನಲ್ಲಿ ಅತಿವೃಷ್ಟಿಯಿಂದ ಪಾಂಡವರ ಹೊಳೆ ಉಕ್ಕೇರಿದ್ದರಿಂದ ಕೊಚ್ಚಿಹೋಗಿದ್ದ ಇಟಗುಳಿ ಸಮೀಪದ ತೂಗು ಸೇತುವೆಯ ಮರುನಿರ್ಮಾಣ ನಡೆದಿಲ್ಲ. ಇದರಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.</p>.<p>ಇಟಗುಳಿ ಗ್ರಾಮ ಪಂಚಾಯ್ತಿಯ ಕೊಪ್ಪ ಸಮೀಪ ಎರಡು ದಶಕದ ಹಿಂದೆ ನಿರ್ಮಿಸಲಾಗಿದ್ದ ತೂಗುಸೇತುವೆ ನದಿ ರಭಸಕ್ಕೆ ಮುರಿದು ಬಿದ್ದಿದೆ. ಸೇತುವೆ ಅವಶೇಷಗಳು ಈಗಲೂಹಾಗೆಯೆ ಉಳಿದುಕೊಂಡಿದೆ. ಮಳೆಗಾಲದಲ್ಲಷ್ಟೇ ಅಲ್ಲದೆ ಬೇಸಿಗೆಯಲ್ಲೂ ನದಿ ದಾಟಿ ಸಾಗುವುದು ಗ್ರಾಮಸ್ಥರಿಗೆ ಕಷ್ಟವಾಗಿದೆ.</p>.<p>ನೀರ್ನಳ್ಳಿ, ಇಡ್ತಳ್ಳಿ, ಶಿಂಗನಮನೆ, ಗುಬ್ಬಿಗದ್ದೆ ಸೇರಿದಂತೆ ಏಳಕ್ಕೂ ಹೆಚ್ಚು ಗ್ರಾಮಗಳಿಗೆ ಹುಲೇಕಲ್ ಸಂಪರ್ಕಿಸಲು ತೂಗುಸೇತುವೆ ಅನುಕೂಲವಾಗಿತ್ತು. ಗ್ರಾಮದ ವಿದ್ಯಾರ್ಥಿಗಳು ಹುಲೇಕಲ್ ಪ್ರೌಢಶಾಲೆಗೆ ತೆರಳಲು ದಾರಿ ಸುಗಮ ಮತ್ತು ಸಮೀಪವಾಗಿತ್ತು. ಅನೇಕ ಕೃಷಿಕರಿಗೂ ಜಮೀನುಗಳಿಗೆ ತೆರಳಲು ಅನುಕೂಲವನ್ನು ಸೇತುವೆ ಕಲ್ಪಿಸಿತ್ತು.</p>.<p>‘ಇಡ್ತಳ್ಳಿ, ಶಿಂಗನಮನೆ ಭಾಗದ ಗ್ರಾಮಸ್ಥರು ಹುಲೇಕಲ್ಗೆ ತೆರಳಲು ಮುಖ್ಯರಸ್ತೆಯಿಂದ ಸಾಗಿದರೆ 15 ಕಿ.ಮೀ. ದೂರ ಕ್ರಮಿಸಬೇಕಿದೆ. ತೂಗು ಸೇತುವೆ ಇದ್ದರೆ ಒಳ ರಸ್ತೆಯಲ್ಲಿ ಸಾಗಿದರೆ 6–7 ಕಿ.ಮೀ. ದೂರ ಕಡಿಮೆ ಆಗುತ್ತಿತ್ತು. ವಿದ್ಯಾರ್ಥಿಗಳು, ಕೃಷಿಕರಿಗೆ ಈ ಮಾರ್ಗ ಅಗತ್ಯವಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯೆ ಗೀತಾ ಭೋವಿ.</p>.<p>‘ನೂರಾರು ಜನರಿಗೆ ಅನುಕೂಲವಾಗಿರುವ ತೂಗುಸೇತುವೆಯನ್ನು ಮರು ನಿರ್ಮಿಸುವಂತೆ ಪ್ರವಾಸೋದ್ಯಮ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ವರ್ಷ ಕಳೆದರೂ ಮರುನಿರ್ಮಾಣಕ್ಕೆ ಪ್ರಯತ್ನ ನಡೆದಿಲ್ಲರುವುದು ಬೇಸರದ ಸಂಗತಿ’ ಎಂದರು.</p>.<p>‘ಮಕ್ಕಳು ಪ್ರೌಢಶಾಲೆಗೆ ತೆರಳಲು ಮುಖ್ಯರಸ್ತೆ ಮೂಲಕ ಬಸ್ನಲ್ಲಿ ಪ್ರಯಾಣಿಸಬೇಕಿದೆ. ತೂಗುಸೇತುವೆ ಇದ್ದರೆ ಸೈಕಲ್ ಮೂಲಕ ಸಾಗುತ್ತಿದ್ದರು. ಪ್ರಯಾಣದ ದೂರವೂ ಕಡಿಮೆ ಇತ್ತು. ಆದಷ್ಟು ಬೇಗನೆ ಸೇತುವೆ ಮರುನಿರ್ಮಾಣವಾಗಲಿ’ ಎಂಬುದು ಗ್ರಾಮಸ್ಥರಾದ ಪ್ರದೀಪ ಹೆಗಡೆ ಇನ್ನಿತರರ ಒತ್ತಾಯ.</p>.<p class="Subhead"><strong>ಪ್ರಸ್ತಾವ ಸಲ್ಲಿಕೆ:</strong>‘ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆ ತೂಗು ಸೇತುವೆ ಮರುನಿರ್ಮಾಣಕ್ಕೆ ₹25 ಲಕ್ಷಕ್ಕೂ ಹೆಚ್ಚು ಅನುದಾನದ ಅಗತ್ಯವಿದೆ. ಕಳೆದ ವರ್ಷವೇ ಮರುನಿರ್ಮಾಣಕ್ಕೆ ಅನುದಾನ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುಮತಿ ದೊರೆತದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಕಳೆದ ಜುಲೈನಲ್ಲಿ ಅತಿವೃಷ್ಟಿಯಿಂದ ಪಾಂಡವರ ಹೊಳೆ ಉಕ್ಕೇರಿದ್ದರಿಂದ ಕೊಚ್ಚಿಹೋಗಿದ್ದ ಇಟಗುಳಿ ಸಮೀಪದ ತೂಗು ಸೇತುವೆಯ ಮರುನಿರ್ಮಾಣ ನಡೆದಿಲ್ಲ. ಇದರಿಂದ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರಿಗೆ ಸಂಪರ್ಕಕ್ಕೆ ಅಡ್ಡಿಯಾಗಿದೆ.</p>.<p>ಇಟಗುಳಿ ಗ್ರಾಮ ಪಂಚಾಯ್ತಿಯ ಕೊಪ್ಪ ಸಮೀಪ ಎರಡು ದಶಕದ ಹಿಂದೆ ನಿರ್ಮಿಸಲಾಗಿದ್ದ ತೂಗುಸೇತುವೆ ನದಿ ರಭಸಕ್ಕೆ ಮುರಿದು ಬಿದ್ದಿದೆ. ಸೇತುವೆ ಅವಶೇಷಗಳು ಈಗಲೂಹಾಗೆಯೆ ಉಳಿದುಕೊಂಡಿದೆ. ಮಳೆಗಾಲದಲ್ಲಷ್ಟೇ ಅಲ್ಲದೆ ಬೇಸಿಗೆಯಲ್ಲೂ ನದಿ ದಾಟಿ ಸಾಗುವುದು ಗ್ರಾಮಸ್ಥರಿಗೆ ಕಷ್ಟವಾಗಿದೆ.</p>.<p>ನೀರ್ನಳ್ಳಿ, ಇಡ್ತಳ್ಳಿ, ಶಿಂಗನಮನೆ, ಗುಬ್ಬಿಗದ್ದೆ ಸೇರಿದಂತೆ ಏಳಕ್ಕೂ ಹೆಚ್ಚು ಗ್ರಾಮಗಳಿಗೆ ಹುಲೇಕಲ್ ಸಂಪರ್ಕಿಸಲು ತೂಗುಸೇತುವೆ ಅನುಕೂಲವಾಗಿತ್ತು. ಗ್ರಾಮದ ವಿದ್ಯಾರ್ಥಿಗಳು ಹುಲೇಕಲ್ ಪ್ರೌಢಶಾಲೆಗೆ ತೆರಳಲು ದಾರಿ ಸುಗಮ ಮತ್ತು ಸಮೀಪವಾಗಿತ್ತು. ಅನೇಕ ಕೃಷಿಕರಿಗೂ ಜಮೀನುಗಳಿಗೆ ತೆರಳಲು ಅನುಕೂಲವನ್ನು ಸೇತುವೆ ಕಲ್ಪಿಸಿತ್ತು.</p>.<p>‘ಇಡ್ತಳ್ಳಿ, ಶಿಂಗನಮನೆ ಭಾಗದ ಗ್ರಾಮಸ್ಥರು ಹುಲೇಕಲ್ಗೆ ತೆರಳಲು ಮುಖ್ಯರಸ್ತೆಯಿಂದ ಸಾಗಿದರೆ 15 ಕಿ.ಮೀ. ದೂರ ಕ್ರಮಿಸಬೇಕಿದೆ. ತೂಗು ಸೇತುವೆ ಇದ್ದರೆ ಒಳ ರಸ್ತೆಯಲ್ಲಿ ಸಾಗಿದರೆ 6–7 ಕಿ.ಮೀ. ದೂರ ಕಡಿಮೆ ಆಗುತ್ತಿತ್ತು. ವಿದ್ಯಾರ್ಥಿಗಳು, ಕೃಷಿಕರಿಗೆ ಈ ಮಾರ್ಗ ಅಗತ್ಯವಿದೆ’ ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯೆ ಗೀತಾ ಭೋವಿ.</p>.<p>‘ನೂರಾರು ಜನರಿಗೆ ಅನುಕೂಲವಾಗಿರುವ ತೂಗುಸೇತುವೆಯನ್ನು ಮರು ನಿರ್ಮಿಸುವಂತೆ ಪ್ರವಾಸೋದ್ಯಮ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ವರ್ಷ ಕಳೆದರೂ ಮರುನಿರ್ಮಾಣಕ್ಕೆ ಪ್ರಯತ್ನ ನಡೆದಿಲ್ಲರುವುದು ಬೇಸರದ ಸಂಗತಿ’ ಎಂದರು.</p>.<p>‘ಮಕ್ಕಳು ಪ್ರೌಢಶಾಲೆಗೆ ತೆರಳಲು ಮುಖ್ಯರಸ್ತೆ ಮೂಲಕ ಬಸ್ನಲ್ಲಿ ಪ್ರಯಾಣಿಸಬೇಕಿದೆ. ತೂಗುಸೇತುವೆ ಇದ್ದರೆ ಸೈಕಲ್ ಮೂಲಕ ಸಾಗುತ್ತಿದ್ದರು. ಪ್ರಯಾಣದ ದೂರವೂ ಕಡಿಮೆ ಇತ್ತು. ಆದಷ್ಟು ಬೇಗನೆ ಸೇತುವೆ ಮರುನಿರ್ಮಾಣವಾಗಲಿ’ ಎಂಬುದು ಗ್ರಾಮಸ್ಥರಾದ ಪ್ರದೀಪ ಹೆಗಡೆ ಇನ್ನಿತರರ ಒತ್ತಾಯ.</p>.<p class="Subhead"><strong>ಪ್ರಸ್ತಾವ ಸಲ್ಲಿಕೆ:</strong>‘ಇಟಗುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಂಡವರಹೊಳೆ ತೂಗು ಸೇತುವೆ ಮರುನಿರ್ಮಾಣಕ್ಕೆ ₹25 ಲಕ್ಷಕ್ಕೂ ಹೆಚ್ಚು ಅನುದಾನದ ಅಗತ್ಯವಿದೆ. ಕಳೆದ ವರ್ಷವೇ ಮರುನಿರ್ಮಾಣಕ್ಕೆ ಅನುದಾನ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಅನುಮತಿ ದೊರೆತದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>